ದೋಹಾ:ಉದ್ಯೋಗ ಸಂಬಂಧಿತ ಭಿನ್ನಾಭಿಪ್ರಾಯ ಉಂಟಾದಲ್ಲಿ ನ್ಯಾಯಯುತವಾಗಿ ಕಾರ್ಮಿಕರಿಗೆ ಲಭಿಸಬೇಕಾದ ಹಣವನ್ನು ಕಾರ್ಮಿಕರ ಸಹಕಾರ ವಿಮಾ ನಿಧಿಯಿಂದ ನೀಡಲಾಗುವುದು ಎಂದು ಅಭಿವೃದ್ಧಿ ಮತ್ತು ಕಾರ್ಮಿಕ, ಸಮಾಜ ಕಲ್ಯಾಣ ಖಾತೆ ಸಚಿವ ಡಾ. ಈಸಾ ಬಿನ್ ಸಾದ್ ಅಲ್ ಜಫಾಲಿ ಅಲ್ ನುಐಮಿ ಹೇಳಿದ್ದಾರೆ.
ಕ್ಯಾಬಿನೆಟ್ ಈ ಕರಡು ಕಾನೂನನ್ನು ಅನುಮೋದಿಸಿದೆ. ಅಮೀರ್ ಶೈಖ್ ತಮೀಮ್ ಬಿನ್ ಹಮದ್ ಅಲ್ ಥಾನಿಯವರಿಗೆ ಸಲ್ಲಿಸಬೇಕಾದ ಕರಡುಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅಲ್-ನುಐಮಿ ಹೇಳಿದರು.
ಉದ್ಯೋಗದಾತನಿಗೆ ಹೊಣೆಗಾರಿಕೆಯನ್ನು ನಿಭಾಯಿಸಲು ಸಾಧ್ಯವಾಗದಿದ್ದದ್ದಲ್ಲಿ, ನಿಧಿಯಿಂದ ಕಾರ್ಮಿಕರಿಗೆ ಹಣ ಪಾವತಿಸಲಾಗುತ್ತದೆ.ಕೆಲಸಗಾರನಿಗೆ ತನ್ನ ಊರಿಗೆ ಮರಳಲು ಸೌಕರ್ಯ ಕೂಡ ಲಭಿಸಲಿದೆ. ಇದನ್ನು ಮಾಲೀಕರಿಂದ ನಂತರ ಪಡೆಯಲಾಗುತ್ತದೆ.
ಕೆಲಸಗಾರರಿಗೆ ಆಟದ ಮೈದಾನಗಳು ಮತ್ತು ಇತರ ಮನರಂಜನಾ ಸೌಲಭ್ಯಗಳಿಗೂ ಕಾರ್ಮಿಕರ ನಿಧಿಯಿಂದ ಧನ ಸಹಾಯ ನೀಡಲಾಗುತ್ತದೆ.ಸರ್ಕಾರ ನೀಡುವ ಅನುದಾನದ ಜೊತೆಗೆ, ಹೂಡಿಕೆಗಳಿಂದ ಲಭಿಸುವ ಆದಾಯವನ್ನೂ ನಿಧಿಗೆ ನೀಡಲಾಗುತ್ತದೆ.ಕಾರ್ಮಿಕರ ಹಕ್ಕುಗಳಿಗಾಗಿ ಜಾರಿಗೊಳಿಸಲಾದ ಕಾನೂನುಗಳ ಹೊರತಾಗಿ ನಿಧಿಯನ್ನು ರಚಿಸಲಾಗಿದೆ.
ಕತಾರ್ ಕಾರ್ಮಿಕರಿಗೆ ಸುರಕ್ಷಿತ ಉದ್ಯೋಗ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಅದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಈಸಾ ಬಿನ್ ಸಾದ್ ಅಲ್ ಜಫಾಲಿ ಅಲ್ ನುಐಮಿ ಹೇಳಿದರು.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ