ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಇದರ ವಾರ್ಷಿಕ ಕೌನ್ಸಿಲ್ ಸಭೆಯು ಇತ್ತೀಚೆಗೆ ಶರಫುಲ್ ಉಲಮಾ ಆಡಿಟೋರಿಯಂ,ಅಲ್ ಮದೀನಾ ಕ್ಯಾಂಪಸ್ ಮಂಜನಾಡಿ ಯಲ್ಲಿ ಜಿಲ್ಲಾಧ್ಯಕ್ಷ ಸಿ.ಎಚ್.ಮುಹಮ್ಮದ್ ಅಲೀ ಸಖಾಫಿ ಅಶ್ಅರಿಯ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಅಲ್ ಮದೀನಾ ಮಂಜನಾಡಿ, ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ದುಆ ನಿರ್ವಹಿಸಿದರು. ರಾಜ್ಯ ಎಸ್ ವೈ ಎಸ್ ದಅವ ಕಾರ್ಯದರ್ಶಿ ಕೆ.ಕೆ.ಎಂ ಕಾಮಿಲ್ ಸಖಾಫಿ ಕೃಷ್ಣಾಪುರ ಉದ್ಘಾಟಸಿದರು. ಖ್ಯಾತ ವಾಗ್ಮಿ ಮೂಸ ಸಖಾಫಿ ಮುಹಿಮ್ಮಾತ್ ವಿಷಯ ಮಂಡಿಸಿದರು.
ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮಾಲಿಕಿ ವಾರ್ಷಿಕ ವರದಿ, ಕೋಶಾಧಿಕಾರಿ ಬಾವ ಫಕ್ರುದ್ದೀನ್ ಲೆಕ್ಕ ಪತ್ರ ಮಂಡಿಸಿದರು.
ಎಸ್ ವೈ ಎಸ್ ರಾಜ್ಯಾಧ್ಯಕ್ಷ ಡಾ.ಅಬ್ದಲ್ ರಶೀದ್ ಝೈನಿ ಕಾಮಿಲ್ ಸಂಘಟನೆ ಎಸ್ ವೈ ಎಸ್ 30 ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ 30 ಅಂಶ ಕಾರ್ಯಕ್ರಮವನ್ನು ಮಂಡಿಸಿದರು.
ರಾಜ್ಯ ನಾಯಕ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಶುಭಹಾರೈಸಿದರು.
ಸಭೆಯಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಬೈಕಂಪಾಡಿ, ವಕ್ಫ್ ಜಿಲ್ಲಾ ಸದಸ್ಯ ಅಶ್ರಫ್ ಕಿನಾರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪುತ್ತೂರು ಘಟಕ ವ್ಯವಸ್ಥಾಪಕ ಇಸ್ಮಾಯಿಲ್ ನಾವೂರು ಕೆಎಸ್ಸಾರ್ಟಿಸಿ, ಮರ್ಕಝುಲ್ ಹುದಾ ಕುಂಬ್ರ ಇದದ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಎಸ್.ಎಂ.ಬಶೀರ್ ಹಾಜಿ ಕುಂಬ್ರ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಎಸ್ ವೈ ಎಸ್ ರಾಜ್ಯ ನಾಯಕರಾದ ಬಿ.ಜಿ.ಹನೀಫ್ ಹಾಜಿ ಉಳ್ಳಾಲ,ಮಾಜಿ ರಾಜ್ಯಾಧ್ಯಕ್ಷ ಪಿ.ಎಂ.ಉಸ್ಮಾನ್ ಸಅದಿ ಪಟ್ಟೋರಿ, ಜಂಇಯತುಲ್ ಉಲಮಾ ನಾಯಕ ಡಿ.ಎಚ್ ಇಬ್ರಾಹಿಂ ಸಅದಿ, ಜಂಇಯತುಲ್ ಮುಅಲ್ಲಿಮೀನ್ ರಾಜ್ಯಾಧ್ಯಕ್ಷ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು,
ಜಿಲ್ಲಾ ಉಪಾಧ್ಯಕ್ಷ ಮುಹಮ್ಮದ್ ಮದನಿಸಾಮಣಿಗೆ, ಜಿಲ್ಲಾ ಕಾರ್ಯದರ್ಶಿಗಳಾದ ಇಸ್ಹಾಕ್ ಝುಹ್ರಿ ಕಾನಕೆರೆ, ಅಬ್ದುಲ್ ರಝಾಕ್ ಮದನಿ ಅಲ್ ಕಾಮಿಲ್, ಕೆ.ಇ.ಅಬ್ದುಲ್ ಖಾದರ್ ರಝ್ವಿ, ಸುನ್ನೀ ನಾಯಕ ಎನ್.ಎಸ್. ಉಮರ್ ಮಾಸ್ಟರ್ ಮುಂತಾದವರು ಉಪಸ್ಥಿತರಿದ್ದರು.
ಸಭೆಯಲ್ಲಿ ಜಿಲ್ಲೆಯ 21 ಸೆಂಟರ್ ಗಳಿಂದ ಆಯ್ಕೆಯಾದ ಜಿಲ್ಲಾ ಕೌನ್ಸಿಲರ್ಸ್ ಭಾಗವಹಿಸಿದರು.
ಜಿಲ್ಲಾ ದಅವಾ ಕಾರ್ಯದರ್ಶಿ ಬಶೀರ್ ಮದನಿ ಕೂಳೂರು ಕಾರ್ಯಕ್ರಮ ನಿರೂಪಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮಾಲಿಕಿ ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದರು.