janadhvani

Kannada Online News Paper

ಮದನೀಸ್ ಅಸೋಸಿಯೇಷನ್ ಬಂಟ್ವಾಳ ತಾಲೂಕು: ಸದಸ್ಯತ್ವ ಅಭಿಯಾನಕ್ಕೆ ಶೈಖುನಾ ಮಂಚಿ ಉಸ್ತಾದರಿಂದ ಚಾಲನೆ

ಬಂಟ್ವ‍ಾಳ: ಮದನೀಸ್ ಅಸೋಸಿಯೇಷನ್ ಬಂಟ್ವಾಳ ತಾಲೂಕು ಸಮಿತಿ ಇದರ 2024-27 ರ ಸದಸ್ಯತ್ವ ಅಭಿಯಾನ 2023 ಡಿಸೆಂಬರ್ 1 ಶುಕ್ರವಾರ ಬೆಳಿಗ್ಗೆ ಶೈಖುನಾ ಮಂಚಿ ಉಸ್ತಾದ್ ಗೆ ನೀಡುವ ಮೂಲಕ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಸಮಿತಿ ಪ್ರ.ಕಾರ್ಯದರ್ಶಿ ಅಕ್ಬರ್ ಅಲಿ ಮದನಿ ಆಲಂಪಾಡಿ ಸ್ವಾಗತಿಸಿದ ಸಭೆಯನ್ನು ಕೇಂದ್ರ ಮದನೀಸ್ ಉಪಾಧ್ಯಕ್ಷರಾದ UK ಅಬೂಬಕ್ಕರ್ ಮದನಿ ಮುದುಂಗಾರುಕಟ್ಟೆ ಉಧ್ಘಾಟಿಸಿದರು. ಶೈಖುನಾ ಮಂಚಿ ಉಸ್ತಾದ್ ಅನುಸ್ಮರಣೆ ಭಾಷಣ ಮಾಡಿದರು.

ಕೇಂದ್ರ ಮದನೀಸ್ ಕಾರ್ಯದರ್ಶಿ KM ಮುಹಿಯುದ್ದೀನ್ ಮದನಿ ಕಟ್ಟತ್ತಿಲ ಆಶಂಸ ಭಾಷಣ ಮಾಡಿದರು. ಮದನೀಸ್ ಬಂಟ್ವಾಳ ತಾಲೂಕು ಕೋಶಾಧಿಕಾರಿ ಮುಹಮ್ಮದ್ ಮದನಿ
(ಅಲ್ ಮಾಸ್), ಮದನೀಸ್ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಅಲಿ ಮದನಿ ಸೆರ್ಕಳ, ಜಿಲ್ಲಾ ಸದಸ್ಯರಾದ ಅಝೀಝ್ ಮದನಿ ಮಂಚಿ, ಬಂಟ್ವಾಳ ತಾಲೂಕು ಎಲೆಕ್ಷನ್ ಸಮಿತಿ ಕನ್ವಿನರ್ ಶಾಫಿ ಮದನಿ ಸುರಿಬೈಲು, ಎಲೆಕ್ಷನ್ ಸಮಿತಿ ಸದಸ್ಯರಾದ MM ಉಮರ್ ಮದನಿ ಪರಪ್ಪುಹಾಗೂ ಇಕ್ಬಾಲ್ ಮದನಿ ಕಟ್ಟತ್ತಿಲ,ಹಕೀಂ ಮದನಿ ಮದಕ,ರಝ್ಝಾಖ್ ಮದನಿ ಸೆರ್ಕಳ ಉಪಸ್ಥಿತರಿದ್ದರು. ಶಾಫಿ ಮದನಿ ಸುರಿಬೈಲು ಧನ್ಯವಾದ ಹೇಳಿದರು.

error: Content is protected !! Not allowed copy content from janadhvani.com