ಉಳ್ಳಾಲ: ಅಲ್ ಮಸ್ಜಿದುಲ್ ಜಾಮಿಉಲ್ ಅಮೀನ್ ಅಳೇಕಲ ಉಳ್ಳಾಲ, ಇದರ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಮುಹಿಯ್ಯಿದ್ದೀನ್ಳ್ಳ್ ರಾತೀಬ್, ವಾರ್ಷಿಕ ದ್ಸಿಕ್ರ್ ಹಲ್ಖಾ ಮತ್ತು ಧಾರ್ಮಿಕ ಪ್ರವಚನ ಕಾರ್ಯಕ್ರಮಗಳ ಸಮಾರೋಪ ಸಮಾರಂಭವು 16-2-2020 ರಂದು ಆದಿತ್ಯವಾರ ಮಗ್ರಿಬ್ ನಮಾಝ್ ಬಳಿಕ ಎಸ್ ಎಮ್ ತಂಙಳ್ ವೇದಿಕೆಯಲ್ಲಿ ನಡೆಯಿತು.
ಪಿ.ಎಸ್.ಎಮ್ ಶಿಹಾಬುದ್ದೀನ್ ಸಖಾಫಿ ಉಸ್ತಾದರು ಅಧ್ಯಕ್ಷತೆ ವಹಿಸಿದ್ದರು. ದ ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನೂತನ ಅಧ್ಯಕ್ಷರಾದ ಅಝೀಝ್ ಕೃಷ್ಣಾಪುರ ಅವರನ್ನು, ಆಡಳಿತ ಸಮಿತಿಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅಝೀಝ್ ಕೃಷ್ಣಾಪುರ ಅವರು, ವಕ್ಫ್ ಮಂಡಳಿಯಿಂದ ಮಸೀದಿ ಮದ್ರಸಗಳಿಗೆ ಸಿಗುವ ಅನುದಾನಗಳ ಬಗ್ಗೆ ವಿವರಣೆ ನೀಡಿದರು.
ಈ ಸಂಧರ್ಬದಲ್ಲಿ ಖತೀಬರಾದ ಅಬೂ ಝಿಯಾದ್ ಮದನಿ ಪಟ್ಟಾಂಬಿ, ಸಯ್ಯಿದ್ ಮದನಿ ದರ್ಗಾ ಮಾಜಿ ಅಧ್ಯಕ್ಷರಾದ ಹಾಜಿ ಯು ಎಸ್ ಹಂಝ, ಉಳ್ಳಾಲ ನಗರ ಸಭಾ ಸದಸ್ಯರಾದ ಯು ಎ ಇಸ್ಮಾಯಿಲ್, ಅಳೇಕಲ ಜಮಾಅತಿನ ಪ್ರ ಕಾರ್ಯದರ್ಶಿ ಫಾರೂಕ್ ಹಾಜಿ, ಉಪಾಧ್ಯಕ್ಷ ರಾದ ಅಶ್ರಫ್ ಯು.ಡಿ, ಕೋಶಾಧಿಕಾರಿ ಯು.ಸಿ ಇಬ್ರಾಹಿಂ ,ಹಫೀಝ್ ಅಲ್ ಫಾಲಿಳಿ, ಎಸ್.ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಹಾಗೂ ಆಡಳಿತ ಸಮಿತಿಯ ಸದಸ್ಯರು, ಹಿರಿಯ ನಾಗರಿಕರು ಉಪಸ್ಥಿತರಿದ್ದರು.