ದುಬೈ: ಕೆಸಿಎಫ್ ದುಬೈ ಸೌತ್ ಝೋನ್ ಪ್ರತಿ ವರ್ಷ ನಡೆಸುತ್ತಿರುವ ಗ್ರಾಂಡ್ ಮೀಲಾದ್ ಕಾನ್ಫರೆನ್ಸ್ ನ 2025 ನೇ ಸಾಲಿನ ಕಾರ್ಯಕ್ರಮದ ಸ್ವಾಗತ ಸಮಿತಿಯ ರಚನೆಯು ದುಬೈ ಬಿಸಿನೆಸ್ ಬೇ ಯಲ್ಲಿರುವ ಬೇ ಬೈಟ್ಸ್ ಹೋಟೇಲಿನಲ್ಲಿ ಆಗಸ್ಟ್ .3 ಭಾನುವಾರದಂದು ನಡೆಯಿತು.
ಸಭೆಯನ್ನುಧ್ಧೇಶಿಸಿ ಮಾತನಾಡಿದ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಸಖಾಫಿಯವರು ಪ್ರವಾದಿ (ಸ.ಅ) ರವರ 1500 ನೇ ಜನ್ಮ ದಿನಾಚರಣೆಯನ್ನು ದುಬೈ ಸೌತ್ ಝೋನ್ ಈ ಬಾರಿ ವಿಜೃಂಭಣೆಯಿಂದ ಆಚರಿಸಲಿದೆ. ಪ್ರವಾದಿ ಕೀರ್ತನೆಗಳು ಮತ್ತು ಮದ್ಹ್ ಪ್ರಭಾಷಣಗಳನ್ನೊಳಗೊಂಡ ಪ್ರಸ್ತುತ ಗ್ರಾಂಡ್ ಮಿಲಾದ್ ಕಾನ್ಫರೆನ್ಸ್-2025, ಸೆಪ್ಟೆಂಬರ್ 21 ಭಾನುವಾರ, ದುಬೈ ಊದ್ ಮೇತ ಪಾಕಿಸ್ತಾನ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಯಶಸ್ವಿಗಾಗಿ ಎಲ್ಲರೂ ಕೈಜೊಡಿಸಬೇಕೆಂದು ಕರೆ ನೀಡಿದರು.
ಸ್ವಾಗತ ಸಮಿತಿಯ ಚೇರ್ಮ್ಯಾನ್ ಆಗಿ ಇಕ್ಬಾಲ್ ಸಿಧ್ಧಕಟ್ಟೆ, ವರ್ಕಿಂಗ್ ಚೇರ್ಮ್ಯಾನ್ ನಝೀರ್ ಹಾಜಿ ಕೆಮ್ಮಾರ, ಕನ್ವೀನರ್ ರಜಬ್ ಉಚ್ಚಿಲ, ವರ್ಕಿಂಗ್ ಕನ್ವೀನರ್ ಆಸಿಫ್ ಇಂದ್ರಾಜೆ, ಫಿನಾನ್ಶ್ಯಲ್ ಚೇರ್ಮ್ಯಾನ್ ಇಲ್ಯಾಸ್ ಮೂಳೂರು, ಫಿನಾನ್ಸ್ ಕನ್ವೀನರ್ ರವೂಫ್ ಸಾಗರ, ಅಶ್ಫಾಕ್ ಕೊಡಗು ಹಾಗೂ ಖಾದರ್ ಕಯ್ಯೂರು ಸೇರದಂತೆ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳನ್ನು ನೇಮಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಕೆಸಿಎಫ್ ದುಬೈ ಸೌತ್ ಝೊನ್ ಅಧ್ಯಕ್ಷ ಇಲ್ಯಾಸ್ ಮದನಿ ಬರ್ಷಾ ವಹಿಸಿದರು. ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಅಧ್ಯಕ್ಷ ಶಾಹುಲ್ ಹಮೀದ್ ಸಖಾಫಿ ಉಧ್ಘಾಟಿಸಿದರು. ಸಭೆಯಲ್ಲಿ ಮುಖ್ಯ ಅತಿಥಿಗಾಳಾಗಿ ಕೆಸಿಎಫ್ ಸಂಘಟನಾ ನಾಯಕರು ಗಳಾದ ರಜಬ್ ಉಚ್ಚಿಲ, ಹಮೀದ್ ಹಾಜಿ ಸ್ಟಾರ್ ಲಿಂಕ್, ಇಲ್ಯಾಸ್ ಮೂಳೂರು, ರವೂಫ್ ಸಾಗರ, ನವಾಝ್ ಹಾಜಿ ಕೋಟೆಕಾರ್, ನಝೀರ್ ಹಾಜಿ, ಇಕ್ಬಾಲ್ ಹಾಜಿ ಸಿಧ್ಧಕಟ್ಟೆ ಸೇರಿದಂತೆ, ಝೋನ್, ಸೆಕ್ಟರ್ ಹಾಗೂ ಶಾಖೆಯ ನಾಯಕರು ಭಾಗವಹಿಸಿದ್ದರು.
ಝೋನ್ ಕಾರ್ಯದರ್ಶಿ ಮನ್ಸೂರ್ ಹರೇಕಳ ಸ್ವಾಗತಿಸಿದರು, ರಫೀಕ್ ಕಲ್ಲಡ್ಕ ವಂದಿಸಿದರು. ಅಝೀಝ್ ಅಹ್ಸನಿ ಕಾರ್ಯಕ್ರಮವನ್ನು ನಿರೂಪಿಸಿದರು.
















ಇನ್ನಷ್ಟು ಸುದ್ದಿಗಳು
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ
ಮದ್ರಸ ಮುಅಲ್ಲಿಮರ ಮೇಲೆ ಹಲ್ಲೆ ಪ್ರಕರಣ: ಎಸ್ಜೆಎಂ ದ.ಕ. ಸೌತ್ ಜಿಲ್ಲಾ ಸಮಿತಿ ತೀವ್ರ ಖಂಡನೆ
ಮದ್ರಸಾ ಅಧ್ಯಾಪಕರ ಮೇಲೆ ಹಲ್ಲೆ- ಎಸ್.ವೈ.ಎಸ್ ದ.ಕ ಜಿಲ್ಲೆ ವೆಸ್ಟ್ ಖಂಡನೆ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ
ಒಪ್ಪಂದವನ್ನು ಗಾಳಿಗೆ ತೂರಿ ಇರಾನ್ ಮೇಲೆ ಯುಎಸ್ ದಾಳಿ- ಗಲ್ಫ್ ವಲಯದಲ್ಲಿ ಮತ್ತೆ ಆತಂಕ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ: ನಾಳೆ (ಜುಲೈ 8) ಶಾಲಾ-ಕಾಲೇಜುಗಳಿಗೆ ರಜೆ
ಅಜ್ಜಿನಡ್ಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಹಾಸಭೆ : ನೂತನ ಪದಾಧಿಕಾರಿಗಳ ಆಯ್ಕೆ