ಅನಿವಾಸಿ ಕನ್ನಡಿಗರಿಗೆ ಆವೇಶ ಸಂಘಟನೆ ಅದೇ KCF(ಕರ್ನಾಟಕ ಕಲ್ಚರಲ್ ಫೆಡರೇಶನ್).
ಸೌದಿ ಅರೇಬಿಯಾ ಸಮಿತಿಯ ಅಧೀನದಲ್ಲಿರುವ ದಮ್ಮಾಮ್ ಝೋನಲ್ ವ್ಯಾಪ್ತಿಯ ಅಡಿಯಲ್ಲಿ ಕಾರ್ಯಚರಿಸುತ್ತಿರುವ KCF ಸಿಟಿ ಸೆಕ್ಟರ್ ಜುಬೈಲ್ ಹಲವಾರು ಸಾಂತ್ವನ ಚಟುವಟಿಕೆಗಳನ್ನು ನಡೆಸಿ
ಜನಮೆಚ್ಚುಗೆ ಗಳಿಸಿದೆ.
ಈಗಾಗಲೇ ಕಷ್ಟದಲ್ಲಿ ಸಿಲುಕಿರುವ ಹಲವಾರು ಕನ್ನಡಿಗರಿಗೆ ಆಹಾರ ಸಾಮಗ್ರಿಗಳು, ಕುಡಿಯುವ ನೀರಿನ ವ್ಯವಸ್ಥೆ ನೀಡುತ್ತಾ ಬಂದಿದೆ.
ಹಾಸನ ಮೂಲದ ಓರ್ವ ಹಿಂದೂ ಸಹೋದರೊಬ್ಬರರು ಕರೆ ಮಾಡಿ ತನಗೆ ಕೆಲಸವಿಲ್ಲದೆ ಕೆಲವು ತಿಂಗಳಾಯಿತೆಂದು,ಆಹಾರಕ್ಕಾಗಿ ಏನಾದರೂ ನೀಡಬೇಕು ಎಂಬ ಅಪೇಕ್ಷೆಯ ಹಿನ್ನಲೆಯಲ್ಲಿ ಅವರಿಗೆ ಇಂದು ಕಿಟ್ ವಿತರಿಸಲಾಯಿತು. ಸಂಘಟನೆಗೆ ಬಹಳ ಖುಷಿಯಿಂದ ಹಾರೈಸಿದರು.
ಈ ಸಂದರ್ಭದಲ್ಲಿ ಸೆಕ್ಟರ್ ಸಾಂತ್ವನ ವಿಭಾಗದ ನಾಯಕರಾದ ನೌಫಲ್ ಮುಲ್ಕಿ, ಸಫ್ವಾನ್ ಮುಕ್ಕ ರವರು ಸಹಕರಿಸಿದರು.