janadhvani

Kannada Online News Paper

ಮಾದರಿಯೋಗ್ಯ ತೀರ್ಮಾನವನ್ನು ಕೈಗೊಂಡ ಮುಹಿಯದ್ದೀನ್ ಜುಮಾ ಮಸ್ಜಿದ್ ಇಂದಬೆಟ್ಟು

ದೇಶ ಮತ್ತು ರಾಜ್ಯದಲ್ಲೆಡೆ ಕೊರೋಣ ಎಂಬ ಮಾರಕವಾದ ವೈರಸ್ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರಕಾರ ಲಾಕ್ ಡೌನ್ ಘೋಷಿಸಿದ್ದು. ಇದರಿಂದ ಸಂಕಷ್ಟದಲ್ಲಿರುವ ಇಂದಬೆಟ್ಟು ಜಮಾಅತಿನ ಸರ್ವರಿಗೂ ಹೆಲ್ಪ್ ಲೈನ್ ಗಲ್ಫ್ ಕಮೀಟಿ ಇಂದಬೆಟ್ಟು ಇದರ ಸಹಕಾರದೊಂದಿಗೆ ಆಡಳಿತ ಸಮಿತಿಯು ಐತಿಹಾಸಿಕವಾದ ನಿರ್ಣಯವನ್ನು ಕೈಗೊಳ್ಳುವ ಮೂಲಕ ಜಮಾಅತಿನ ಅಭಿನಂದನೆಗೆ ಪಾತ್ರವಾಗಿದೆ.

ಜಮಾಅತಿನಲ್ಲಿ ಸೇವೆ ಸಲ್ಲಿಸುವ ಉಸ್ತಾದರಿಗೆ ಎಪ್ರಿಲ್ ಮತ್ತು ಮೇ ತಿಂಗಳ ವೇತನವನ್ನು ಹೆಲ್ಪ್ ಲೈನ್ ಗಲ್ಫ್ ಕಮಿಟಿ ವಹಿಸಿಕೊಂಡಿದ್ದು, ಮತ್ತು ಜಮಾಅತಿಗರ ವಂತಿಗೆಯನ್ನು 2ತಿಂಗಳು ಮನ್ನಾ ಮಾಡಲು ನಿರ್ಣಯ ಕೈಗೊಳ್ಳುವ ಮೂಲಕ ಅಭಿನಂದನೆಗೆ ಪಾತ್ರವಾಗಿದೆ.

ಅದ್ಯಕ್ಷರು ಮತ್ತು ಸರ್ವ ಸದಸ್ಯರು
ಎಂ. ಜೆ.ಎಂ ಇಂದಬೆಟ್ಟು
ಹಾಗೂ ಹೆಲ್ಪ್ ಲೈನ್ ಗಲ್ಫ್ ಕಮೀಟಿ ಇಂದಬೆಟ್ಟು.