ವರದಿ : ನಾಸೀರ್ ಬೋವು
ತ್ವಾಇಫ್: ತಾಜುಲ್ ಫುಖಹಾ ಬೇಕಲ್ ಉಸ್ತಾದರು ನಾಮಕರಣ ಮಾಡಿ 2013 ಫೆಬ್ರವರಿ 15 ರಂದು ಸ್ಥಾಪನೆಗೊಂಡ ಗಲ್ಫ್ ಕನ್ನಡಿಗರ ಅಭಿಮಾನದ ಸಂಘಟನೆ: KCF ( ಕರ್ನಾಟಕ ಕಲ್ಚರಲ್ ಫೌಂಡೇಶನ್) ಗೆ ಇದೀಗ ಹದಿಮೂರ ಹರೆಯ.

ಸಾಧನೆಗಳ ಸರಣಿ
ಯುಎಇ, ಸೌದಿ, ಬಹರೈನ್, ಒಮಾನ್, ಕತಾರ್, ಕುವೈಟ್, ಇರಾಕ್, ಈಜಿಪ್ಟ್ , ಯುಕೆ, ಜಪಾನ್ ಹಾಗೂ ಮಲೇಶಿಯ ಸೇರಿ ಒಟ್ಟು ಹನ್ನೊಂದು ದೇಶಗಳಿಗೆ ಸಂಘಟನೆ ವಿಸ್ತಾರಗೊಂಡಿತು.
ಹದಿಮೂರು ವರ್ಷಗಳ ಹೃಸ್ವ ಕಾಲಾವಧಿಯಲ್ಲಿ 15 ಸಾವಿರ ಸದಸ್ಯರಿರುವ ಗಲ್ಫ್ ದೇಶದಲ್ಲೇ ಅತ್ಯಂತ ಬೃಹತ್ತಾದ ಕನ್ನಡಿಗರ ಸಂಘಟನೆಯೆನಿಸಿತು.
ಈ ನಿಟ್ಟಿನಲ್ಲಿ “ಸೇವೆ ನಮ್ಮ ಶಕ್ತಿ ಬದ್ಧತೆ ನಮ್ಮ ಗುರುತು” ಎಂಬ ದ್ಯೇಯದೊಂದಿಗೆ
KCF ತ್ವಾಇಫ್ ಸೆಕ್ಟರ್
ವತಿಯಿಂದ ಲೋಕಾನುಗ್ರಹಿ
ಮುಹಮ್ಮದ್ರಸೂಲುಲ್ಲಾಹಿ (ಸ ಅ)ರ ಪಾದಸ್ಪರ್ಶದಿಂದ ಅನುಗ್ರಹಿಸಲ್ಪಟ್ಟ ಪುಣ್ಯ ಭೂಮಿ ತ್ವಾಇಫ್ ನ, ರಈಸುಲ್ ಮುಫಸ್ಸಿರೀನ್ ಅಬ್ದುಲ್ಲಾ ಇಬ್ನು ಅಬ್ಬಾಸ್ (ರ ಅ )ರವರ ಮಕ್ಬರ ಝಿಯಾರತ್ ಮೂಲಕ “ಕೆಸಿಫ್ ಫೌಂಡೇಶನ್ ಡೇ” ಗೆ, ಚಾಲನೆ ನೀಡಲಾಯಿತು.
ಪ್ರಾರ್ಥನೆ ಅಶ್ರಫ್ ಸಖಾಫಿ ಕುಂಭಕ್ಕೋಡ್ ನೆರೆವೇರಿಸಿದರು. ಸಭಿಕರಿಗೆ ರಿಯಾಝ್ ಉಳ್ಳಾಲ ಸ್ವಾಗತಿಸಿದರು,
ಸಭೆಯನ್ನು ಸಲೀಮ್ ಪಲ್ಲಕುಡಲ್ ಉದ್ಘಾಟನೆ ಮಾಡಿದರು.
ನಂತರ ಅಧ್ಯಕ್ಷೀಯ ಭಾಷಣ ಮಾಡಿದ
ಅಬ್ದುಲ್ ರಝಾಕ್ ಕೊಡಂಗಾಯಿ
ಸಾಧನೆಯ ಹಾದಿಯಲ್ಲಿ ಉತ್ತಮವಾದ
ಕಾರ್ಯಾಚರಣೆಗಳೊಂದಿಗೆ ಮುನ್ನೇರುತ್ತಿರುವ
KCF ನ ಸಾಧನೆಗಳನ್ನು ವಿವರಿಸಿದರರು.
ಅಶ್ರಫ್ ಸಖಾಫಿ ಕುಂಭಕ್ಕೋಡ್ ಮಾತಾಡಿ
ಕೆಸಿಎಫ್ ನೊಂದಿಗಿರುವ ತಮ್ಮ ಆಳವಾದ ಸಂಬಂಧ
ಹಾಗೂ ಇದರಿಂದ ನಮಗೆ
ಅಲ್ಲಾಹುವಿನಿಂದ ದೊರೆಯುವ ಸತ್ಫಲಗಳ ಬಗ್ಗೆ
ಮಾರ್ಮಿಕವಾಗಿ ಪ್ರಸ್ತಾಪಿಸಿದರು.
ಅಯ್ಯೂಬ್ ಕುಂದಾಪುರ ಮತ್ತು ಸಿದ್ದೀಕ್ ಕನ್ಯಾರಕೋಡಿ ಶುಭ ಹಾರೈಸಿದರು,
ಕೊನೆಯಲ್ಲಿ ತೌಸೀಫ್ ಬೆಲ್ಮ ವಂದಿಸಿದರು.
ಅದೇ ರೀತಿ ನಾಯಕರ ಚುರುಕಿನ
ಕಾರ್ಯಾಚರಣೆಯಿಂದಾಗಿ ಹೆಚ್ಚಿನ ಸದಸ್ಯರನ್ನು
ಮತ್ತು ನಮ್ಮೊಂದಿಗೆ ವಿಶೇಷವಾಗಿ ಸಹಕರಿಸುವ
ಅಭಿಮಾನಿ ಹಿತೈಷಿಗಳನ್ನು ಭೇಟಿ ನೀಡಿ
ಸಿಹಿತಿಂಡಿ ವಿತರಿಸಿ, ಸಂಘಟನೆಯ ಅಭಿಪ್ರಾಯ,
ಅನಿಸಿಕೆ ಸಂಗ್ರಹಿಸಲಾಯಿತು.
















ಇನ್ನಷ್ಟು ಸುದ್ದಿಗಳು
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ
ಮದ್ರಸ ಮುಅಲ್ಲಿಮರ ಮೇಲೆ ಹಲ್ಲೆ ಪ್ರಕರಣ: ಎಸ್ಜೆಎಂ ದ.ಕ. ಸೌತ್ ಜಿಲ್ಲಾ ಸಮಿತಿ ತೀವ್ರ ಖಂಡನೆ