janadhvani

Kannada Online News Paper

ಉಮ್ರಾ ನಿರ್ವಹಿಸಿ ಮರಳುವ ವೇಳೆ ಮಹಿಳೆ ಮಸ್ಕತ್ತಿನಲ್ಲಿ ನಿಧನ- ಮಯ್ಯಿತ್ ನ್ನು ಊರಿಗೆ ತಲುಪಿಸಲು KCF ನೆರವು

ಮುಂಬೈಗೆ ತೆರಳುವ ವಿಮಾನವು ನಬೀಸ ಅವರ ಅನಾರೋಗ್ಯದ ಕಾರಣ ತುರ್ತಾಗಿ ಮಸ್ಕತ್ತಿನಲ್ಲಿ ಲ್ಯಾಂಡ್ ಮಾಡಲಾಯಿತು.

ಮಸ್ಕತ್: ಪವಿತ್ರ ಉಮ್ರಾ ಯಾತ್ರೆ ಮುಗಿಸಿ ಊರಿಗೆ ಹಿಂದಿರುಗುವ ವೇಳೆ ಕನ್ಯಾನ ಸಂಕದ ಬಳಿ ಹನೀಫ್ ಅವರ ತಾಯಿ ನೆಬೀಸ ಎಂಬವರು ಮೃತಪಟ್ಟ ಘಟನೆ ಕಳೆದ ಗುರುವಾರ ನಡೆದಿದೆ.

ಮದೀನದಿಂದ ಊರಿಗೆ ಹಿಂತಿರುಗುವ ವೇಳೆ ಮುಂಬೈಗೆ ತೆರಳುವ ವಿಮಾನವು ನಬೀಸ ಅವರ ಅನಾರೋಗ್ಯದ ಕಾರಣ ತುರ್ತಾಗಿ ಮಸ್ಕತ್ತಿನಲ್ಲಿ ಲ್ಯಾಂಡ್ ಮಾಡಲಾಯಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾದರೂ, ಅವರು ಇಹಲೋಕ ತ್ಯಜಿಸಿದ್ದರು.

ಆಸ್ಪತ್ರೆಯಲ್ಲಿ ಬೇಕಾದ ಎಲ್ಲಾ ಕಾರ್ಯಗಳ ನೇತೃತ್ವವನ್ನು KCF ಒಮಾನಿನ ಸಾಂತ್ವನ ವಿಭಾಗವು ವಹಿಸಿತು. ನಂತರ ಅವರನ್ನು ಊರಿಗೆ ಕಳಿಸಲು ಬೇಕಾದ ಎಲ್ಲಾ ದಾಖಲೆಗಳನ್ನು ಸರಿಮಾಡಿಸಿ ಕಳೆದ ದಿನ KCF ಒಮಾನಿನ ನಾಯಕರು ಅವರ ಮೃತದೇಹವನ್ನು ಊರಿಗೆ ಕಳುಹಿಸಿದರು.

ಅವರ ಪಾರತ್ರಿಕ ವಿಜಯಕ್ಕಾಗಿ ಪ್ರತಿಯೊಬ್ಬರೂ ಪ್ರಾರ್ಥಿಸಬೇಕಾಗಿಯೂ, ಅವರ ಹೆಸರಿನಲ್ಲಿ ತಹ್ಲೀಲ್ ಹಾಗೂ ಖುರ್ ಆನ್ ಓದಿ ಹದಿಯ ಮಾಡಬೇಕಾಗಿಯೂ ಆ ತಾಯಿಯ ಮೇಲೆ ಮಯ್ಯತ್ತ್ ನಮಾಝಿ ನಿರ್ವಹಿಸಬೇಕಾಗಿಯೂ KCF ಒಮಾನ್ ತನ್ನ ಪ್ರಕಟನೆಯಲ್ಲಿ ವಿನಂತಿಸಿಕೊಂಡಿದೆ.

error: Content is protected !! Not allowed copy content from janadhvani.com