janadhvani

Kannada Online News Paper

ಕೊಡಂಗಾಯಿ ದಾರುನ್ನಜಾತ್ ನಲ್ಲಿ ‘ಇಲಲ್ ಹಬೀಬ್’ ಮೀಲಾದ್ ಫೆಸ್ಟ್

ವಿಟ್ಲ: ಟಿಪ್ಪು ನಗರ ಕೊಡಂಗಾಯಿ ಅಲ್ ಮದ್ರಸತುನ್ನವವಿಯ್ಯ ಮತ್ತು ದರ್ಸ್ ವಿದ್ಯಾರ್ಥಿಗಳ ಇಲಲ್ ಹಬೀಬ್ ಮೀಲಾದ್ ಪೆಸ್ಟ್ ಕಾರ್ಯಕ್ರಮವು ಬಹಳ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮ್ಯಾನೇಜರ್ ಹಾಜಿ ಹಮೀದ್ ಕೊಡಂಗಾಯಿ ನಿರ್ವಹಿಸಿದರು. ಸಭೆ ಉದ್ಘಾಟಿಸಿ
ಬಹು ಸಯ್ಯಿದ್ ಶಮೀಮ್ ತಂಙಳ್ ಅಲ್ ಬುಖಾರಿ ಅವರು ಪ್ರಾರ್ಥನೆಗೆ ನೇತೃತ್ವ ನೀಡಿದರು.ಕಾರ್ಯಕ್ರಮ ವೈವಿಧ್ಯಮಯ ಮೂಲಕ ಮೌಲಿದ್ ಮಜ್ಲಿಸ್ ವಿದ್ಯಾರ್ಥಿಗಳ ಮಿಲಾದ್ ಸಾಂಸ್ಕೃತಿಕ ಕಾರ್ಯಕ್ರಮ ದಫ್ ಪ್ರದರ್ಶನ ನಡೆಯಿತು. ದಾರುನ್ನಜಾತ್ ಸಮಿತಿಯ ವತಿಯಿಂದ ಬಹುಮಾನ ವಿತರಿಸಲಾಯಿತು.

ಅಧ್ಯಾಪಕರಾದ ಅಬ್ದುಲ್ ರಝಾಕ್ ಸಅದಿ ಸ್ವಾಗತಿಸಿದರು. ಈ ಸಂದರ್ಬದಲ್ಲಿ ಸಿದ್ದೀಕ್ ಮದನಿ,ಉಸ್ಮಾನ್ ಮುಸ್ಲಿಯಾರ್, ಇಬ್ರಾಹಿಮ್ ಮುಸ್ಲಿಯಾರ್ ಟಿಪ್ಪು ನಗರ,ಡಾ/ಹಸೈನಾರ್ ಟಿಪ್ಪು ನಗರ,ಅಬ್ಬಾಸ್ ಬಿಡಿ,ಇಬ್ರಾಹಿಂ ಮೋನು,ಶಾಫಿ ಇಂಜಿನಿಯರ್,ಉಸ್ಮಾನ್ ಹಾಜಿ,SMA ವಿಟ್ಲ ರೀಜಿನಲ್ ಅಧ್ಯಕ್ಷರಾದ ಅಬ್ದುಲ್ ಹಕೀಮ್,ಖಾದರ್ ದಫ್ ಉಸ್ತಾದ್,ಅಂಝ ಟಿಪ್ಪು ನಗರ, ಅಬೂಬಕ್ಕರ್ ಹಾಗೂ ಹಲವು ಉಲಮಾ ಉಮಾರಾಗಳು ಉಪಸ್ಥಿತರಿದ್ದರು.ಆಪಿಳ ಶರೀಫ್ ಮುಸ್ಲಿಯರ್ ಹೊಂದಿಸಿದರು.

error: Content is protected !! Not allowed copy content from janadhvani.com