ವಿಶ್ವದಲ್ಲಿರುವ ಯಾವುದೇ ದೇಶಕ್ಕೆ ಇಲ್ಲದ ಇತಿಹಾಸ ನಮ್ಮ ಭಾರತ ದೇಶಕ್ಕಿದೆ. 1947 ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡ ದೇಶದಲ್ಲಿ ಇಂದಿನವರೆಗೆ ಸರ್ವ ಧರ್ಮದವರು ಅನ್ಯೋನ್ಯತೆಯಿಂದ ಬಾಳುತ್ತಿದ್ದಾರೆ. ಭಾರತ ದೇಶದಲ್ಲಿ ಎಲ್ಲರೂ ಸರಿಸಮಾನರು, ಇಲ್ಲಿ ಜಾತಿ, ಮತ ಭೇದಭಾವ ವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಡಾ. ಬಿ ಆರ್ ಅಂಬೇಡ್ಕರ್ ರವರ ನೇತೃತ್ವದಲ್ಲಿ ರಚನೆಗೊಂಡ ಸಂವಿಧಾನದಲ್ಲಿ ವಿವರಿಸಲಾಗಿದೆ.
.ಇದರಂತೆ ಇಲ್ಲಿಯ ಅಧಿಕಾರಿಗಳು ಆಡಳಿತ ನಡೆಸಿ ದೇಶದ ಶಾಂತಿಗೆ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕಾಗಿದೆ.
ನಮ್ಮ ದೇಶ ಆರ್ಥಿಕವಾಗಿ ಹಿಂದೆಂದೂ ಕಾಣದಷ್ಟು ಕೆಳಮಟ್ಟಕ್ಕೆ ಸಾಗುತ್ತಿದೆ. ದಿನದಿಂದ ದಿನಕ್ಕೆ ಅತ್ಯಾಚಾರ ಪ್ರಕರಣಗಳು ಅಧಿಕವಾಗುತ್ತಿದೆ. ರೈತರ ಕೂಗು ಕೇಳುವವರಿಲ್ಲ. ಹೀಗಿರುವಾಗ ಇದನ್ನೆಲ್ಲಾ ಮರೆಮಾಚಲು ಹಾಗೂ ಕೆಲವು ಧರ್ಮದವರನ್ನು ಮಾತ್ರ ಗುರಿಯಾಗಿಸಿ, ಸಂವಿಧಾನಕ್ಕೆ ಯಾವುದೇ ಬೆಲೆ ನೀಡದೆ ತಮಗೆ ತೋಚಿದಂತೆ ನಿಯಮಗಳನ್ನು ಇಂದಿನ ಕೇಂದ್ರ ಸರಕಾರ ರಚಿಸುತ್ತಿದೆ.
ಭಾರತದಲ್ಲಿ ಹುಟ್ಟಿ ಬೆಳೆದು, ಈ ದೇಶ ನಮ್ಮ ಉಸಿರು ಎಂದು ಮನದಾಳದಲ್ಲಿ ದೇಶವನ್ನು ಪ್ರೀತಿಸುವ ಹಲವಾರು ದೇಶ ಪ್ರೇಮಿಗಳಿಗೆ ಇಂದು ತಮ್ಮ ಪೌರತ್ವವನ್ನು ಸಾಬೀತು ಪಡಿಸಬೇಕಾದ ದೌರ್ಭಾಗ್ಯ ಬಂದಿದೆ.
ಭಾರತ ದೇಶವು ಯಾವುದೇ ಧರ್ಮ ಅಥವಾ ರಾಜಕೀಯ ಪಕ್ಷದವರಿಗೆ ಮಾತ್ರವಲ್ಲ, ಭಾರತವು ಎಲ್ಲಾ ಭಾರತೀಯರ ಹಕ್ಕು ಎಂಬುದನ್ನು ಸಂವಿದಾನದಲ್ಲಿ ಸ್ಪಷ್ಟವಾಗಿ ವಿವರಿಸಿದೆ.
ಹೀಗಿರುವಾಗ ಅದರ ಬದಲಾವಣೆಯನ್ನು ಒಪ್ಪಲು ಸಾಧ್ಯವಿಲ್ಲ. ಇದರ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು. ಹೋರಾಟದ ಮೂಲಕ ನಮ್ಮ ಹಕ್ಕನ್ನು ನಾವು ಪಡೆಯಬೇಕು.
ಈಗ ನಡೆಯುತ್ತಿರುವ NRC & CAB ವಿರುದ್ಧ ನ್ಯಾಯಾಂಗವು ಸ್ವಯಂ ಪ್ರೇರಿತವಾಗಿ ಮಧ್ಯ ಪ್ರವೇಶಿಸಿ ಭಾರತದ ಸಂವಿಧಾನವನ್ನು ಉಳಿಸಬೇಕು ಎಂದು ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತದೆ.