SKSSF ಎಲಿಮಲೆ ಶಾಖಾ ವತಿಯಿಂದ ಮಜ್ಲಿಸುನ್ನೂರ್ ವಾರ್ಷಿಕ ಹಾಗೂ ದಫ್ ಪ್ರದರ್ಶನ ಜನವರಿ 31ರ ಆದಿತ್ಯವಾರ ಮಗ್ರಿಬ್ ನಮಾಝಿನ ನಂತರ SKSSF ಎಲಿಮಲೆ ಶಾಖಾ ವಠಾರದಲ್ಲಿ ನಡೆಯಲಿದೆ.
ಶಾಖಾಧ್ಯಕ್ಷರಾದ ಅಬೂಬಕರ್ ಸಿದ್ದೀಕ್ ಜೀರ್ಮುಕ್ಕಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಸ್ಸಯ್ಯದ್ ಜಲಾಲುದ್ದೀನ್ ತಂಗಳ್ ಅಲ್-ಬುಖಾರಿ ಕುನ್ನಂಗೈ ಕೇರಳ ಇವರು ದುಆ ಹಾಗೂ ಮಜ್ಲಿಸುನ್ನೂರ್ ಗೆ ನೇತೃತ್ವ ನೀಡಲಿದ್ದಾರೆ. IK ಖಲಂದರ್ ಎಲಮಲೆಯವರು ಸ್ವಾಗತ ಹೇಳುವ ಕಾರ್ಯಕ್ರಮದ ಉದ್ಘಾಟನೆಯನ್ನು SKSSF ದ.ಕ ಜಿಲ್ಲಾ ವಿಖಾಯ ಚೇರ್ಮಾನ್ ಸೈಯ್ಯದ್ ಇಸ್ಮಾಯಿಲ್ ತಂಗಳ್ ಉಪ್ಪಿನಂಗಡಿಯವರು ನೆರವೇರಿಸಲಿದ್ದಾರೆ.
ದ.ಕ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜನಾಬ್ ಪಿ.ಎ ಮರ್ದಾಳರವರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಯ್ಯದ್ ಅಫ್ವಾನ್ ಅಲಿ ತಂಙಳ್, ಜಮಾಲುದ್ದೀನ್ ಬೆಳ್ಳಾರೆ, ಎಸ್.ಎ ಹಮೀದ್ ಸುಳ್ಯ ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
‘ಬೆಲ್ಯೆಚ್ಚ ಅಸ್ಸಲಾಮು ಅಲೈಕುಂ’ ಪ್ರೀತಿಯ ಅಣ್ಣನ ಖಬರಿನ ಬಳಿ ತಂಗಿಯ ಸಲಾಂ
ಮೀಲಾದ್ ರ್ಯಾಲಿ: ಯುವಕರಿಗೊಂದು ಪ್ರೀತಿಯ ಉಪದೇಶ
ಮುಹರ್ರಂ : ಬದುಕು ಬದಲಿಸಲು ಇದರಲ್ಲಿದೆ ಪಾಠಗಳು
ಮುಹರ್ರಮ್ ಹೊಸ ಭರವಸೆ, ಭವಿಷ್ಯಕ್ಕೊಂದು ಮುನ್ನುಡಿ
ಈದ್ ಸಂಭ್ರಮ- ಧರ್ಮದ ಚೌಕಟ್ಟು ದಾಟದಿರಲಿ…!
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಶೋಷಣೆ ಮುಕ್ತ ಸಮಾಜ ನಿರ್ಮಾಣದ ಮಹಾನ್ ನಾಯಕ- ಪ್ರವಾದಿ ಮುಹಮ್ಮದ್ (ಸ.ಅ)
ಈ ವರ್ಷ ವಿದೇಶಿ ಯಾತ್ರಾರ್ಥಿಗಳಿಗೂ ಹಜ್ಜ್ ನಿರ್ವಹಿಸಲು ಅವಕಾಶ
ರಮಳಾನ್: ಮಸೀದಿಯಲ್ಲಿನ ಪ್ರಾರ್ಥನೆಗೆ ರಾಜ್ಯ ಸರಕಾರದಿಂದ ಮಾರ್ಗಸೂಚಿ ಬಿಡುಗಡೆ
ಕುರ್’ಆನಿನ ಸೂಕ್ತಗಳನ್ನು ರದ್ದುಗೊಳಿಸಲು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್