✍️ ಅಬೂ ಮುರ್ಷಿದಾ, ಪುತ್ತೂರು_*
ನಾನಿಂದು ಬೆಳಿಗ್ಗೆ 11:00 ಗಂಟೆಯ ವೇಳೆಗೆ ಪುತ್ತೂರು ಪೇಟೆಗೆ ಹೋಗಿದ್ದೆ. ಅಲ್ಲಿಂದ ಮಾರ್ಕೆಟ್ ಕಡೆಯತ್ತ ಸಾಗಿದೆ. ಹಿಂತಿರುಗಿ ಬರುವಾಗ ಡ್ರಸ್ ಅಂಗಡಿ ಗಳನ್ನು ನೋಡಿ ಏನೋ ಮನಸ್ಸು ನೊಂದಿತು.
ಹೌದು, ಇಂದು ಡ್ರಸ್ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದವು. ಕಳೆದ ವರ್ಷ ಇದೇ ಬರಾಅತ್ ದಿನ ಪುತ್ತೂರು ಪೇಟೆಯ ಒಂದೇ ಒಂದು ಜವುಲಿ ಅಂಗಡಿಗೆ ಕಾಲಿಡಲು ಜಾಗ ಇರಲಿಲ್ಲ. ಕಾರಣ ಕೇಳಿದರೆ ಎಲ್ಲರಿಗೂ ಒಂದೇ ಉತ್ತರ… ಇಂದು *ಪುದಿಯೆ ಬರಾಅತ್* ಆದರೆ ಹೇಳುವ ಮಾತುಗಳು ವಿಭಿನ್ನ. “ನನ್ನದು, ಮಗುವಿನದ್ದು, ಮಗನದ್ದು, ಮಗಳದ್ದು, ಮೊಮ್ಮಕ್ಕಳದ್ದು, ಮನೆಯದ್ದು, ಸೊಸೆದ್ದು, ಅಳಿಯನದ್ದು” ಹೀಗೆ ಉದ್ದದ ಸಾಲುಗಳು… “ಪುದಿಯೆ ಬರಾಅತ್”
ಆದರೆ ಈ ದಿನ ಯಾರಿಗೂ ಪುದಿಯೆ ಬರಾಅತ್ ನ ನೆನಪೇ ಇಲ್ಲ. ಒಂದು ವೇಳೆ ಅಂತರ್ಜಾಲವೂ ಇಲ್ಲದಿರುತ್ತಿದ್ದರೆ ಬರಾಅತ್ ದಿನದ ನೆನಪಿಗೆ ಬರುತ್ತಿರಲಿಲ್ಲವೋ, ಏನೋ? ಎಲ್ಲವೂ ಅವನ ವಿಧಿ. ಕೊರೋನೊ ಎಂಬ ಕಣ್ಣಿಗೂ ಕಾಣದ ವೈರಸ್ ಬಂದಾಗ ತುತ್ತು ಅನ್ನಕ್ಕೂ ಪರದಾಡಬೇಕಾಯಿತು. ವಾರಕ್ಕೊಮ್ಮೆ ಡ್ರೆಸ್, ವಾರಕ್ಕೊಮ್ಮೆ ಸುತ್ತಾಟ ಎಲ್ಲವೂ ನಿಂತುಹೋಯಿತು.
ಮಸೀದಿಯಲ್ಲಿ ನಡೆಯುವ ನಮಾಝ್, ಹದ್ದಾದ್, ಸ್ವಲಾತ್ ಇತರ ಮಜ್ಲಿಸ್ ನಮಗೆ ಹೋಗಲು ಸಮಯವಿರಲಿಲ್ಲ. ಸಮಯ ವಿದ್ರೂ ಮನಸ್ಸು ಇಲ್ಲ. ಈಗ ಸಮಯವಿದೆ… ಮನಸ್ಸೂ ಇದೆ… ಆದರೆ…. ಮಸೀದಿ ಬಂದ್… ಅಲ್ಲಾಹನೇ,ನೀನೇ ರಕ್ಷಿಸು…
ಬದಲಾಗೋಣ….. ಇನ್ನಾದರೂ ನಾವು ಬದಲಾಗಬೇಕು… ಕೊರೋನೊ ಅದಕ್ಕೊಂದು ಕಾರಣವಾಗಲಿ. ಎಲ್ಲ ಬಿಂದಾಸ್ ಬದಿಗಿಟ್ಟು ಅಲ್ಲಾಹುವಿನತ್ತ ಮರಳುವ ದಾರಿ ಹುಡುಕೋಣ. ಅಲ್ಲಾಹು ಅನುಗ್ರಹಿಸಲಿ. ಆಮೀನ್















ಇನ್ನಷ್ಟು ಸುದ್ದಿಗಳು
‘ಇಸ್ಲಾಂ ಮತ್ತು ಕಾರ್ಮಿಕರ ಘನತೆ’ – ಇದು ಕೇವಲ ರಜೆಯಲ್ಲ,ಬದುಕಿನ ದಾರಿ!
ಅನಿವಾಸಿಗಳಿಗಾಗಿ ಜಾಗೃತಿ ಸಂದೇಶ: “ಸಂಯಮವೇ ಸುಕ್ಷೇಮ”-ಕ್ಷಣಿಕ ಕೋಪಕ್ಕೆ ಬಲಿಯಾಗಬೇಡಿ
ವಿಶೇಷ ವರದಿ: ಅನಿವಾಸಿ ಕನ್ನಡಿಗರ ಬದುಕು – ಆಡಂಬರದ ಆಕರ್ಷಣೆಗಿಂತ ಭವಿಷ್ಯದ ಭದ್ರತೆ ಮುಖ್ಯ
ಅಲ್ಲಾ ಸ್ವಾಮಿ, ಯುದ್ಧಕ್ಕೆ ಯಾಕೆ ಹುಲ್ಲು?” ಡಿ.ಪಿ ಬೈತಾರ್
ಶಾಂತಿ ಮತ್ತು ಸಹಬಾಳ್ವೆಯ ‘ಈದ್ ಉಲ್ ಫಿತರ್’ ವಿಶೇಷ ಸಂದೇಶ
ವಾರದೊಳಗೆ ಮೂರು ಆತ್ಮಹತ್ಯೆ ಪ್ರಕರಣ!- ಮುಸ್ಲಿಂ ಯುವಕರಿಗೇನಾಗಿದೆ..?
ನಿಮ್ಮ ಕಷ್ಟಗಳಿಗೆ ಪರಿಹಾರ ಬೇಕೇ..? ಈ ಮಸೀದಿಗೆ ಬನ್ನಿರಿ….!!!
ಸಮಸ್ತ: ಶತಮಾನೋತ್ಸವದ ಹೆಜ್ಜೆ ಗುರುತುಗಳು
ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಮೂರನೇ ಕೇರಳ ಯಾತ್ರೆ- “ಮನುಷ್ಯರೊಂದಿಗೆ” ಎಂಬ ಮಾನವೀಯ ಸಂದೇಶದ ಮಹಾ ಪಯಣ
‘ಬೆಲ್ಯೆಚ್ಚ ಅಸ್ಸಲಾಮು ಅಲೈಕುಂ’ ಪ್ರೀತಿಯ ಅಣ್ಣನ ಖಬರಿನ ಬಳಿ ತಂಗಿಯ ಸಲಾಂ