ಮನಾಮ: ಬಹ್ರೇನ್ನ ವಲಸಿಗರಿಗೆ ಸಂತೋಷದ ಸುದ್ದಿ. ಎಲ್ಲರ ವಿದ್ಯುತ್ ಮತ್ತು ನೀರಿನ ಬಿಲ್ಗಳನ್ನು ಮೂರು ತಿಂಗಳವರೆಗೆ ಸರಕಾರವೇ ಪಾವತಿಸಲಿದೆ.
ಕೋವಿಡ್ನ ಪರಿಣಾಮವಾಗಿ ಉಂಟಾಗುವ ಆರ್ಥಿಕ ಪರಿಣಾಮವನ್ನು ಸರಿದೂಗಿಸಲು ಏಪ್ರಿಲ್ನಿಂದ ಮೂರು ತಿಂಗಳವರೆಗೆ ವಿದ್ಯುತ್ ಮತ್ತು ನೀರಿನ ಬಿಲ್ಗಳನ್ನು ಯಾರೂ ಪಾವತಿಸಬೇಕಾಗಿಲ್ಲ ಎಂದು ಸರ್ಕಾರ ನಿರ್ಧರಿಸಿದೆ.
ಹಲವಾರು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಲಾಗಿದೆ. ಕೋವಿಡ್ -19 ಕಾಯಿಲೆಯಿಂದ ಉಂಟಾಗುವ ಬಿಕ್ಕಟ್ಟನ್ನು ನಿಭಾಯಿಸಲು ವಿತ್ತ ಸಚಿವ ಶೈಖ್ ಸಲ್ಮಾನ್ ಬಿನ್ ಖಾಲಿದ್ ಅಲ್ ಖಲೀಫಾ ಪ್ರತಿದಿನ 430 ಕೋಟಿ ದಿನಾರ್ನ ಆರ್ಥಿಕ ಪ್ಯಾಕೇಜನ್ನು ಪ್ರಕಟಿಸಿದ್ದಾರೆ.
ವಲಸಿಗರು ಸೇರಿದಂತೆ ದೇಶದ ಜನರಿಗೆ ಅನುಕೂಲವಾಗುವಂತಹ ಹಲವಾರು ನಿರ್ಧಾರಗಳನ್ನು ಸಚಿವರು ಘೋಷಿಸಿದ್ದಾರೆ.
- ಏಪ್ರಿಲ್ ನಿಂದ ಮೂರು ತಿಂಗಳ ವರೆಗೆ ಎಲ್ಲಾ ವ್ಯಕ್ತಿಗಳ ಮತ್ತು ಸಂಸ್ಥೆಗಳ ವಿದ್ಯುತ್ ಮತ್ತು ನೀರಿನ ಬಿಲ್ಗಳನ್ನು ಸರಕಾರವು ಪಾವತಿಸಲಿದೆ.
- ಈ ಮೂರು ತಿಂಗಳಲ್ಲಿ ಪುರಸಭೆ ಮತ್ತು ಪ್ರವಾಸೋದ್ಯಮ ಶುಲ್ಕವನ್ನು ವಿಧಿಸಲಾಗುವುದಿಲ್ಲ.
- ಖಾಸಗಿ ಕೈಗಾರಿಕಾ ಭೂಮಿಯ ಬಾಡಿಗೆಯನ್ನೂ ಬಿಡಲಿದೆ.
- ಸಾಲ ಮರುಪಾವತಿ ಅವಧಿಯನ್ನು ಆರು ತಿಂಗಳವರೆಗೆ ಮುಂದೂಡಲು ಮತ್ತು ಹೆಚ್ಚುವರಿ ಸಾಲಗಳನ್ನು ಒದಗಿಸಲು ಬ್ಯಾಂಕುಗಳಿಗೆ ಸಹಾಯ ಮಾಡಲು ಸೆಂಟ್ರಲ್ ಬ್ಯಾಂಕ್ ಆಫ್ ಬಹ್ರೈನ್ 370 ಕೋಟಿಗಳ ಪ್ಯಾಕೇಜ್ ಅನ್ನು ಜಾರಿಗೆ ತರಲಿದೆ.
- ಸಂಕಷ್ಟಕ್ಕೀಡಾದ ಸಂಸ್ಥೆಗಳಿಗೆ ಸಹಾಯವಾಗಲು, ಸಾಲಗಳನ್ನು ಪುಣರ್ ಕ್ರಮೀಕರಿಸಲು ಲೇಬರ್ ಫಂಡ್ ಯೋಜನೆಯನ್ನು ಉಪಯೋಗಿಸಲಾಗುವುದು.
- ಲಿಕ್ವಿಡ್ ಫಂಡ್ ಅನ್ನು ಇಮ್ಮಡಿಗೊಳಿಸಿ, 200 ಮಿಲಿಯನ್ ದಿನಾರ್ಗಳಾಗಿ ದ್ವಿಗುಣಗೊಳಿಸಲು ಯೋಜನೆ ರೂಪಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮರುಪರಿಶೀಲಿಸುವಂತೆ ಕೆಸಿಎಫ್ ಆಗ್ರಹ
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ