ವರದಿ : ನಾಸೀರ್ ಬೋವು
ತ್ವಾಇಫ್: ತಾಜುಲ್ ಫುಖಹಾ ಬೇಕಲ್ ಉಸ್ತಾದರು ನಾಮಕರಣ ಮಾಡಿ 2013 ಫೆಬ್ರವರಿ 15 ರಂದು ಸ್ಥಾಪನೆಗೊಂಡ ಗಲ್ಫ್ ಕನ್ನಡಿಗರ ಅಭಿಮಾನದ ಸಂಘಟನೆ: KCF ( ಕರ್ನಾಟಕ ಕಲ್ಚರಲ್ ಫೌಂಡೇಶನ್) ಗೆ ಇದೀಗ ಹದಿಮೂರ ಹರೆಯ.

ಸಾಧನೆಗಳ ಸರಣಿ
ಯುಎಇ, ಸೌದಿ, ಬಹರೈನ್, ಒಮಾನ್, ಕತಾರ್, ಕುವೈಟ್, ಇರಾಕ್, ಈಜಿಪ್ಟ್ , ಯುಕೆ, ಜಪಾನ್ ಹಾಗೂ ಮಲೇಶಿಯ ಸೇರಿ ಒಟ್ಟು ಹನ್ನೊಂದು ದೇಶಗಳಿಗೆ ಸಂಘಟನೆ ವಿಸ್ತಾರಗೊಂಡಿತು.
ಹದಿಮೂರು ವರ್ಷಗಳ ಹೃಸ್ವ ಕಾಲಾವಧಿಯಲ್ಲಿ 15 ಸಾವಿರ ಸದಸ್ಯರಿರುವ ಗಲ್ಫ್ ದೇಶದಲ್ಲೇ ಅತ್ಯಂತ ಬೃಹತ್ತಾದ ಕನ್ನಡಿಗರ ಸಂಘಟನೆಯೆನಿಸಿತು.
ಈ ನಿಟ್ಟಿನಲ್ಲಿ “ಸೇವೆ ನಮ್ಮ ಶಕ್ತಿ ಬದ್ಧತೆ ನಮ್ಮ ಗುರುತು” ಎಂಬ ದ್ಯೇಯದೊಂದಿಗೆ
KCF ತ್ವಾಇಫ್ ಸೆಕ್ಟರ್
ವತಿಯಿಂದ ಲೋಕಾನುಗ್ರಹಿ
ಮುಹಮ್ಮದ್ರಸೂಲುಲ್ಲಾಹಿ (ಸ ಅ)ರ ಪಾದಸ್ಪರ್ಶದಿಂದ ಅನುಗ್ರಹಿಸಲ್ಪಟ್ಟ ಪುಣ್ಯ ಭೂಮಿ ತ್ವಾಇಫ್ ನ, ರಈಸುಲ್ ಮುಫಸ್ಸಿರೀನ್ ಅಬ್ದುಲ್ಲಾ ಇಬ್ನು ಅಬ್ಬಾಸ್ (ರ ಅ )ರವರ ಮಕ್ಬರ ಝಿಯಾರತ್ ಮೂಲಕ “ಕೆಸಿಫ್ ಫೌಂಡೇಶನ್ ಡೇ” ಗೆ, ಚಾಲನೆ ನೀಡಲಾಯಿತು.
ಪ್ರಾರ್ಥನೆ ಅಶ್ರಫ್ ಸಖಾಫಿ ಕುಂಭಕ್ಕೋಡ್ ನೆರೆವೇರಿಸಿದರು. ಸಭಿಕರಿಗೆ ರಿಯಾಝ್ ಉಳ್ಳಾಲ ಸ್ವಾಗತಿಸಿದರು,
ಸಭೆಯನ್ನು ಸಲೀಮ್ ಪಲ್ಲಕುಡಲ್ ಉದ್ಘಾಟನೆ ಮಾಡಿದರು.
ನಂತರ ಅಧ್ಯಕ್ಷೀಯ ಭಾಷಣ ಮಾಡಿದ
ಅಬ್ದುಲ್ ರಝಾಕ್ ಕೊಡಂಗಾಯಿ
ಸಾಧನೆಯ ಹಾದಿಯಲ್ಲಿ ಉತ್ತಮವಾದ
ಕಾರ್ಯಾಚರಣೆಗಳೊಂದಿಗೆ ಮುನ್ನೇರುತ್ತಿರುವ
KCF ನ ಸಾಧನೆಗಳನ್ನು ವಿವರಿಸಿದರರು.
ಅಶ್ರಫ್ ಸಖಾಫಿ ಕುಂಭಕ್ಕೋಡ್ ಮಾತಾಡಿ
ಕೆಸಿಎಫ್ ನೊಂದಿಗಿರುವ ತಮ್ಮ ಆಳವಾದ ಸಂಬಂಧ
ಹಾಗೂ ಇದರಿಂದ ನಮಗೆ
ಅಲ್ಲಾಹುವಿನಿಂದ ದೊರೆಯುವ ಸತ್ಫಲಗಳ ಬಗ್ಗೆ
ಮಾರ್ಮಿಕವಾಗಿ ಪ್ರಸ್ತಾಪಿಸಿದರು.
ಅಯ್ಯೂಬ್ ಕುಂದಾಪುರ ಮತ್ತು ಸಿದ್ದೀಕ್ ಕನ್ಯಾರಕೋಡಿ ಶುಭ ಹಾರೈಸಿದರು,
ಕೊನೆಯಲ್ಲಿ ತೌಸೀಫ್ ಬೆಲ್ಮ ವಂದಿಸಿದರು.
ಅದೇ ರೀತಿ ನಾಯಕರ ಚುರುಕಿನ
ಕಾರ್ಯಾಚರಣೆಯಿಂದಾಗಿ ಹೆಚ್ಚಿನ ಸದಸ್ಯರನ್ನು
ಮತ್ತು ನಮ್ಮೊಂದಿಗೆ ವಿಶೇಷವಾಗಿ ಸಹಕರಿಸುವ
ಅಭಿಮಾನಿ ಹಿತೈಷಿಗಳನ್ನು ಭೇಟಿ ನೀಡಿ
ಸಿಹಿತಿಂಡಿ ವಿತರಿಸಿ, ಸಂಘಟನೆಯ ಅಭಿಪ್ರಾಯ,
ಅನಿಸಿಕೆ ಸಂಗ್ರಹಿಸಲಾಯಿತು.
















ಇನ್ನಷ್ಟು ಸುದ್ದಿಗಳು
ಬೈತಡ್ಕ ಉರೂಸ್: ಸಾವಿರ ಕೆಜಿ ಸಕ್ಕರೆ ಸಂಗ್ರಹಿಸಿ ಗಮನ ಸೆಳೆದ ‘ಮಾಲೆಂಗ್ರಿ ಫ್ರೆಂಡ್ಸ್’ ವಾಟ್ಸಾಪ್ ತಂಡ
ಡಿಕೆಯಸ್ಸಿ ತಬೂಕ್ ಘಟಕದ ವಾರ್ಷಿಕ ಮಹಾಸಭೆ
ಪಶ್ಚಿಮ ಏಷ್ಯಾ ಬಿಕ್ಕಟ್ಟು: ಗಲ್ಫ್ ರಾಷ್ಟ್ರಗಳಿಂದ 8.43 ಲಕ್ಷ ಭಾರತೀಯರು ವಾಪಸ್
ಶಾಫಿ ಸಅದಿ ವಿರುದ್ಧ ಸುಳ್ಳು ಸುದ್ದಿ ಪ್ರಕಟ: ‘ಮಿನಾರಂ’ ಡಿಜಿಟಲ್ ಪತ್ರಿಕೆಯ ವಿರುದ್ಧ ಮಾನನಷ್ಟ ಮೊಕದ್ದಮೆ
ಎಪ್ರಿಲ್ 12: ಮಾದರಿ ಮದುವೆ ಅಭಿಯಾನ ಸಮಾರೋಪದ ಪ್ರಚಾರಾರ್ಥ ಸಾಂಘಿಕ ನಾಯಕರ ಸಭೆ
ಕಾಟಿಪಳ್ಳ: ನೂತನ ಮದ್ರಸ ಕಟ್ಟಡ ಉದ್ಘಾಟನಾ ಸಮಾರಂಭ- ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮ
ಶರಫುಲ್ ಉಲಮಾ 7ನೇ ವಾರ್ಷಿಕ ಅನುಸ್ಮರಣೆ- ಮೇ 13, 14 ರಂದು ವಿವಿಧ ಕಾರ್ಯಕ್ರಮ
ಬಶೀರ್ ಕಿನ್ಯ ಅವರಿಗೆ ಸಮ್ಮೇಳನಾಧ್ಯಕ್ಷತೆಯ ಗೌರವ: ಸಾಹಿತ್ಯ ಲೋಕದ ಬಹುಭಾಷಾ ಪಂಡಿತನಿಗೆ ಒಲಿದ ಮನ್ನಣೆ
ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ಉಚಿತ ಪ್ರಯಾಣ- ಐತಿಹಾಸಿಕ ‘ಮಕ್ಕಳ ಸ್ನೇಹಿ ಸಾರಿಗೆ’ ಯೋಜನೆ ಸಿದ್ಧ
ಕಿನ್ಯಾ ‘ಗೋಲ್ಡನ್ ಹೆಲ್ತ್’ ಶಿಲಾನ್ಯಾಸ: ರೋಗ ಬರದಂತೆ ತಡೆಯುವ ಜನಜಾಗೃತಿ ಇಂದಿನ ಅಗತ್ಯ- ಸ್ಪೀಕರ್ ಯು.ಟಿ. ಖಾದರ್