ಮನಾಮ: ಬಹ್ರೇನ್ನ ವಲಸಿಗರಿಗೆ ಸಂತೋಷದ ಸುದ್ದಿ. ಎಲ್ಲರ ವಿದ್ಯುತ್ ಮತ್ತು ನೀರಿನ ಬಿಲ್ಗಳನ್ನು ಮೂರು ತಿಂಗಳವರೆಗೆ ಸರಕಾರವೇ ಪಾವತಿಸಲಿದೆ.
ಕೋವಿಡ್ನ ಪರಿಣಾಮವಾಗಿ ಉಂಟಾಗುವ ಆರ್ಥಿಕ ಪರಿಣಾಮವನ್ನು ಸರಿದೂಗಿಸಲು ಏಪ್ರಿಲ್ನಿಂದ ಮೂರು ತಿಂಗಳವರೆಗೆ ವಿದ್ಯುತ್ ಮತ್ತು ನೀರಿನ ಬಿಲ್ಗಳನ್ನು ಯಾರೂ ಪಾವತಿಸಬೇಕಾಗಿಲ್ಲ ಎಂದು ಸರ್ಕಾರ ನಿರ್ಧರಿಸಿದೆ.
ಹಲವಾರು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಲಾಗಿದೆ. ಕೋವಿಡ್ -19 ಕಾಯಿಲೆಯಿಂದ ಉಂಟಾಗುವ ಬಿಕ್ಕಟ್ಟನ್ನು ನಿಭಾಯಿಸಲು ವಿತ್ತ ಸಚಿವ ಶೈಖ್ ಸಲ್ಮಾನ್ ಬಿನ್ ಖಾಲಿದ್ ಅಲ್ ಖಲೀಫಾ ಪ್ರತಿದಿನ 430 ಕೋಟಿ ದಿನಾರ್ನ ಆರ್ಥಿಕ ಪ್ಯಾಕೇಜನ್ನು ಪ್ರಕಟಿಸಿದ್ದಾರೆ.
ವಲಸಿಗರು ಸೇರಿದಂತೆ ದೇಶದ ಜನರಿಗೆ ಅನುಕೂಲವಾಗುವಂತಹ ಹಲವಾರು ನಿರ್ಧಾರಗಳನ್ನು ಸಚಿವರು ಘೋಷಿಸಿದ್ದಾರೆ.
- ಏಪ್ರಿಲ್ ನಿಂದ ಮೂರು ತಿಂಗಳ ವರೆಗೆ ಎಲ್ಲಾ ವ್ಯಕ್ತಿಗಳ ಮತ್ತು ಸಂಸ್ಥೆಗಳ ವಿದ್ಯುತ್ ಮತ್ತು ನೀರಿನ ಬಿಲ್ಗಳನ್ನು ಸರಕಾರವು ಪಾವತಿಸಲಿದೆ.
- ಈ ಮೂರು ತಿಂಗಳಲ್ಲಿ ಪುರಸಭೆ ಮತ್ತು ಪ್ರವಾಸೋದ್ಯಮ ಶುಲ್ಕವನ್ನು ವಿಧಿಸಲಾಗುವುದಿಲ್ಲ.
- ಖಾಸಗಿ ಕೈಗಾರಿಕಾ ಭೂಮಿಯ ಬಾಡಿಗೆಯನ್ನೂ ಬಿಡಲಿದೆ.
- ಸಾಲ ಮರುಪಾವತಿ ಅವಧಿಯನ್ನು ಆರು ತಿಂಗಳವರೆಗೆ ಮುಂದೂಡಲು ಮತ್ತು ಹೆಚ್ಚುವರಿ ಸಾಲಗಳನ್ನು ಒದಗಿಸಲು ಬ್ಯಾಂಕುಗಳಿಗೆ ಸಹಾಯ ಮಾಡಲು ಸೆಂಟ್ರಲ್ ಬ್ಯಾಂಕ್ ಆಫ್ ಬಹ್ರೈನ್ 370 ಕೋಟಿಗಳ ಪ್ಯಾಕೇಜ್ ಅನ್ನು ಜಾರಿಗೆ ತರಲಿದೆ.
- ಸಂಕಷ್ಟಕ್ಕೀಡಾದ ಸಂಸ್ಥೆಗಳಿಗೆ ಸಹಾಯವಾಗಲು, ಸಾಲಗಳನ್ನು ಪುಣರ್ ಕ್ರಮೀಕರಿಸಲು ಲೇಬರ್ ಫಂಡ್ ಯೋಜನೆಯನ್ನು ಉಪಯೋಗಿಸಲಾಗುವುದು.
- ಲಿಕ್ವಿಡ್ ಫಂಡ್ ಅನ್ನು ಇಮ್ಮಡಿಗೊಳಿಸಿ, 200 ಮಿಲಿಯನ್ ದಿನಾರ್ಗಳಾಗಿ ದ್ವಿಗುಣಗೊಳಿಸಲು ಯೋಜನೆ ರೂಪಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ