ಕಾಪು: ಹಿಂದಿನ ನಾಯಕರ ಅನುಭವವನ್ನು ಹೊಸ ತಲೆಮಾರುಗಳಿಗೆ ಪರಿಚಯಿಸುವ ಉದ್ದೇಶದಿಂದ ಎಸ್ಸೆಸ್ಸೆಫ್ ಕಾಪು ಡಿವಿಷನ್ ಸಮಿತಿಯು ಹಳೆ ಬೇರು ಹೊಸ ಚಿಗುರು ಕಾರ್ಯಕ್ರಮ ವನ್ನು ಅಕ್ಟೋಬರ್19 ರಂದು ಶನಿವಾರ ಸಂಜೆ 7 ಗಂಟೆಗೆ ಸರಿಯಾಗಿ ಕಾಪು ಜೇಸೀ ಭವನದಲ್ಲಿ ಡಿವಿಷನ್ ಅಧ್ಯಕ್ಷರಾದ ಶಾಹುಲ್ ಹಮೀದ್ ನ ಈಮಿ ಯವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಧ್ಯಕ್ಷರಾದ ಅಹ್ಮದ್ ಶಬೀರ್ ಸಖಾಫಿ ಉದ್ಘಾಟಿಸುವರು. ಉಡುಪಿ ಜಿಲ್ಲಾ ಮುಸ್ಲಿಂ ಜಮಾತ್ ಕಾರ್ಯದರ್ಶಿ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ರವರು ಮುಖ್ಯ ಭಾಷಣ ಮಾಡಲಿರುವರು. ಸಂದೇಶ ಭಾಷಣವನ್ನು ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಯಾದ ಅಶ್ರಫ್ ರಝಾ ಅಂಜದಿ ನಡೆಸಲಿದ್ದಾರೆ.
ಸಂಘ ಕುಟುಂಬದ ಹಿರಿಯ ಅನುಭವಿ 25 ನಾಯಕರುಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮ ದಲ್ಲಿ ಜಿಲ್ಲಾ ನಾಯಕರಾದ ಮುಹ್ಯಿದ್ದೀನ್ ಸಖಾಫಿ ಪಯ್ಯಾರ್, ಮಜೀದ್ ಹನೀಫಿ, ಸಲೀಂ ಪಕೀರ್ಣಕಟ್ಟೆ, ಇಬ್ರಾಹಿಂ ಮಜೂರ್ ಹಾಗೂ ಡಿವಿಷನ್ ಉಪಾಧ್ಯಕ್ಷ ಮುಹಮ್ಮದ್ ಮುಸ್ತಫ ಸಖಫಿ ಉಪಸ್ಥಿತಿಯಿರುವರು ಎಂದು ಎಸ್ಸೆಸ್ಸೆಫ್ ಕಾಪು ಡಿವಿಷನ್ ಪ್ರ.ಕಾರ್ಯದರ್ಶಿ ಮುಹಮ್ಮದ್ ಸಮೀರ್ ಕೋಡಿ ಪ್ರಕಟಣೆ ತಿಳಿಸಿರುತ್ತಾರೆ.
ವರದಿ : ಪಿ.ಎಂ.ಎಸ್ ಪಡುಬಿದ್ರಿ






