ಮನಾಮ: ಪ್ರವಾದಿ ಮುಹಮ್ಮದ್ ﷺ ರವರ 1499 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಕರ್ಣಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಬಹರೈನ್ ಆಯೋಜಿಸಲ್ಪಡುವ ಬೃಹತ್ ಮೀಲಾದ್ ಸಮಾವೇಶ ಕಾರ್ಯಕ್ರಮದ ಸ್ವಾಗತ ಸಮಿತಿಯನ್ನು ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲರವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು.
ಚೇರ್ಮಾನ್: ಲತೀಫ್ ಪೆರೋಲಿ, ವೈಸ್ ಚೇರ್ಮಾನ್: ಅಶ್ರಫ್ ಕಿನ್ಯ, ಕನ್ವೀನರ್: ತೌಫೀಖ್ ಬೆಳ್ತಂಗಡಿ, ವೈಸ್ ಕನ್ವೀನರ್: ಸುಹೈಲ್ ಬೀಸಿ ರೋಡ್, ಫೈನಾನ್ಸ್ ಕಂಟ್ರೋಲರ್: ನಝೀರ್ ಹಾಜಿ ದೇರಳಕಟ್ಟೆ ಹಾಗೂ ಸ್ವಯಂ ಸೇವಕರಾಗಿ ಅಝೀಝ್ ಪುರ್ಷಂಗೋಡಿ, ಮಜೀದ್ ಪೈಂಬಚ್ಚಾಲ್, ಮೂಸಾ ಪೈಂಬಚ್ಚಾಲ್, ರಿಯಾಝ್ ಸುಳ್ಯ, ಸಮದ್ ಉಜಿರೆಬೆಟ್ಟು, ಕರೀಂ ಮಾಝಾ, ಮನ್ಸೂರ್ ಬೆಳ್ಮ ಇವರನ್ನು ನೇಮಿಸಲಾಯಿತು.
“ಮುತ್ತು ನಬಿ ﷺ ಮಾನವೀಯತೆಯ ಮಾರ್ಗದರ್ಶಿ” ಎಂಬ ಘೋಷ ವಾಕ್ಯದೊಂದಿಗೆ ಸೆಪ್ಟೆಂಬರ್ 6 ರಂದು ಶುಕ್ರವಾರ ರಾತ್ರಿ 7:30 ಕ್ಕೆ ಸರಿಯಾಗಿ ಮನಾಮ ಕನ್ನಡ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪ್ರಸ್ತುತ ಕಾರ್ಯಕ್ರಮದಲ್ಲಿ ಹಾಫಿಝ್ ಮಸ್ವೂದ್ ಸಖಾಫಿ ಗೂಡಲ್ಲೂರು ಉಸ್ತಾದರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞ, (ಚಾನ್ಸೆಲರ್ ಯೆನೆಪೋಯ ಡೆವಲ್ಪ್ ಮೆಂಟ್ ಯುನಿವರ್ಸಿಟಿ ಮಂಗಳೂರು) ಅಬ್ದುಲ್ ಲತೀಫ್ (ಮ್ಯಾನೇಜಿಂಗ್ ಡೈರೆಕ್ಟರ್ ಹಿಲಾಲ್ ಹಾಸ್ಪಿಟಲ್ ಬಹರೈನ್) ಡಾ. ಯು.ಟಿ. ಇಫ್ತಿಕಾರ್ ಫರೀದ್ ಉಳ್ಳಾಲ ಮುಂತಾದ ಗಣ್ಯ ವ್ಯಕ್ತಿಗಳು, ಪ್ರಬುದ್ಧ ಸಾದಾತುಗಳು ಹಾಗೂ ಉಲಮಾ ಉಮರಾ ನೇತಾರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಎಂದು ಕಾರ್ಯಕರ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಸಿಎಫ್ ನೋರ್ತ್ ಝೋನ್ ಕಾರ್ಯದರ್ಶಿ ಸಿದ್ದೀಖ್ ಉಸ್ತಾದ್ ದುಆ ಗೈದರು. ರಾಷ್ಟ್ರೀಯ ಸಮಿತಿ ರಿಲೀಫ್ ವಿಂಗ್ ಕಾರ್ಯದರ್ಶಿ ಸುಹೈಲ್ ಬೀಸಿ ರೋಡ್ ಸ್ವಾಗತಿಸಿದರು. ರಾಷ್ಟ್ರೀಯ ಸಮಿತಿ ಸಂಘಟನಾ ಅಧ್ಯಕ್ಷರಾದ ಖಲಂದರ್ ಉಸ್ತಾದ್ ಧನ್ಯವಾದ ಸಲ್ಲಿಸಿದರು.
✍️ ಎಂ. ಎ. ವೇಣೂರು.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ