janadhvani

Kannada Online News Paper

ಭಟ್ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಯಾಕೆ ಹಿಂಜರಿಯುತ್ತಿದೆ? – ಮುನೀರ್ ಕಾಟಿಪಳ್ಳ

ಮುಸಲ್ಮಾನ ಮುಖಂಡನೊಬ್ಬ ಈ ರೀತಿ ಭಿನ್ನ ಧರ್ಮದ ಕುರಿತು ಅಸಭ್ಯವಾಗಿ ಮಾತಾಡಿದ್ದರೆ ಏನೆಲ್ಲ ಸಂಭವಿಸುತ್ತಿತ್ತು?

ಮಂಗಳೂರು: ವಿವಾದಾತ್ಮಕ ಹೇಳಿಕೆ ನೀಡಿರುವ ಕರ್ನಾಟಕ ಪ್ರಭಾಕರ ಭಟ್ ವಿರುದ್ಧ ಎಫ್ ಐ ಆರ್ ದಾಖಲಿಸಲು ರಾಜ್ಯ ಸರ್ಕಾರ ಯಾಕೆ ಹಿಂಜರಿಯುತ್ತಿದೆ ಎಂದು DYFI ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.

ಮುಸ್ಲಿಂ ಮಹಿಳೆಯರ ಕುರಿತು ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆಯು ಕಾನೂನು ಕ್ರಮಕ್ಕೆ ಅರ್ಹ ಆಗಿಲ್ಲವೇ? ಮುಸಲ್ಮಾನ ಮುಖಂಡನೊಬ್ಬ ಈ ರೀತಿ ಭಿನ್ನ ಧರ್ಮದ ಕುರಿತು ಅಸಭ್ಯವಾಗಿ ಮಾತಾಡಿದ್ದರೆ ಏನೆಲ್ಲ ಸಂಭವಿಸುತ್ತಿತ್ತು? ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಮರನ್ನು ಖುಷಿಪಡಿಸುವ ಹೇಳಿಕೆಗಳನ್ನು ನೀಡಿ ಬಿಜೆಪಿ ಗರ ಬಾಯಲ್ಲಿ ಮುಸ್ಲಿಮರನ್ನು ಹೊಲಸು ಮಾತುಗಳ ನಿಂದನೆಗೆ ಗುರಿಪಡಿಸುತ್ತಿದ್ದಾರೆ.

ಹಾಗಾಗಿ ಸಿದ್ದರಾಮಯ್ಯರಿಗೆ ಪ್ರಾಮಾಣಿಕತೆ ಇದ್ದರೆ ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ಕಠಿಣ ಸೆಕ್ಷನ್ ಅಡಿ ಮೊಕದ್ದಮೆ ಹೂ ಡಿ ಜೈಲಿಗೆ ಕಳುಹಿಸಿಲಿ.. ಎಂದು DYFI ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ ರವರು ಸರ್ಕಾರವನ್ನು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

error: Content is protected !! Not allowed copy content from janadhvani.com