janadhvani

Kannada Online News Paper

ವಖ್ಫ್ ತಿದ್ದುಪಡಿ ಕಾನೂನು ವಿರುದ್ಧ ಪ್ರತಿಭಟನೆ- ಯಶಸ್ವಿಗೆ ಮೂಳೂರು ಉಸ್ತಾದ್ ಕರೆ

ಉಡುಪಿ: ಖಾಝಿಗಳಾದ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ಶೈಖುನಾ ಮಾಣಿ ಉಸ್ತಾದ್ ನೇತೃತ್ವದಲ್ಲಿ ಕರ್ನಾಟಕದ ಇತರ ಉಲಮಾ, ಉಮರಾ ನಾಯಕತ್ವದಲ್ಲಿ ನಾಳೆ ನಡೆಯುವ ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ ಮೂಳೂರು ಉಸ್ತಾದ್ ಕರೆ ನೀಡಿದ್ದಾರೆ.

ಏಪ್ರಿಲ್ 18 ಶುಕ್ರವಾರ ಸಂಜೆ 3 ಗಂಟೆಗೆ ” ವಕ್ಫ್ ತಿದ್ದುಪಡಿ ಕಾಯ್ದೆ” ವಿರುದ್ಧ ಮಂಗಳೂರಿನ ಅಡ್ಯಾರ್ ಕಣ್ಣೂರು ನಲ್ಲಿ ನಡೆಯಲಿರುವ ಐತಿಹಾಸಿಕ ಪ್ರತಿಭಟನಾ ಸಮಾವೇಶದಲ್ಲಿ ಉಡುಪಿ ಜಿಲ್ಲೆಯ ಮತ್ತು ಇತರ ಎಲ್ಲಾ ಜಿಲ್ಲೆಯ ಜನರು ಭಾಗವಹಿಸಿ ವಿಜಯಗೊಳಿಸಬೇಕೆಂದು ಅಬ್ದುರ್ರಹ್ಮಾನ್ ಮದನಿ ಮೂಳೂರು (ನಾಇಬ್ ಖಾಝಿ: ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್) ವಿನಂತಿಸಿದ್ದಾರೆ.