janadhvani

Kannada Online News Paper

ಮೈಸೂರು: ಎಸ್ಸೆಸ್ಸೆಫ್ ‘ವಿಬ್ರಾಟೊ’ ಕಾರ್ಯಾಗಾರ

ಮೈಸೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಕ್ಯಾಂಪಸ್ ವಿಭಾಗದ ರಾಜ್ಯ ಮಟ್ಟದ ಪ್ರತಿನಿಧಿ ಸಮಾವೇಶ ‘ವಿಬ್ರಾಟೊ’ ಮೈಸೂರ್ ನ ಗೌಸಿಯಾ ನಗರದಲ್ಲಿ ಇತ್ತೀಚೆಗೆ ನಡೆಯಿತು.

ರಾಜ್ಯ ರಾಷ್ಟ್ರೀಯ ಕಾರ್ಯದರ್ಶಿ ಶರೀಫ್ ಬೆಂಗಳೂರು ರವರ ನೇತೃತ್ವದಲ್ಲಿ ನಡೆದ ಕಾರ್ಯಾಗಾರದಲ್ಲಿ ಎಸ್ಸೆಸ್ಸೆಫ್ ರಾಷ್ಟೀಯ ಸಮಿತಿ ಸದಸ್ಯ ಇಂಜಿನಿಯರ್ ಫಝಲುರ್ರಹ್ಮಾನ್ , ಅಶ್ರಫ್ ಸಖಾಫಿ ,ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್, ರಾಜ್ಯ ವಿಸ್ಟಂ ಕನ್ವೀನರ್ ಮುಸ್ತಫ ಮಾಸ್ಟರ್ ಉಳ್ಳಾಲ , ಮುನೀರ್ ಮದನಿ ಮುಂತಾದವರು ವಿವಿದ ವಿಷಯಗಳ ಕುರಿತು ತರಗತಿ ನಡೆಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಕ್ಯಾಂಪಸ್ ಕನ್ವೀನರ್ ಶೆರೀಫ್ ಮಡಿಕೇರಿ ಸ್ವಾಗತಿಸಿದರೆ ವಿಸ್ಡಂ ಕನ್ವೀನರ್ ಸಫ್ವಾನ್ ಚಿಕ್ಕಮಗಳೂರು ಧನ್ಯವಾದವಿತ್ತರು.