ಮಂಜನಾಡಿ: ಮಅದನುಲ್ ಉಲೂಂ ಮದ್ರಸ ಮಂಗಳಾಂತಿ ಇದರ ವಿದ್ಯಾರ್ಥಿ ಸಂಘಟನೆಯಾದ ಎಸ್. ಬಿ.ಎಸ್ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಸಭೆಯಲ್ಲಿ ಮದ್ರಸದ ಸದರ್ ಮುಅಲ್ಲಿಮರಾದ ಮುಹಮ್ಮದ್ ಸಯೀದ್ ಸಅದಿ ಅಲ್ ಅಫ್ಲಲಿ ಸೆರ್ಕಳ ಅಧ್ಯಕ್ಷತೆ ವಹಿಸಿ ಪ್ರಾರ್ಥನೆಗೆ ನೇತೃತ್ವ ನೀಡಿದರು. ಧಾರ್ಮಿಕ -ಲೌಕಿಕ ಜ್ಞಾನವನ್ನು ಮೈಗೂಡಿಸುವ ವಿದ್ಯಾರ್ಥಿ ಸಮೂಹವು ಆಧುನಿಕತೆಯಿಂದ ಮೈಮರೆತ ಯುವ ಪೀಳಿಗೆಗೆ ಮಾದರಿಯಾಗಬೇಕೆಂದೂ, ಪವಿತ್ರ ಇಸ್ಲಾಮಿನ ಶಾಂತಿ ಸೌಹಾರ್ದತೆಯನ್ನು ತಮ್ಮ ಜೀವನದ ಮೂಲಕ ಸಮಾಜಕ್ಕೆ ತೋರಿಸಿ ಕೊಡಬೇಕೆಂದೂ ಅಧ್ಯಕ್ಷ ಭಾಷಣದಲ್ಲಿ ಸೂಚಿಸಿದರು.
ಅಧ್ಯಾಪಕರಾದ ಸಿದ್ದೀಖ್ ಅಹ್ಸನಿ ಅಸೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿಝಾರ್ ಸಖಾಫಿ ಕಲ್ಕಟ್ಟ ಹಾಗೂ ಫಾರೂಕ್ ಹಿಮಮಿ ಕಿನ್ಯಾ ಕಾರ್ಯಕ್ರಮದಲ್ಲಿ ಶುಭಕೋರಿದರು.
ತದನಂತರ ನೂತನ ಸಮಿತಿಯನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಸಿನಾನ್ ಉಪಾಧ್ಯಕ್ಷರಾಗಿ ಸವಾನ್ ಕಾರ್ಯದರ್ಶಿ ತಾಹಿರ್, ಜೊತೆ ಕಾರ್ಯದರ್ಶಿ ನಿಯಾಫ್ ಹಾಗೂ ಕೋಶಾಧಿಕಾರಿಯಾಗಿ ಬಶಾರತ್ ರನ್ನೂ ಕಾರ್ಯಕಾರಿ ಸದಸ್ಯರುಗಳಾಗಿ ಆದಿಲ್, ಶಹೀರ್, ಅಫ್ಲಲ್, ನಜಾಫ್, ಶಾಹಿನ್, ನಿಹಾಲ್, ಫಾಝಿಲ್, ಆಶಿಖ್ ಎಂಬಿವರನ್ನು ಆರಿಸಲಾಯಿತು. ಏಳು ತಂಡಗಳಾಗಿ ನಡೆಯುವ ಸಾಹಿತ್ಯ ಸಮಾಜಕ್ಕೆ ಸಿನಾನ್, ತಾಹಿರ್, ನಿಯಾಫ್, ಆಝಿಲ್, ವಫಾ, ನುಹಾ ಹಾಗೂ ತೌಸಿಯಾ ರನ್ನು ನಾಯಕರನ್ನಾಗಿ ನೇಮಿಸಲಾಯಿತು. ಅಧ್ಯಾಪಕರಾದ ಇರ್ಷಾದ್ ರಝ್ವಿ ಕಾರ್ಯಕ್ರಮವನ್ನು ಸ್ವಾಗತಿಸಿ ಸಿನಾನ್ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್