ದಮಾಮ್: ಸುನ್ನೀ ಐಕ್ಯತೆ ನನಸಾಗಲಿದೆ ಎಂದು ಸಮಸ್ಥ ಕೇರಳ ಜಮೀಯತುಲ್ ಉಲೆಮಾದ (ಇ.ಕೆ. ವಿಭಾಗ) ಪ್ರಧಾನ ಕಾರ್ಯದರ್ಶಿ ಪ್ರೊ.ಕೆ.ಆಲಿಕುಟ್ಟಿ ಮುಸ್ಲಿಯಾರ್ ಹೇಳಿದ್ದಾರೆ.ಈ ಮೊದಲು ಶರೀಯತ್ ವಿವಾದದ ಸಂದರ್ಭದಲ್ಲಿ ಎರಡು ಲೀಗ್ಗಳು ಒಗ್ಗೂಡಿದಂತೆ, ಪೌರತ್ವ ತಿದ್ದುಪಡಿ ಕಾನೂನನ್ನು ವಿರೋಧಿಸಲು ಒಗ್ಗಟ್ಟಾಗಿ ಮುಂದೆ ಸಾಗುತ್ತಿದ್ದೇವೆ ಎಂದು ಅವರು ಹೇಳಿದರು.
ಸುನ್ನಿ ಐಕ್ಯತೆ ಅರಳಬೇಕು ಎಂಬುದು ಬಯಕೆಯಾಗಿದೆ. ಇದಕ್ಕಾಗಿ ಪ್ರಯತ್ನಗಳು ನಡೆಯುತ್ತಿದ್ದು, ಪರಿಸ್ಥಿತಿ ಬಂದಾಗ ಏಕತೆ ಪೂರ್ಣಗೊಳ್ಳಲಿದೆ. ಇದೇ ರೀತಿಯ ಸಂದಿಗ್ಧ ಸಂದರ್ಭದಲ್ಲಿ ಎರಡು ಲೀಗ್ಗಳು ಒಂದಾಗಿದ್ದವು. ಈಗ ಅದೇ ರೀತಿಯ ಸಮಸ್ಯೆ ಕಾಡುತ್ತಿದೆ. ಗಂಭೀರ ವಿಷಯವಾಗಿರುವುದರಿಂದ ಒಟ್ಟಿಗೆ ಸೇರುವ ಸಾಧ್ಯತೆ ಹೆಚ್ಚು. ಪೌರತ್ವ ಕಾನೂನಿನ ತಿದ್ದುಪಡಿಯ ಹಿನ್ನೆಲೆಯಲ್ಲಿ ಸೌದಿಯಲ್ಲಿ ನಡೆಯುತ್ತಿರುವ ಘಟನೆಗಳನ್ನು ವಿವರಿಸಲು ದಮ್ಮಾಮ್ ಮೀಡಿಯಾ ಫೋರಂನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರೊ.ಅಲಿಕುಟ್ಟಿ ಮುಸ್ಲಿಯಾರ್ ಮಾತನಾಡುತ್ತಿದ್ದರು.






