ದಮಾಮ್: ಸೌದಿಯಲ್ಲಿ ಕೋವಿಡ್-19 ಹರಡುವುದನ್ನು ತಡೆಗಟ್ಟುವ ಆರೋಗ್ಯ ಸುರಕ್ಷತಾ ಕ್ರಮದ ಭಾಗವಾಗಿ ಈ ವರ್ಷದ ರಮಳಾನ್ ನಲ್ಲಿ ತರಾವೀಹ್ ಮತ್ತು ಈದ್ ಅಲ್-ಫಿತರ್ ನಮಾಝ್ಗಳನ್ನು ಮನೆಯಲ್ಲೇ ನಿರ್ವಹಿಸಬೇಕು ಎಂದು ಸೌದಿ ಗ್ರ್ಯಾಂಡ್ ಮುಫ್ತಿ ಶೈಖ್ ಅಬ್ದುಲ್ ಅಝೀಝ್ ಆಲು-ಶೈಖ್ ಹೇಳಿದ್ದಾರೆ.
ಪವಿತ್ರ ರಮಝಾನ್ ಇನ್ನು ಕೆಲವೇ ದಿನಗಳ ಒಳಗೆ ಪ್ರಾರಂಭಗೊಳ್ಳುವ ಹಿನ್ನೆಲೆಯಲ್ಲಿ ಈ ವಿಷಯ ಸಂಬಂಧಿಸಿ ಆವರು ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಸಕ್ತ ಪರಿಸ್ಥಿತಿ ಮುಂದುವರಿದರೆ ಮಸೀದಿಗಳು ಮತ್ತು ಈದ್ಗಾಗಳಲ್ಲಿ ಈದ್ ನಮಾಝ್ ನಿರ್ವಹಣೆ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಖುತ್ಬಾ (ಪ್ರಭಾಷಣ) ಇಲ್ಲದೆ ಮನೆಯಲ್ಲಿಯೇ ಈದ್ ನಮಾಝ್ ನಿರ್ವಹಿಸಬೇಕು ಎಂದು ಅವರು ಹೇಳಿದರು.
“ತರಾವೀಹ್ ನಮಾಝ್ ಕೇವಲ ಎರಡು ಹರಮ್ ಮಸೀದಿಗಳಲ್ಲಿ ಮಾತ್ರ ನಿರ್ವಹಿಸಲ್ಪಡಲಿದೆ. ಉಳಿದ ಮಸೀದಿಗಳಲ್ಲಿ ತರಾವೀಹ್ ಜಮಾಅತ್ ಇರುವುದಿಲ್ಲ” ಎಂದು ಇಸ್ಲಾಮಿಕ್ ಧಾರ್ಮಿಕ ಖಾತೆಯ ಸಚಿವ ಅಬ್ದುಲ್ ಲತೀಫ್ ಬಿನ್ ಅಬ್ದುಲ್ ಅಝೀಝ್ ಅಲ್-ಶೈಖ್ ಮಾಹಿತಿ ನೀಡಿದ್ದರು.
ಎರಡೂ ಹರಮ್ ಮಸೀದಿಗಳಿಗೆ ಪ್ರವೇಶಿಸಲು ಹೊರಗಿನವರಿಗೆ ಯಾವುದೇ ಅವಕಾಶವಿಲ್ಲ. ಭದ್ರತಾ ಸಿಬ್ಬಂದಿ, ಸಚಿವಾಲಯದ ಕೆಲಸಗಾರರು ಮತ್ತು ಹರಮ್ನ ಇತರ ಸೇವಕರಿಗೆ ಮಾತ್ರ ಪ್ರವೇಶ ಲಭ್ಯವಿದೆ.
ಪ್ರಸಕ್ತ, ದೇಶದ ಇತರ ಮಸೀದಿಗಳಲ್ಲಿ ಕೇವಲ ಆಝಾನ್ ಮಾತ್ರ ಮೊಳಗುತ್ತಿದೆ. ಜಮಾಅತ್ ನಮಾಝನ್ನು ನಿಲ್ಲಿಸಲಾಗಿದೆ. ಕೋವಿಡ್ 19 ದೇಶದಿಂದ ಸಂಪೂರ್ಣವಾಗಿ ನಿರ್ನಾಮಗೊಂಡರೆ ಮಾತ್ರ ಮಸೀದಿಗಳಲ್ಲಿ ಜಮಾಅತನ್ನು ಪುನರಾರಂಭಿಸಲಾಗುತ್ತದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು