ದಮ್ಮಾಂ: ಸೌದಿಯ ಕಾರ್ಮಿಕ ನ್ಯಾಯಾಲಯವು ಕಾರ್ಮಿಕರಿಗೆ ವೇತನವನ್ನು ನೀಡಲು ವಿಳಂಬ ಮಾಡುತ್ತಿದ್ದ ಕಂಪೆನಿಗಳ ವಿರುದ್ದ ದಂಡ ವಿಧಿಸಲು ಆರಂಬಿಸಿದೆ.ಸೌದಿ ಕಾರ್ಮಿಕ ಕಾನೂನು ಸಂಖ್ಯೆ 94 ರ ಪ್ರಕಾರ ಈ ನಡೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಕಾರ್ಮಿಕರ ವೇತನದ ಅರ್ಧದಷ್ಟು ಹಣವನ್ನು ದಂಡ ರೂಪದಲ್ಲಿ ಪಾವತಿಸಬೇಕು. ಅನೇಕ ಕಂಪನಿಗಳ ವಿರುದ್ದ ದಂಡ ವಿಧಿಸಲು ಆರಂಭಿಸಿದಾಗ ಪ್ರಕರಣವು ನ್ಯಾಯಾಲಯಕ್ಕೆ ತಲುಪುವ ಮುಂಚೆ ಕಾರ್ಮಿಕರೊಂದಿಗೆ ಒಪ್ಪಂದದ ಮೂಲಕ ಪರಿಹರಿಸಲು ಹಲವಾರು ಕಂಪೆನಿಗಳು ಮುಂದಾಗಿವೆ ಎನ್ನಲಾಗಿದೆ.
ಸೌದಿ ಕಾರ್ಮಿಕ ನ್ಯಾಯಾಲಯ ಆರಭಗೊಂಡ ಎರಡು ತಿಂಗಳಲ್ಲಿ, ಅನೇಕ ಜನರು ಪರಿಹಾರಕ್ಕಾಗಿ ನ್ಯಾಯಾಲವನ್ನು ಸಂಪರ್ಕಿಸಿರುವುದಾಗಿ ವರದಿಯಾಗಿವೆ.ರಿಯಾದ್ನಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದೆ. 4000 ಪ್ರಕರಣಗಳ ಪೈಕಿ, 1619 ಪ್ರಕರಣಗಳನ್ನು ರಿಯಾದ್ ಕಾರ್ಮಿಕ ನ್ಯಾಯಾಲಯ ದಾಖಲಿಸಿಕೊಂಡಿದೆ. ದಮ್ಮಾಂನಲ್ಲಿ 903, ಬುರೈದಾದಲ್ಲಿ 376, ಅಲ್ಹಸಾದಲ್ಲಿ 329 ಮತ್ತು ತಬೂಕ್ನಲ್ಲಿ 326 ಜಿದ್ದಾದಲ್ಲಿ 293 ಪ್ರಕರಣಗಳು ದಾಖಲಾಗಿವೆ.
ಇಪ್ಪತ್ತು ಸಾವಿರ ರಿಯಾಲ್ ಗಿಂತ ಕೆಳಗಿನ ಸಂಖ್ಯೆಗಾಗಿ ಉಚ್ಛ ನ್ಯಾಯಾಲಯವನ್ನು ಸಮೀಪಿಸಲು ಸಾಧ್ಯವಿಲ್ಲ ಎನ್ನುವ ವ್ಯವಸ್ಥೆ ಇದೆ. ರಿಯಾದ್ನ ಸ್ಥಳೀಯನನ್ನು ಯಾವುದೇ ಕಾರಣವಿಲ್ಲದೆ ಕೆಲಸದಿಂದ ವಜಾ ಮಾಡಿರುವ ಪ್ರಕರಣದಲ್ಲಿ ಒಂದು ಕಂಪೆನಿಯ ವಿರುದ್ದ ಹತ್ತು ಲಕ್ಷ ರಿಯಾಲ್ ದಂಡ ವಿಧಿಸಿ ನ್ಯಾಯಾಲಾಯ ತೀರ್ಪು ನೀಡಿದೆ. ಕಾರ್ಮಿಕರ ಪ್ರಕರಣಗಳು ವಿಳಂಬವಾಗುವುದನ್ನು ತಪ್ಪಿಸಲು ಅಲ್ಲಿನ ನ್ಯಾಯಾಲಯ ನಿರ್ಧರಿಸಿದೆ ಎನ್ನಲಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು