janadhvani

Kannada Online News Paper

ಮಾರ್ಚ್ 31 ದ.ಕ ಜಿಲ್ಲಾ ಏಕದಿನ ಕ್ಯಾಂಪ್ @ ಅಡ್ಯಾರ್ ಕಣ್ಣೂರ್: ಸ್ಥಳೀಯ ಸ್ವಾಗತ ಸಮಿತಿ ರಚನೆ

ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಅಡ್ಯಾರ್ ಕಣ್ಣೂರಿನಲ್ಲಿ ಮಾರ್ಚ್ 31ರಂದು ನಡೆಸಲಾಗುವ ಐತಿಹಾಸಿಕ ಜಿಲ್ಲಾ ಏಕದಿನ ಕ್ಯಾಂಪ್ ನ ಭಾಗವಾಗಿ ಸ್ಥಳೀಯ ಸ್ವಾಗತ ಸಮಿತಿ ರೂಪೀಕರಣ ಸಭೆಯು ಅಬ್ದುಲ್ ಖಾದರ್ (ಬಾವಾಕ) ರವರ ಅಧ್ಯಕ್ಷತೆಯಲ್ಲಿ ಎಸ್.ವೈ.ಎಸ್, ಎಸ್ಸೆಸ್ಸೆಫ್ ಆಫೀಸ್ ಅಡ್ಯಾರ್ ಕಣ್ಣೂರಿನಲ್ಲಿ ನಡೆಯಿತು.

ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ತೌಸೀಫ್ ಸ‌ಅದಿ ಹರೇಕಳ ಸಭೆಯನ್ನು ಉದ್ಘಾಟಿಸಿದರು. ಜಿಲ್ಲಾ ಕೋಶಾಧಿಕಾರಿ ಮಹಮ್ಮದ್ ಅಲಿ ತುರ್ಕಳಿಕೆ ಕ್ಯಾಂಪ್ ಕುರಿತ ಸವಿಸ್ತಾರ ಮಾಹಿತಿ ನೀಡಿದರು.

ಜಿಲ್ಲಾ ಕಾರ್ಯದರ್ಶಿ ರಶೀದ್ ಹಾಜಿ ವಗ್ಗ ಶುಭ ಹಾರೈಸಿದರು. ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಬೆರ್ಕಳ, ಜಿಲ್ಲಾ ಕಾರ್ಯದರ್ಶಿ ರಫೀಕ್ ಸುರತ್ಕಲ್, ಜಿಲ್ಲಾ ನಾಯಕರಾದ ಹಕೀಂ ಕಳಂಜಿಬೈಲ್, ಮುಸ್ತಫಾ ಉರುವಾಲ್‌ಪದವು, ಸುಹೈಲ್ ಹತ್ತನೇ ಮೈಲ್, ಇಕ್ಬಾಲ್ ಮಾಚಾರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸ್ಥಳೀಯ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

ಚೇರ್ಮೆನ್ – ಝುಬೈರ್ ಬೋರುಗುಡ್ಡೆ
ವೈಸ್ ಚೇರ್ಮೆನ್- ಅಬೂಬಕ್ಕರ್ ಹಾಜಿ, ಇಸ್‌ಹಾಕ್ ತಂಙಳ್, ಸಲಾಮ್ ಕೆ.ಎಸ್, ಕೆರೀಂ

ಜನರಲ್ ಕನ್ವೀನರ್- ಅಬ್ದುಲ್ ಮಜೀದ್,

ಕನ್ವೀನರ್ಸ್- ಬಿ.ಅಬ್ದುಲ್ ಜಬ್ಬಾರ್ ಬೀಡು, ಹಂಝ, ಕೆ. ಮಹಮ್ಮದ್, ಯಾಕೂಬ್ ಬೋರುಗುಡ್ಡೆ,

ಕೋಶಾಧಿಕಾರಿ ಅಬ್ದುಲ್ ಖಾದರ್(ಬಾವಾಕ)

ನಿರ್ವಹಣಾ ಕಾರ್ಯದರ್ಶಿ- ರಝಾಕ್,

ಸ್ವಯಂಸೇವಕ ನಾಯಕರು- ಲತೀಪ್, ಉನೈಸ್

ಸದಸ್ಯರು – ಬದ್ರುದ್ದೀನ್, ಹಂದಾನ್, ಸಲಾಮತ್, ಇಮ್ರಾನ್, ಇಬ್ರಾಹಿಂ ಖಲೀಲ್, ಶಿಹಾಬುದ್ದೀನ್, ಸಿರಾಜ್, ಹಮೀದ್,

ಜಿಲ್ಲಾ ಕ್ಯಾಂಪ್ ಕನ್ವೀನರ್ ನವಾಝ್ ಸಖಾಫಿ ಅಡ್ಯಾರ್ ಪದವು ಸ್ವಾಗತಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ ಧನ್ಯವಾದವಿತ್ತರು.