janadhvani

Kannada Online News Paper

ದೆಹಲಿ ಹತ್ಯಾಕಾಂಡದ ವಿರುದ್ಧ ಕುದ್ರೋಳಿಯಲ್ಲಿ ಬೃಹತ್ ಪ್ರತಿಭಟನೆ

ಮಂಗಳೂರು : ದೆಹಲಿ ಈಶಾನ್ಯ ಭಾಗದಲ್ಲಿ ಸಿ ಎ ಎ ವಿರುದ್ಧ ಪ್ರತಿಭಟನಾ ಕಾರರ ಮೇಲೆ ಸಮಾಜ ಘಾತುಕ ಶಕ್ತಿ ಗಳ ಅಟ್ಟಹಾಸಕ್ಕೆ ಹಲವಾರು ಜೀವ ಗಳು ಬಲಿಯಾಗಿದೆ. ಜನರ ರಕ್ಷಣೆ ಮಾಡಬೇಕಾದ ವರು ಮೂಕ ಪೇಕ್ಷರಾಗಿದ್ದಾರೆ. ಅದಿಕಾರ ಗದ್ದುಗೆಯಲ್ಲಿದ್ದವರು ಮನಸ್ಸಿನಲ್ಲಿ ಸಂತೋಷ ಪಡುವ ಅವಸ್ಥೆ ಗೋಚರವಾಗುತ್ತಿದೆ.

ಇದೆಲ್ಲವನ್ನೂ ಮನಗೊಂಡು ಜನರಿಗೆ ರಕ್ಷಣೆ ನೀಡುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.ಅಪರಾಧಿಗಳನ್ನು ಬಂದಿಸಬೇಕು. ಕೇಂದ್ರ ಸರಕಾರ ಮೌನ ಮುರಿಯಬೇಕು ಎಂದು ಒತ್ತಾಯಿಸಿ ದಿನಾಂಕ ಪೆಬ್ರವರಿ 28 ಶುಕ್ರವಾರ ಸಾಯಂಕಾಲ 5.00 ಕ್ಕೆ ಸರಿಯಾಗಿ ಕುದ್ರೋಳಿ ಜಾಮಿಅ ಮಸೀದಿ ಮುಂಭಾಗದಲ್ಲಿ ಬ್ರಹತ್ ಪ್ರತಿಭಟನಾ ಸಭೆ ನಡೆಯಲಿದೆ.

ಸಮಾಜಬಾಂದವರು ಹೆಚ್ಚಿನ ಸಂಖ್ಯೆಯ ಲ್ಲಿ ಭಾಗವಹಿಸಲು ಮುಸ್ಲಿಂ ಐಕ್ಯತಾ ವೇದಿಕೆ ಕರೆ ನೀಡಿದೆ.