janadhvani

Kannada Online News Paper

ಅಯೋಧ್ಯೆಯಲ್ಲಿ ಮಸೀದಿ, ಮಂದಿರ ಎರಡೂ ನಿರ್ಮಾಣವಾಗಲಿ-ಪೇಜಾವರ ಶ್ರೀ

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮಮಂದಿರ ಮತ್ತು ಮಸೀದಿ ಎರಡೂ ನಿರ್ಮಾಣವಾಗಲಿ. ಇದಕ್ಕೆ ವಿರೋಧವಿಲ್ಲ ಎಂದು ಉಡುಪಿ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸೋಮವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಅಯೋಧ್ಯೆ ವಿಚಾರವನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನ ಈ ಬಾರಿ ಸಫಲವಾಗುವ ಆಶಯ ಇದೆ ಎಂದರು.

’ಅಯೋಧ್ಯೆಯಲ್ಲಿ ರಾಮಮಂದಿರ, ಮಸೀದಿ ಅಕ್ಕಪಕ್ಕದಲ್ಲಿ ನಿರ್ಮಾಣ ಬೇಡ, ಸ್ವಲ್ಪ ದೂರ, ದೂರದಲ್ಲಿ ನಿರ್ಮಾಣವಾಗಲಿ’ ಎಂದು ಅವರು ಸಲಹೆ ನೀಡಿದರು. ಯಾವುದೇ ಸಂಘರ್ಷ ಇಲ್ಲದೆ ವಿವಾದ ಬಗೆ ಹರಿಯಲಿ ಎಂದು ಆಶಯ ವ್ಯಕ್ತಪಡಿಸಿದರು.