ಆ ಕಾರು ಇವರ ಹೆಸರಿನಲ್ಲಿ ನೊಂದಾವಣೆ ಆಗಿರುವುದರಿಂದ ಕಾನೂನಿನ ಮುಂದೆ ಇವರು ತಪ್ಪಿತಸ್ಥರಾಗುತ್ತಾರೆ.
ಮಾಲಿಕನು ಮಾಡಿದ ಈ ವಂಚನೆಯಿಂದಾಗಿ ಸರಿಸುಮಾರು 27,000 ರಿಯಾಲ್ (5 ಲಕ್ಷ ರೂಪಾಯಿ) ನಷ್ಟು ದಂಡ ಕಟ್ಟ ಬೇಕಾದ ಸನ್ನಿವೇಶ ಎದುರಾಗಿತ್ತು.ಹಲವರಲ್ಲಿ ಈ ವಿಷಯ ಪ್ರಸ್ತಾಪ ಮಾಡಿದರೂ ಏನೂ ಪ್ರಯೋಜನವಾಗಿಲ್ಲ.
ಕೊನೆಗೆ ಈ ವಿಷಯ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಮುಹಮ್ಮದ್ ಮಲೆಬೆಟ್ಟು ರವರ ಗಮನಕ್ಕೆ ಬಂದು ಇದನ್ನು ಕೆಸಿಎಫ್ ದಮ್ಮಾಮ್ ಝೋನಲ್ ಅಧೀನದಲ್ಲಿರುವ ಕೆಸಿಎಫ್ ಜುಬೈಲ್ ಸೆಕ್ಟರ್ ನೇತಾರರಿಗೆ ತಿಳಿಸುತ್ತಾರೆ.
ನಂತರ ಮುಹಮ್ಮದ್ ಮಲೆಬೆಟ್ಟು, ರಾಷ್ಟ್ರೀಯ ಸಮಿತಿ ಸಂಘಟನಾ ಇಲಾಖೆಯ ಅಧ್ಯಕ್ಷ ಫೈಸಲ್ ಕೃಷ್ಣಾಪುರ, ಜುಬೈಲ್ ಸೆಕ್ಟರ್ ನೇತಾರಾದ ನೌಫಲ್ ಮುಲ್ಕಿ, ಅಬ್ದುಲ್ ರಹ್ಮಾನ್ ಕೆಮ್ಮಾರ ಹಾಗೂ ಜುಬೈಲ್ ನಲ್ಲಿರುವ ಕೆಸಿಎಫ್ ಹಿತೈಷಿಗಳಾದ ಇಬ್ರಾಹಿಮ್ ಬಜ್ಪೆ (ಇಬ್ಬ) ರವರು ಈ ವಿಷಯವಾಗಿ ಜುಬೈಲ್ ನಲ್ಲಿ ಇರುವ ದಾನಿಗಳನ್ನು ಭೇಟಿಯಾಗಿ ಇದಕ್ಕೆ ಬೇಕಾದ ಆರ್ಥಿಕ ವ್ಯವಸ್ಥೆಯನ್ನು ಮಾಡಿದರು.ಬಳಿಕ ಮುಹಮ್ಮದ್ ಮಲೆಬೆಟ್ಟು ರವರ ನೇತ್ರತ್ವದಲ್ಲಿ ಅಗತ್ಯ ದಾಖಲೆಗಳನ್ನೆಲ್ಲಾ ಸರಿಪಡಿಸಿ ಅವರ ಮೇಲೆ ಮಾಡಲಾಗಿದ್ದ ಆರೋಪದಿಂದ ಅವರನ್ನು ಮುಕ್ತಗೊಳಿಸಿದರು.
ಕೆಸಿಎಫ್ ರಾಷ್ಟ್ರೀಯ ಸಮಿತಿ ನೇತಾರರು, ದಮ್ಮಾಮ್ ಝೋನಲ್ ಸಾಂತ್ವನ ಇಲಾಖೆಯ ಅಧ್ಯಕ್ಷ ಬಾಷಾ ಗಂಗಾವಳಿ ಸಹಿತ ಇತರ ನೇತಾರರು, ಜುಬೈಲ್ ಸೆಕ್ಟರ್ ನೇತಾರರು ಹಾಗೂ ದಾನಿಗಳ ಸಹಾಯದ ಕಾರಣದಿಂದಾಗಿ ಅಬ್ದುಲ್ ರಝ್ಝಾಕ್ ರವರು ಆಗಸ್ಟ್ 04ರಂದು ಬೆಳಿಗ್ಗೆ ಊರಿಗೆ ತಲುಪಿದ್ದಾರೆ. ಈ ಮಹತ್ಕಾರ್ಯಕ್ಕೆ ನೆರವಾದ ಎಲ್ಲರಿಗೂ ಕೆ,ಸಿ.ಎಫ್ ರಾಷ್ಟ್ರೀಯ ಸಮಿತಿ ಅಬಿನಂಧನೆ ಸಲ್ಲಿಸಿದೆ.
















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ