ಶಾರ್ಜಾ: ಯುಎಇಯ ಉತ್ತರ ಎಮಿರೇಟ್ಸ್ನಲ್ಲಿ ಮರಣ ಹೊಂದುವ ವಲಸಿಗರ ಮೃತ ದೇಹಗಳಿಗಾಗಿ ಶಾರ್ಜಾದಲ್ಲಿ ಹೊಸ ಎಂಬಾಮಿಂಗ್ ಕೇಂದ್ರವು(Embalming Centre) ಶೀಘ್ರದಲ್ಲೇ ಕಾರ್ಯಾಚರಣೆಗೊಳ್ಳಲಿದೆ.
ಈ ಬಗ್ಗೆ ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಅಧ್ಯಕ್ಷರಾದ ಅಡ್ವ. ವೈ.ಎ. ರಹೀಮ್ ಮಾಹಿತಿ ನೀಡಿದರು. ಶಾರ್ಜಾದ ಆಡಳಿತಗಾರ ಶೈಖ್ ಡಾ. ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿ ಅವರ ವಿಶೇಷ ಆದೇಶದ ಮೇಲೆ ಹೊಸ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ.
ಶಾರ್ಜಾ, ಅಜ್ಮಾನ್, ಉಮ್ ಅಲ್-ಖುವೈನ್ ಮತ್ತು ಫುಜೈರಾದಲ್ಲಿನ ಮೃತ ದೇಹಗಳನ್ನು ಎಂಬಾಮ್ ಮಾಡಲು ಹೊಸ ಕೇಂದ್ರವು, ಶಾರ್ಜಾ ವಿಮಾನ ನಿಲ್ದಾಣ (Sharjah International Airport) ಸಮೀಪದ ವಿಧಿವಿಜ್ಞಾನ ಪ್ರಯೋಗಾಲಯದ (Forensic Laboratory) ಕಟ್ಟಡದಲ್ಲಿ (ಅಲ್ ರಿಫಾ ಪಾರ್ಕ್ ಬಳಿ) ಕಾರ್ಯನಿರ್ವಹಿಸಲಿದೆ.
ಪ್ರಸ್ತುತ ಅಬುಧಾಬಿ, ದುಬೈ, ಅಲ್ ಐನ್ ಮತ್ತು ರಾಸ್ ಅಲ್ ಖೈಮಾದಲ್ಲಿ ಎಂಬಾಮಿಂಗ್ ಕೇಂದ್ರಗಳಿವೆ. ಯುಎಇಯಲ್ಲಿನ ಐದನೇ ಎಂಬಾಮಿಂಗ್ ಕೇಂದ್ರವನ್ನು ಶಾರ್ಜಾದಲ್ಲಿ ತೆರೆಯಲಾಗುತ್ತಿದೆ. ಶಾರ್ಜಾದ ಕೇಂದ್ರವ ಒಂದು ಮೃತ ದೇಹವನ್ನು ಎಂಬಾಮ್ ಮಾಡಲು 2200 ದಿರ್ಹಮ್ಗಳನ್ನು ವಿಧಿಸುತ್ತದೆ. ವೈದ್ಯರು, ನರ್ಸ್, ತಂತ್ರಜ್ಞರು ಮತ್ತು ಸಹಾಯಕರು ಸೇರಿದಂತೆ
ಹೊಸ ಎಂಬಾಮಿಂಗ್ ಕೇಂದ್ರದಲ್ಲಿ ಸರ್ಕಾರ ಏಳು ನೌಕರರನ್ನು ನೇಮಿಸಿದೆ.
ಪ್ರಸ್ತುತ, ದುಬೈ ಸೋನಾಪುರ ಎಂಬಾಮಿಂಗ್ ಕೇಂದ್ರದಲ್ಲಿ ಎಂಬಾಮಿಂಗ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಉತ್ತರ ಎಮಿರೇಟ್ಸ್ನ ಮೃತದೇಹಗಳನ್ನು ಶಾರ್ಜಾ ವಿಮಾನ ನಿಲ್ದಾಣ ಮತ್ತು ಇತರ ಸ್ಥಳಗಳ ಮೂಲಕ ಮನೆಗೆ ಕೊಂಡೊಯ್ಯಲಾಗುತ್ತಿದೆ. ಅದೂ ಅಲ್ಲದೇ, ದುಬೈನಲ್ಲಿ ಎಂಬಾಮಿಂಗ್ ಪ್ರಕ್ರಿಯೆಯು ಪೂರ್ಣಗೊಳ್ಳಲು ಬಹಳಷ್ಟು ವಿಳಂಬವಾಗುತ್ತಿದೆ.
ಶಾರ್ಜಾದಲ್ಲಿ ಕೇಂದ್ರವನ್ನು ತೆರೆಯುವುದರೊಂದಿಗೆ, ಉತ್ತರ ಎಮಿರೇಟ್ಸ್ನಲ್ಲಿರುವ ಮೃತರ ಸಂಬಂಧಿಕರು ಮತ್ತು ಸ್ನೇಹಿತರು ಸೋನಾಪುರವನ್ನು ತಲುಪಬೇಕಾದ ಸಮಯವನ್ನು ಉಳಿಸಲಿದ್ದಾರೆ.
ಸೋನಾಪುರಕ್ಕೆ ಹೋಲಿಸಿದರೆ, ಮೃತ ದೇಹವನ್ನು ಎಂಬಾಮಿಂಗ್ ಮಾಡಲು ಶಾರ್ಜಾ ಅಗ್ಗವಾಗಿದೆ.ಇತರ ಕೇಂದ್ರಗಳ ದರಗಳೆಂದರೆ, ಅಬುಧಾಬಿ -1000 ದಿರ್ಹಮ್ಗಳು, ಅಲ್ ಐನ್ – 1000, ದುಬೈ – 3120 ದಿರ್ಹಮ್ಗಳು ಮತ್ತು ರಾಸ್ ಅಲ್ ಖೈಮಾ – 4000 ದಿರ್ಹಮ್ಗಳಾಗಿವೆ.
ಶಾರ್ಜಾದಲ್ಲಿ ಎಂಬಾಮಿಂಗ್ ಕೇಂದ್ರ ಆರಂಭಿಸಬೇಕೆಂಬ ವಲಸಿಗರ ಬಹುಕಾಲದ ಬೇಡಿಕೆಯು ಹತ್ತು ವರ್ಷಗಳ ಬಳಿಕ, ಇದೀಗ ಸಫಲವಾಗಿದೆ.
















ಇನ್ನಷ್ಟು ಸುದ್ದಿಗಳು
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ತೆಗೆಸಿದ ಘಟನೆ: ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ
ಇಂಡಿಯನ್ ಗ್ರಾಂಡ್ ಮುಫ್ತಿ ಜಿಲ್ಲೆಗೆ- ಯಶಸ್ವಿಗಾಗಿ ಸಮಾಲೋಚನಾ ಸಭೆ
ಭಾರತವನ್ನು ‘ನರಕ’ ಎಂದ ಟ್ರಂಪ್ ಪೋಸ್ಟ್- ಮೌನಕ್ಕೆ ಶರಣಾದ ವಿದೇಶಾಂಗ ಇಲಾಖೆ
ಅಲ್ ಮದೀನ ಇಂಗ್ಲಿಷ್ ಮೀಡಿಯಂ ಶಾಲೆಗೆ ಶೇ.100 ಫಲಿತಾಂಶ- ನಾಲ್ವರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ