ಕೋಝಿಕ್ಕೋಡ್: ರಾಜಕೀಯ ಉದ್ದೇಶಗಳಿಗಾಗಿ ವಿದ್ವಾಂಸರ ಅಭಿಪ್ರಾಯಗಳನ್ನು ಬೆಂಬಲಿಸುವುದು ಮಾತ್ರ ಸಾಲದು,ಅವುಗಳನ್ನು ಕಾರ್ಯಗತಗೊಳಿಸಬೇಕು ಎಂದು ಸಮಸ್ತ ಅಧ್ಯಕ್ಷ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು. ಧಾರ್ಮಿಕ ನಿಯಮಗಳನ್ನು ವಿವರಿಸುವ ವಿದ್ವಾಂಸರನ್ನು ನಿಂದಿಸುವ ಕಾರ್ಯವನ್ನು ಕೊನೆಗೊಳಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ಜಿಫ್ರಿ ತಂಙಳ್ ಹೇಳಿದರು.
ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಮಹಿಳೆಯರ ಕುರಿತಾದ ಧಾರ್ಮಿಕ ನಿಲುವನ್ನು ಕೆಲವರು ಬೆಂಬಲಿಸಿದರು ಎಂದು ಹೇಳಲಾಗುತ್ತದೆ. ಆದಾಗ್ಯೂ, ಅದನ್ನು ಬೆಂಬಲಿಸುವುದು ಮಾತ್ರ ಸಲ್ಲದು , ನಾವು ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಬೇಕು. ಧಾರ್ಮಿಕ ವಿದ್ವಾಂಸರ ಹೇಳಿಕೆಯನ್ನು ನಾವು ನಿರ್ಲಕ್ಷಿಸಬಾರದು. ಸಮಸ್ತ ಕೇರಳ ಜಮ್ ಇಯತುಲ್ ಉಲಮಾ ಅನೇಕ ಧಾರ್ಮಿಕ ತೀರ್ಪುಗಳನ್ನು ನೀಡಿದೆ. ಧಾರ್ಮಿಕ ತೀರ್ಪುಗಳನ್ನು ಅಪಹಾಸ್ಯ ಮಾಡುವ ಮತ್ತು ವಿರೋಧಿಸುವ ಜನರು, ವಿರೋಧ ಪಕ್ಷಗಳನ್ನು ವಿರೋಧಿಸಲು ಮಾತ್ರ ಧಾರ್ಮಿಕ ತೀರ್ಪುಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಜೆಫ್ರಿ ತಂಙಳ್ ಹೇಳಿದರು.
ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಹೇಳಿಕೆಯನ್ನು ಬೆಂಬಲಿಸಿ, ಮುಸ್ಲಿಂ ಲೀಗ್ ರಾಜ್ಯ ಕಾರ್ಯದರ್ಶಿ ಪಿಎಂಎ ಸಲಾಂ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರ ಹೇಳಿಕೆಗಳನ್ನು ಟೀಕಿಸಿದ್ದರು. “ಧಾರ್ಮಿಕ ವಿದ್ವಾಂಸರು ಧರ್ಮದ ಬಗ್ಗೆ ಮಾತನಾಡುವಾಗ ಇತರರು ಏಕೆ ಹಸ್ತಕ್ಷೇಪ ಮಾಡುತ್ತಾರೆ ಎಂದು ಪಿಎಂಎ ಸಲಾಂ ಪ್ರಶ್ನಿಸಿದರು. ಸಂವಿಧಾನವು ಧರ್ಮದ ಬಗ್ಗೆ ವಿವರಿಸುವ ಮತ್ತು ಪ್ರಚಾರಪಡಿಸುವ ಹಕ್ಕನ್ನು ನೀಡುತ್ತದೆ. ಕಾಂತಪುರಂ ಯಾವಾಗಲೂ ತಪ್ಪುಗಳ ವಿರುದ್ಧ ಧ್ವನಿ ಎತ್ತುವವರಾಗಿದ್ದಾರೆ. ನಾವು ಅದನ್ನು ಲೋಕಸಭೆ ಚುನಾವಣೆಯ ವೇಳೆ ಕಂಡಿದ್ದೇವೆ. ಸಿಪಿಎಂನ ಪಾಲಿಟ್ಬ್ಯೂರೋದಲ್ಲಿ ಒಬ್ಬರೇ ಮಹಿಳೆ ಇದ್ದಾರೆ. ಮಹಿಳೆಯರು ಮುಖ್ಯಮಂತ್ರಿಯಾಗುವುದನ್ನು ತಡೆಯುವ ಸಿಪಿಎಂ ಪಕ್ಷ ಯಾವಾಗಲೂ ಮಹಿಳೆಯರ ವಿರುದ್ಧ ಇರುವ ಮಾರ್ಕ್ಸ್ವಾದಿ ಪಕ್ಷವಾಗಿದೆ” ಎಂದು ಪಿಎಂಎ ಸಲಾಂ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಜಿಫ್ರಿ ತಂಙಳ್ ಅವರ ಹೇಳಿಕೆ ಬಂದಿದೆ.
ಇತ್ತೀಚಿಗೆ ಕುಝಿಮಣ್ಣ್ ಎಂಬಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಧರ್ಮವು ಮಿಶ್ರ-ಲಿಂಗ ವ್ಯಾಯಾಮ ದಿನಚರಿಗಳನ್ನು ಅನುಮೋದಿಸುವುದಿಲ್ಲ ಎಂದು ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಸ್ಪಷ್ಟಪಡಿಸಿದ್ದರು. ವ್ಯಾಯಾಮದ ನೆಪದಲ್ಲಿ ಧಾರ್ಮಿಕ ವಿರೋಧಿ ವಿಚಾರಗಳನ್ನು ಹರಡುವ ಪ್ರಯತ್ನಗಳ ವಿರುದ್ಧ ವಿಶ್ವಾಸಿ ಸಮುದಾಯವು ಜಾಗರೂಕರಾಗಿರಬೇಕು. ಸುನ್ನಿಗಳು ವ್ಯಾಯಾಮವನ್ನು ವಿರೋಧಿಸುವುದಿಲ್ಲ. ಆದರೆ ವಿಶ್ವಾಸಿಗಳು ಎಲ್ಲಾ ವಿಷಯಗಳಲ್ಲಿಯೂ ಧಾರ್ಮಿಕ ನಿಯಮವನ್ನು ಪಾಲಿಸುವವರಾಗಬೇಕು ಎಂದು ಕಾಂತಪುರಂ ಅವರು ಸಲಹೆ ನೀಡಿದರು.
ಕಾಂತಪುರಂ ಉಸ್ತಾದರ ಈ ಹೇಳಿಕೆಯನ್ನು ಪರೋಕ್ಷವಾಗಿ ಟೀಕಿಸಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಮುಂದೆ ಬಂದಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಹೊರಗೆ ಹೋಗುವುದನ್ನು ನಿಷೇಧಿಸುವುದು ಪ್ರತಿಗಾಮಿ ನಿಲುವು ಎಂದು ಗೋವಿಂದನ್ ಹೇಳಿದರು. ಅಂಥ ಕಠಿಣ ನಿಲುವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಅಂತಹ ಜನರು ಪ್ರಗತಿಪರ ನಿಲುವನ್ನು ತಾಳಿ ಮುಂದುವರಿಯಬೇಕಾಗುತ್ತದೆ ಎಂದು ಪಕ್ಷದ ಕಾರ್ಯದರ್ಶಿ ನೆನಪಿಸಿದರು. ಆದರೆ, ಎಂ.ವಿ. ಗೋವಿಂದನ್ ಅವರ ಟೀಕೆಗೆ ಪರೋಕ್ಷವಾಗಿ ಪ್ರತಿಕ್ರಯಿಸಿದ ಕಾಂತಪುರಂ ಎ.ಪಿ. ಉಸ್ತಾದರು, ಕಣ್ಣೂರು ಜಿಲ್ಲೆಯ 18 ಸಿಪಿಎಂ ಪ್ರದೇಶ ಕಾರ್ಯದರ್ಶಿಗಳಲ್ಲಿ ಒಬ್ಬ ಮಹಿಳೆಯೂ ಇಲ್ಲ ಮತ್ತು ಇಸ್ಲಾಂನ ನಿಯಮಗಳನ್ನು ವಿದ್ವಾಂಸರು ನಿರ್ದೇಶಿಸುತ್ತಲೇ ಇರುತ್ತಾರೆ ಎಂದು ಉತ್ತರಿಸಿದರು.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ