janadhvani

Kannada Online News Paper

ಕೊಯಿಲ ಸುನ್ನಿ ಸೆಂಟರ್ ನಲ್ಲಿ ಮೌಲೂದ್ ಮಜ್ಲೀಸ್ ಹಾಗೂ ಮಾಸಿಕ ಸ್ವಲಾತ್

ಬಡಗನ್ನೂರು : ಸೆಯ್ಯದ್ ಫಝಲ್ ಕೊಯಮ್ಮ ಕುರತ್ ತಂಙಳ್ ರವರ ನಿರ್ದೇಶನದ ಪ್ರಕಾರ ದೇಶ ವಿದೇಶಗಳಲ್ಲಿ ವ್ಯಾಪಕವಾಗಿ ಹರಡಿರುವ ಕೊರೋನ ಎಂಬ ಮಾರಾಣಾಂತಿಕ ರೋಗದಿಂದ ರಕ್ಷೆ ಹೊಂದಲು ಮಂಕೂಸ್ ಮೌಲೀದ್ ಹಾಗೂ ವಿಶೇಷ ಪ್ರಾರ್ಥನಾ ಮಜ್ಲೀಸ್ ಬಹುಮಾನ್ಯರಾದ ಅಬ್ದುಲ್ ಅಝೀಝ್ ಮಿಸ್ಬಾಹಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು.

ವೇದಿಕೆಯಲ್ಲಿ ಪಾಲಡ್ಕ ಖತೀಬ್ ಹಾಶಿರ್ ಸಖಾಫಿ ಹಾಗೂ SYS. SSF ಹಾಗೂ ಮುಸ್ಲಿಂ ಜಮಾಹತ್ ಸದಸ್ಯರು ಉಪಸ್ಥಿತರಿದ್ದರು.