janadhvani

Kannada Online News Paper

ಮೋದಿಯನ್ನು ನೋಡಿ ಮತ ಹಾಕಿದ್ದೇವೆ- ರಾಜ್ಯ ಬಿಜೆಪಿ ಸಂಸದರ ವಿರುದ್ಧ ಮುತಾಲಿಕ್ ಗರಂ

ಕಲಬುರಗಿ: ಕಲಬುರಗಿಯ ಮಣ್ಣೂರಿನಲ್ಲಿ ಭಾಷಣ ಮಾಡಿದ ವೇಳೆ ಮಾತನಾಡಿದ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಸ್ಥಳೀಯ ಬಿಜೆಪಿ ನಾಯಕರ ವಿರುದ್ಧ ಕೆಂಡಮಂಡಲರಾಗಿದ್ದಾರೆ.

ಜುಲೈ 1ರಂದು ನಡೆದ ಹಿಂದೂ ವಿರಾಟ್ ಉತ್ಸವದ ವೇಳೆ ಮಾತನಾಡಿದ ಮುತಾಲಿಕ್, ಮೋದಿಯ ಹಿಂದುತ್ವ, ಮೋದಿಯ ಆಡಳಿತ, ಮೋದಿ ಮುಖ ನೋಡಿ ನಾವು ಬಿಜೆಪಿಗೆ ಓಟು ಹಾಕಿರೋದು ನಿಮ್ಮ ಮುಖ ನೋಡಿ ಅಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.

ಮುಂದಿನ ಸಲ ಮೋದಿ ಅಂತ ಅಂದ್ರೆ ಬಾಯಲ್ಲಿ ಬೂಟ್ ಹಾಕ್ತೀವಿ ಎಂದು ರಾಜ್ಯ ಬಿಜೆಪಿ ಸಂಸದರಿಗೆ ವಾರ್ನಿಂಗ್ ಮಾಡಿದ್ದಾರೆ. ಅಲ್ಲದೇ ಐದು ವರ್ಷ ಬಾಯಿ ಮುಚ್ಚಿಕೊಂಡು ನೆಟ್ಟಗೆ ಕೆಲಸ ಮಾಡಿ ಎಂದಿದ್ದಾರೆ.