ದೇಶದ ಹಿತಕ್ಕಾಗಿ ಜಾರಿ ಮಾಡಿದ 21ದಿನದ ಲಾಕ್ ಡೌನ್ ಕಾರಣದಿಂದ ಒಪ್ಪೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗುತ್ತಿವೆ.
ಸಂಘ ಸಂಸ್ಥೆಗಳು ಕೊಡುಗೈ ದಾನಿಗಳು ಸಹಕಾರ ನೀಡಿದರೂ ದಿನ ಸಂಬಳ ಪಡೆಯುವ ಮದ್ಯಮ ವರ್ಗವೂ ಇವತ್ತು ಹಸಿವಿನಿಂದ ಕಂಗೆಟ್ಟಿವೆ.
ನಮ್ಮ ದೇಶದಲ್ಲಿ ಹಸಿವಿನಿಂದ ಮರಣ ಹೊಂದಿದ ಸಂಖ್ಯೆ ಹೆಚ್ಚುತ್ತಿವೆ.
ಹೇಗಾದರೂ ಏಪ್ರಿಲ್ 14ರ ನಂತರವಾದರೂ ದುಡಿದು ಕುಟುಂಬ ಸಾಗಿಸಬಹುದು ಅನ್ನುವ ನಿರೀಕ್ಷೆಯಲ್ಲಿದ್ದ ಜನರಿಗೆ ಮತ್ತೆ 30ರ ತನಕದ ಲಾಕ್ ಡೌನ್ ಗಾಯದ ಮೇಲೆ ಬರೆ ಎಳೆಂದತಾಗಿವೆ.
ಆದರಿಂದ ಹಸಿವು ಮುಕ್ತ ಯೋಜನೆಯೊಂದಿಗೆ
ಶೀಘ್ರವಾಗಿ ಆಹಾರ ಕಿಟ್ ವಿತರಿಸುವಂತೆ ವಿನಂತಿಸಿದ್ದಾರೆ.
ಈಗಾಗಲೇ ಸೊಸೈಟಿ ಮೂಲಕ ಅಕ್ಕಿ ದೊರಕಿದ್ದು ಉಳಿದಂತೆ ಒಂದು ತಿಂಗಳಿಗೆ ಬೇಕಾಗಿರುವ
ಸಕ್ಕರೆ,ಚಾ ಹುಡಿ, ಮೆನಸು, ಎಣ್ಣೆ, ಉಪ್ಪು ಸೇರಿಂದಂತೆ ಪದಾರ್ಥಗಳಿಗೆ ಬೇಕಾದ ಕಾಳು ಬೀಜಗಳು ಒಳಗೊಂಡ ಆಹಾರ ಕಿಟ್ಟನ್ನು ಕೂಡಲೇ ವಿತರಿಸುವಂತೆ ವಿನಂತಿಸಿದ್ದಾರೆ.
ಇದಕ್ಕಾಗಿ ಬೇಕಾಗಿರುವ ಯೋಜನೆ ಸಿದ್ದಗೊಳಿಸುವಂತೆ ಹಾಗೂ ಪ್ರತಿದಿನ ಔಷದಿ ಉಪಯೋಗಿಸುವವರಿಗೆ ವೈದ್ಯರ ಪತ್ರದೊಂದಿಗೆ ಸರಕಾರದಿಂದ ಉಚಿತ ಔಷದಿ ನೀಡುವಂತೆಯೂ ಪತ್ರದಲ್ಲಿ ಕೋರಿದ್ದಾರೆ. ಈ ಬಗ್ಗೆ ಅಧಿಕಾರಿ ಸಂಸದರು ಸಚಿವರು ಶಾಸಕರ ಗಮನಕ್ಕೆ ತರುವುದಾಗಿ ತಿಳಿಸಿರುತ್ತಾರೆ.
ಕೊರೋನಾ ಕೋವಿಡ್19 ತಡೆಗಟ್ಟಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರಯತ್ನಗಳು ಶ್ಲಾಘನೀಯ. ಆದರೆ ಮತ್ತೆ ಮುಂದುವರಿದ ಲಾಕ್ ಡೌನ್ ನಿಂದ ಮತ್ತಷ್ಟು ಜನರು ಹಸಿವಿನಿಂದ ತೊಂದರೆ ಅನುಭವಿಸಲಿದ್ದಾರೆ ಅದ್ದರಿಂದ ರಾಜ್ಯದಲ್ಲಿ ಪ್ರತೀ ಅರ್ಹ ಕುಟುಂಬಕ್ಕೂ ಆಹಾರ ಕಿಟ್ ವಿತರಿಸುವಂತೆ ಎಸ್.ಕೆ.ಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬಾಳಿಲ ಅವರು ಈಮೈಲ್, ಟ್ವಿಟ್ಟರ್ ಹಾಗೂ ಆಪ್ತ ಕಾರ್ಯದರ್ಶಿಗಳ ಮೂಲಕ ಮನವಿ ಮಾಡಿದ್ದಾರೆ.















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ