ಚಿಕ್ಕಮಗಳೂರು ಜೂ 21: ಎಸ್ ಎಸ್ ಎಫ್ ಕರ್ನಾಟಕ ರಾಜ್ಯ ಸಮಿತಿಯು ರಾಜ್ಯದಾದ್ಯಂತ ಜಿಲ್ಲಾಮಟ್ಟದಲ್ಲಿ ಮುತಅಲ್ಲಿಮರಿಗಾಗಿ ಅಧ್ಯಾತ್ಮಿಕ ನಾಯಕ ಶೈಖ್ ಝೈನುದ್ಧೀನ್ ಮಖ್ದೂಂ(ರ) ರವರ ಸ್ಮರಣಾರ್ಥ ಹಮ್ಮಿಕೊಂಡಿರುವ “ಮಖ್ದೂಮಿಯ ಸಮ್ಮಿಟ್” ನಾಳೆಯಿಂದ ಆನ್ಲೈನ್ ನಲ್ಲಿ ನಡೆಯಲಿದೆ.
ಜಿಲ್ಲೆಯಲ್ಲಿನ ಧಾರ್ಮಿಕ ವಿದ್ಯಾಬ್ಯಾಸ ನಿರತರಾದ ಮುತಅಲ್ಲಿಮರು ಭಾಗವಹಿಸುವ ಈ ಕಾರ್ಯಕ್ರಮವು ಜೂನ್ ತಿಂಗಳ 21, 22, 23 ದಿನಾಂಕಗಳಲ್ಲಿ ವಿವಿಧ ವಿದ್ವಾಂಸರ ತರಗತಿಗಳೊಂದಿಗೆ ನಡೆಯಲಿದೆ. ಪ್ರತಿ ದಿನ ರಾತ್ರಿ 09:00ಕ್ಕೆ ಝೂಮ್ ಅಪ್ಲಿಕೇಶನ್ ಹಾಗೂ ಯೂಟ್ಯೂಬ್ ನಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.
ಕಾರ್ಯಕ್ರಮದ ವಿವರ:
ಜೂನ್ 21 ಸೋಮವಾರ
ದುಆ: ಅಸ್ಸಯ್ಯಿದ್ ಎಪಿಎಸ್ ತಂಙಳ್ ಉಪ್ಪಳ್ಳಿ
ಉದ್ಘಾಟನೆ: ಅಬ್ದುಲ್ ಲತೀಫ್ ಸ ಅದಿ ಶಿವಮೊಗ್ಗ
ಪ್ರಾಸ್ತಾವಿಕ ಭಾಷಣ: NC ರಹೀಂ ಉಡುಪಿ
ವಿಷಯ ಮಂಡನೆ: ಶಾಫಿ ಸಖಾಫಿ ಮಂಡಂಬ್ರ
ವಿಷಯ: ವಿದ್ವಾಂಸರ ಜೀವನ
ಜೂನ್ 22 ಮಂಗಳವಾರ
ದುಆ: ಅಸ್ಸಯ್ಯಿದ್ ಹಾಮೀಂ ತಂಙಳ್
ಉದ್ಘಾಟನೆ: ಕೆ.ಎಂ ಮುಸ್ತಫ ನಈಮಿ ಹಾವೇರಿ
ಪ್ರಾಸ್ತಾವಿಕ ಮಾತು: ಯಾಕೂಬ್ ಮಾಸ್ಟರ್ ಕೊಡಗು
ವಿಷಯ ಮಂಡನೆ: ಶೈಖುನಾ ಹಂಝಕ್ಕೋಯ ಬಾಖವಿ ಅಲ್ ಕಾಮಿಲ್ ಕಡಲುಂಡಿ
ವಿಷಯ: ಮುತ ಅಲ್ಲಿಂ, ಇಮಾಂ ಗಝ್ಝಾಲಿ (ರ) ರವರ ವೀಕ್ಷಣೆಯಲ್ಲಿ
ಜೂನ್ 22 ಬುಧವಾರ
ದುಆ: ಅಸ್ಸಯ್ಯಿದ್ ಅಲವೀ ತಂಙಳ್ ಕರ್ಕಿ
ಉದ್ಘಾಟನೆ: ಹಾಫಿಝ್ ಸುಫ್ಯಾನ್ ಸಖಾಫಿ ಕೊಪ್ಪಳ
ಪ್ರಾಸ್ತಾವಿಕ ಮಾತು: ಮುಬಶ್ಯಿರ್ ಅಹ್ಸನಿ ಕೊಂಡಂಗೇರಿ
ವಿಷಯ ಮಂಡನೆ: ನೌಫಲ್ ಸಖಾಫಿ ಕಳಸ
ವಿಷಯ: ದಅ್ವಾ ಸಂಘಟನೆಯಲ್ಲಿ ಸಕ್ರೀಯತೆ
ಮೂರು ದಿನಗಳ ಈ ಕಾರ್ಯಕ್ರಮದ ಅಧ್ಯಕ್ಷತೆ ಜಿಲ್ಲಾಧ್ಯಕ್ಷರಾದ ಝೈನುಲ್ ಆಬಿದ್ ಸಖಾಫಿ ಮಾಗುಂಡಿ ವಹಿಸಲಿದ್ದಾರೆ. ಸಫ್ವಾನ್ ಸಖಾಫಿ ಶಾಂತಿಪುರ ಸ್ವಾಗತಸಿ, ಮುಹಮ್ಮದ್ ಸಫ್ವಾನ್ ವಿಜಯಪುರ ನಿರೂಪಣೆ ಮಾಡಲಿದ್ದಾರೆ ಎಂದು ಜಿಲ್ಲಾ ಮಾದ್ಯಮ ಕಾರ್ಯದರ್ಶಿ ಹಾರಿಸ್ ಮಾಗುಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ತೆಗೆಸಿದ ಘಟನೆ: ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ
ಇಂಡಿಯನ್ ಗ್ರಾಂಡ್ ಮುಫ್ತಿ ಜಿಲ್ಲೆಗೆ- ಯಶಸ್ವಿಗಾಗಿ ಸಮಾಲೋಚನಾ ಸಭೆ
ಭಾರತವನ್ನು ‘ನರಕ’ ಎಂದ ಟ್ರಂಪ್ ಪೋಸ್ಟ್- ಮೌನಕ್ಕೆ ಶರಣಾದ ವಿದೇಶಾಂಗ ಇಲಾಖೆ
ಅಲ್ ಮದೀನ ಇಂಗ್ಲಿಷ್ ಮೀಡಿಯಂ ಶಾಲೆಗೆ ಶೇ.100 ಫಲಿತಾಂಶ- ನಾಲ್ವರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ
ಈಶ್ವರಮಂಗಲ ತ್ವೈಬಾ ವಿದ್ಯಾಸಂಸ್ಥೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ. 100 ಫಲಿತಾಂಶ- ಅಭೂತಪೂರ್ವ ಸಾಧನೆ