ನಾಸಿಕ್, ಜು.2: ಜಾರ್ಖಂಡ್ ನಲ್ಲಿ 24 ವರ್ಷದ ತಬ್ರೇಝ್ ಅನ್ಸಾರಿಯ ಗುಂಪು ಥಳಿತ ಹಾಗೂ ಹತ್ಯೆಯ ಹಿನ್ನಲೆಯಲ್ಲಿ ಮಾಲೆಗಾಂವ್ ನ ಹುತಾತ್ಮರ ಸ್ಮಾರಕ (ಶಹೀದೋಂ ಕಿ ಯಾದ್ ಗಾರ್) ಸಮೀಪ ಸೋಮವಾರ ಒಂದು ಲಕ್ಷಕ್ಕೂ ಮಿಕ್ಕ ಮುಸ್ಲಿಮರು ಒಗ್ಗೂಡಿ ಗುಂಪು ಥಳಿತದ ವಿರುದ್ಧ ಕಾನೂನು ಜಾರಿಗೊಳಿಸುವಂತೆ ಸರಕಾರದ ಮೇಲೆ ಒತ್ತಡ ಹೇರಿದ್ದಾರೆ. ಸರಿಯಾಗಿ 97 ವರ್ಷಗಳ ಹಿಂದೆ ಬ್ರಿಟಿಷರು ಏಳು ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಿದ ಸ್ಥಳ ಈ ಸ್ಮಾರಕವಾಗಿದೆ.
ಗುಂಪು ಥಳಿತದ ವಿರುದ್ಧ ಸಮುದಾಯ ಆಯೋಜಿಸಿದ ಮೊದಲ ರ್ಯಾಲಿ ಇದೆಂದು ಬಣ್ಣಿಸಲಾಗಿದ್ದು, ತಬ್ರೇಝ್ ಅನ್ಸಾರಿಯ ಗುಂಪು ಥಳಿತ ಹಾಗೂ ಹತ್ಯೆ ಘಟನೆಯೇ ಈ ಪ್ರತಿಭಟನೆಗೆ ನಾಂದಿಯಾಯಿತು ಎಂದು ಸಂಘಟನಾ ಸಂಸ್ಥೆ ಜಮೀಯತ್ ಉಲಮಾ ಹೇಳಿದೆ.
“ಸಂವಿಧಾನದ ರಕ್ಷಣೆಗೆ ಈ ಪ್ರತಿಭಟನೆ ನಡೆಸಲಾಗಿದೆ, ನಮಗೆ ದ್ವೇಷ ಸಾಧಿಸುವುದು ಬೇಕಿಲ್ಲ. ಹಿಂಸೆಯಲ್ಲೂ ನಮಗೆ ನಂಬಿಕೆಯಿಲ್ಲ. ಕಾನೂನಿನ ಮೇಲೆ ನಂಬಿಕೆಯಿದೆ” ಎಂದು ಪ್ರತಿಭಟನಕಾರರು ಹೇಳಿದರು.
ಮಾಲೆಗಾಂವ್ ಫೋರ್ಟ್ ಪ್ರದೇಶದಲ್ಲಿ ಒಟ್ಟು ಸೇರಿದ ಪ್ರತಿಭಟನಾಕಾರರು ನಂತರ ಹುತಾತ್ಮರ ಸ್ಮಾರಕದತ್ತ ನಡೆದರು. “ಮುಸ್ಲಿಮರು ದೌರ್ಜನ್ಯವನ್ನು ಹೆಚ್ಚು ಕಾಲ ತಾಳಿಕೊಳ್ಳಲು ಸಾಧ್ಯವಿಲ್ಲ ಎಂದು ಇಡೀ ದೇಶಕ್ಕೆ ಹೇಳಲು ಈ ಐತಿಹಾಸಿಕ ರ್ಯಾಲಿ ಸಾಕು. ಗುಂಪು ಥಳಿತ ಒಂದು ಸಂಘಟಿತ ಕೊಲೆ ಹಾಗೂ ಅದನ್ನು ಯೋಜನಾಬದ್ಧವಾಗಿ ನಡೆಸಲಾಗುತ್ತಿದೆ. ಇಂದು ಎಲ್ಲಾ ನಾಗರಿಕರೂ ಇಂತಹ ಘಟನೆಗಳಿಗೆ ಅಂತ್ಯ ಹಾಡುವ ಜವಾಬ್ದಾರಿ ಹೊಂದಿದ್ದಾರೆ. ಸೀತೆಯ ಈ ಪಾವನ ಭೂಮಿಯಲ್ಲಿ ನಾವು ರಾವಣನ ಹೆಜ್ಜೆಯ ಸದ್ದು ಕೇಳುತ್ತಿದ್ದೇವೆ. ಇದನ್ನು ನಿಲ್ಲಿಸುವುದು ನಮ್ಮ ಸಂಘಟಿತ ಜವಾಬ್ದಾರಿ” ಎಂದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯದರ್ಶಿ ಮೌಲಾನ ರಹ್ಮಾನಿ ಹೇಳಿದರು.
ರಾಷ್ಟ್ರಪತಿಗಳು ಎಲ್ಲಾ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತಗಳಿಗೆ ಪತ್ರ ಬರೆದು ಗುಂಪು ಥಳಿತ ಘಟನೆಗಳ ಕುರಿತಂತೆ ಅವರ ಸಂವಿಧಾನಿಕ ಕರ್ತವ್ಯಗಳನ್ನು ನೆನಪಿಸಬೇಕು ಹಾಗೂ ಸರಕಾರ ಗುಂಪು ಥಳಿತ ಸಂತ್ರಸ್ತರ ಕುಟುಂಬಗಳಿಗೆ ತಲಾ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಮಹಾರಾಷ್ಟ್ರ ಸರಕಾರಕ್ಕೆ ಸಲ್ಲಿಸಿದ ಪತ್ರದಲ್ಲಿ ಆಗ್ರಹಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ