janadhvani

Kannada Online News Paper

ಜ.18: ಮಿತ್ತೂರು ಕೆಜಿಎನ್ ಕ್ಯಾಂಪಸ್- ದಾರುಲ್ ಇರ್ಶಾದ್ ಸನದುದಾನ ಮಹಾ ಸಮ್ಮೇಳನ, ಅಜ್ಮೀರ್ ಮೌಲಿದ್

ಮಾಣಿ : ದಾರುಲ್ ಇರ್ಶಾದ್ ಎಜ್ಯುಕೇಶನಲ್ ಸೆಂಟರ್ ಮಾಣಿ, ವರ್ಷಂಪ್ರತೀ ನಡೆಸಿಕೊಂಡು ಬರುತ್ತಿರುವ ಅಜ್ಮೀರ್ ಮೌಲಿದ್ ಏರ್ವಾಡಿ ಶುಹದಾಗಳ ನೇರ್ಚೆ, ಖತ್ಮುಲ್ ಖುರ್‌ಆನ್ ಮಜ್ಲಿಸ್ ಮತ್ತು ಸನದುದಾನ ಮಹಾ ಸಮ್ಮೇಳನವು ಜನವರಿ 18 ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಮಿತ್ತೂರು ಕೆಜಿಎನ್ ಕ್ಯಾಂಪಸ್ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ, ಸಯ್ಯಿದ್ ಫಝಲ್ ಕೋಯಮ್ಮ ಕೂರತ್ ತಂಙಳ್, ಸಯ್ಯಿದ್ ಸ್ವಲಾಹುದ್ದೀನ್ ಅಲ್ ಅದನಿ, ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದರ ಸಹಿತ ಹಲವಾರು ಸಯ್ಯಿದ್ ಗಳು ನೂರಾರು ಉಲಮಾ ಉಮರಾ ಗಳು,ನೇತಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು ಎಂದು ಸ್ವಾಗತ ಸಮಿತಿ ಪ್ರಕಟಣೆ ನೀಡಿದೆ.

error: Content is protected !! Not allowed copy content from janadhvani.com