ಕುವೈತ್ ಸಿಟಿ: ಭಾರತ ಮತ್ತು ಪೂರ್ವ ತುರ್ಕಿಸ್ಥಾನದಲ್ಲಿ ಮುಸ್ಲಿಮರ ವಿರುದ್ಧದ ತಾರತಮ್ಯ ನೀತಿಯನ್ನು ತಡೆಯುವಂತೆ ಕುವೈತ್ ಸಂಸತ್ತಿನ ಸದಸ್ಯರು ಆಗ್ರಹಿಸಿದ್ದಾರೆ. ಕುವೈತ್ ಸಂಸತ್ತಿನ ಸದಸ್ಯರು ಜಂಟಿ ಹೇಳಿಕೆ ನೀಡಿ ಈ ಬಗ್ಗೆ ಒತ್ತಾಯಿಸಿದ್ದಾರೆ.
27 ಸಂಸದರು ಹೇಳಿಕೆಗೆ ಸಹಿ ಹಾಕಿದ್ದು, ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಂಸದರು, ಕುವೈತ್ ಸರಕಾರ ಮತ್ತು ಸಂಸದೀಯ ಸಮಿತಿಗಳಿಗೆ ಮನವಿ ಮಾಡಿದ್ದಾರೆ. ಭಾರತದ ಸಹೋದರರೊಂದಿಗೆ ಐಕ್ಯಮತ್ಯ ವ್ಯಕ್ತಪಡಿಸುವಂತೆ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಈ ವಿಷಯದ ಕುರಿತು ಧ್ವನಿ ಎತ್ತಬೇಕೆಂದು ಒತ್ತಾಯಿಸಿದ್ದಾರೆ.






