ಕೆಸಿಎಫ್ ಬಹರೈನ್ ನೋರ್ತ್ ಝೋನ್ ವತಿಯಿಂದ ಫೆಬ್ರವರಿ ತಿಂಗಳ 13 ರಂದು ರಾಷ್ಟ್ರೀಯ ಸಮಿತಿಯ ಆದೇಶ ಪ್ರಕಾರ ಕೆಸಿಎಫ್ ಡೇ – 2026 ಕಾರ್ಯಕ್ರಮವನ್ನು ಸಾರ್ ವಿಲ್ಲದಲ್ಲಿ ಆಚರಿಸಲು ತೀರ್ಮಾನಿಸಲಾಯಿತು. ಝೋನ್ ಅಧ್ಯಕ್ಷರಾದ ಅಹ್ಮದ್ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಚೇರ್ಮಾನ್ ನಿಯಾಝ್ ಕುರ್ನಾಡು, ವೈಸ್ ಚೇರ್ಮಾನ್ ಹಾರಿಸ್ ಒಕ್ಕೆತ್ತೂರ್, ಕನ್ವೀನರ್ ಹನೀಫ್ ಮುಸ್ಲಿಯಾರ್, ಫೈನಾನ್ಸ್ ಕಂಟ್ರೋಲರ್ ನೌಫಲ್ ವಿಟ್ಲ ಇವರನ್ನು ನೇಮಕ ಮಾಡಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಧ್ವಜಾರೋಹಣ, ಪ್ರತಿಭೋತ್ಸವ, ಆಧ್ಯಾತ್ಮಿಕ ಮಜ್ಲಿಸ್, ಸಂಘಟನಾ ತರಬೇತಿ, ಆಟೋಟ ಸ್ಪರ್ಧೆ, ಬುರ್ದಾ ಮಜ್ಲಿಸ್, ಸಮಾರೋಪ ಸಮಾರಂಭ ಮುಂತಾದ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಯಿತು. ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆ ಕೆಸಿಎಫ್’ನ ಜನ್ಮ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಬೇಕೆಂದು ಸಾಂದರ್ಭಿಕವಾಗಿ ಮಾತನಾಡಿದ ಚೇರ್ಮಾನ್ ನಿಯಾಝ್ ಕುರ್ನಾಡುರವರು ಪ್ರತಿಯೋರ್ವ ಕಾರ್ಯಕರ್ತರು ಸರ್ವ ವಿಧ ಸಹಾಯ ಸಹಕಾರದೊಂದಿಗೆ ಕೈಜೋಡಿಸಬೇಕೆಂದು ಕರೆಯಿತ್ತರು. ಝೋನ್ ಕಾರ್ಯದರ್ಶಿ ವೇಣೂರು ಉಸ್ತಾದರು ಸ್ವಾಗತಿಸಿ, ಗುದೈಬಿಯಾ ಸೆಕ್ಟರ್ ಕಾರ್ಯದರ್ಶಿ ಮಜೀದ್ ಪೈಂಬಚ್ಚಾಲ್ ಧನ್ಯವಾದ ಸಮರ್ಪಿಸಿದರು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ