janadhvani

Kannada Online News Paper

ಲಾಕ್ಡೌನ್: ಏ.21 ರಿಂದ ಹೊಸ ಆದೇಶ- ಸಿ.ಎಂ.ಯಡಿಯೂರಪ್ಪ

ಬೆಂಗಳೂರು,ಏ.19:ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್ಡೌನ್ ಏ.21ರ ಮಧ್ಯರಾತ್ರಿಯವರೆಗೆ ಯಾವುದೇ ಬದಲಾವಣೆ ಇಲ್ಲ. ಪ್ರಸ್ತುತ ಏನು ಆದೇಶ ಇದೆಯೋ ಅದೇ ಮುಂದುವರೆಯುತ್ತೆ. ಏ.21 ನಂತರ ಹೊಸ ಆದೇಶ ಹೊರಡಿಸಲಾಗುವುದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಮಾರಕ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ಹೇರಲಾಗಿರುವ ಲಾಕ್ಡೌನ್ ಅನ್ನು ರಾಜ್ಯ ಸರ್ಕಾರ ಸ್ವಲ್ಪ ಸಡಿಲಗೊಳಿಸಿ ನಿನ್ನೆ ಆದೇಶಸಿತ್ತು. ಹಾಗಾಗಿ ಏಪ್ರಿಲ್ 20ರ ನಂತರ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ ಶೇ. 33ರಷ್ಟು ಸಿಬ್ಬಂದಿ ಕಚೇರಿಗೆ ಹೋಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಿತ್ತು.

ಅದರ ಜತೆಗೆ ದ್ವಿಚಕ್ರ ವಾಹನ ಓಡಾಟಕ್ಕೆ ಅನುಮತಿ ನೀಡುತ್ತೇವೆ ಎಂದು ಹೇಳಿ ಈ ನಿರ್ಧಾರದಿಂದ ಸರ್ಕಾರ ಹಿಂದೆಯೂ ಸರಿಯಲಾಯ್ತು. ರಾಜ್ಯ ಸರ್ಕಾರ ಹೀಗೆ ಆದೇಶಿಸಿದ ಬೆನ್ನಲ್ಲೀಗ ಮತ್ತೆ ಏಪ್ರಿಲ್ 21ನೇ ತಾರೀಕಿನ ಬಳಿಕ ಲಾಕ್ಡೌನ್ ಸಡಿಲಗೊಳ್ಳಲಿದೆಯಾ ಎಂಬ ಪ್ರಶ್ನೆಗೆ ಸಿಎಂ ಕಚೇರಿ ಉತ್ತರ ನೀಡಿದ್ದು,ಏ.21 ನಂತರ ಹೊಸ ಆದೇಶ ಹೊರಡಿಸಲಾಗುವುದು ಎಂದಿದ್ದಾರೆ.

error: Content is protected !! Not allowed copy content from janadhvani.com