janadhvani

Kannada Online News Paper

ಮರಿಕ್ಕಳದಲ್ಲಿ ಶಾದುಲೀ ರಾತೀಬ್ ಮಜ್ಲಿಸ್

ಮೊಂಟೆಪದವು:ಎಸ್ಸೆಸ್ಸೆಫ್ ಮರಿಕ್ಕಳ ಶಾಖೆಯ ವತಿಯಿಂದ ಶಾದುಲಿ ರಾತಿಬ್ ಮಜ್ಲಿಸ್ ಮರಿಕ್ಕಳ ಜಮಾಅತ್ ಖತೀಬ್ ಅಬ್ಬಾಸ್ ಸಖಾಫಿ ಮಡಿಕೇರಿರವರ ಅಧ್ಯಕ್ಷತೆಯಲ್ಲಿ ಮರಿಕ್ಕಳ ಮಸ್ಜಿದ್ ನಲ್ಲಿ ನಡೆಯಿತು.

ಮರಿಕ್ಕಳ ಜಮಾಅತ್ ಅಧ್ಯಕ್ಷರೂ ಹಾಗೂ ಖಾಝಿಯುಯಾದ ತಾಜುಲ್ ಪುಖಹಾಹ್ ಶೈಖುನಾ ಬೇಕಲ್ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪ್ರಸಕ್ತ ಸನ್ನಿವೇಶದಲ್ಲಿ ಜನರು ಅನುಭವಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಆಧ್ಯಾತ್ಮಿಕ ಮಜ್ಲಿಸ್ ಗಳ ಮೂಲಕ ಮಾತ್ರ ಪರಿಹಾರ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಶೈಖುನಾ ಬೇಕಲ್ ಉಸ್ತಾದ್ ಹೇಳಿದರು.

ಸಯ್ಯದ್ ಮುಹ್ಸಿನ್ ತಂಙಳ್ ಅವೇಲತ್ ಶಾದುಲಿ ರಾತಿಬ್ ಮಜ್ಲಿಸಿಗೆ ನೇತೃತ್ವ ನೀಡಿದರು.

ಕಾರ್ಯಕ್ರಮದಲ್ಲಿ ಸದರ್ ಉಸ್ತಾದ್ ಝೈನುಲ್ ಆಬಿದ್ ಸಖಾಫಿ ಮುಲಾರಪಟ್ಣ,ಮುಅಲ್ಲಿಮರಾದ ಜಬ್ಬಾರ್ ಸಅದಿ ,ಅಬ್ದುಲ್ ರಝಾಕ್ ಮದನಿ,ಮರಿಕ್ಕಳ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಚಂದಹಿತ್ತಿಲು ಮೊದಲಾದವರು ಉಪಸ್ಥಿತರಿದ್ದರು.