“ಹಬೀಬ್ (ಸ.ಅ) ನಮ್ಮ ಜತೆಗಿರಲಿ” ಎಂಬ ದ್ಯೇಯ ವಾಕ್ಯದಲ್ಲಿ KCF ನಡೆಸುತ್ತಿರುವ ಸ್ನೇಹ ಸಂಗಮದ ಭಾಗವಾಗಿKCF ಅಲ್ ಖಸಿಂ ರೋನ್ ಅಧೀನದ ಅಲ್ ರಾಸ್ ಯೂನಿಟ್’ನಲ್ಲಿ 21-11-19 ರಂದು ನಡೆದ ಸ್ನೇಹ ಸಂಗಮ ಕಾರ್ಯಕ್ರಮವು ಬಹಳ ಯಶಸ್ವಿಯಾಗಿ ನಡೆಯಿತು.ಕೆ.ಸಿ.ಎಫ್ ಅಲ್ ರಾಸ್ ಯೂನಿಟ್ ಅಧ್ಯಕ್ಷರಾದ ರಶೀದ್ ಬೆಳ್ಳಾರೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನುಕೆ.ಸಿ.ಎಫ್ ಸೌದಿ ರಾಷ್ಟ್ರಿಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಾಲಿ ಬೆಳ್ಳಾರೆ ಉದ್ಘಾಟಿಸಿದರು.
ಪ್ರವಾದಿ ಪ್ರೇಮಿಗಳ ಮನ ತಣಿಸುವ ತನ್ನ ಸುಶ್ರಾವ್ಯ ಶಬ್ದ ಮಾದುರ್ಯದಿಂದ ಆಶೀಕ್’ಗಳನ್ನು ಮದೀನಾದತ್ತ ಕೊಂಡೊಯಿದ ಅನುಗ್ರಹೀತ ಗಾಯಕ ಯೂಸುಫ್ ಮದನಿ ಉಸ್ತಾದ್ ಮತ್ತು ತಂಡದವರು ಸುಮಧುರವಾಗಿ ಮದ್ಹ್ ಗಾನ ಆಲಾಪಿಸಿದರು.ಇಹಪರ ವಿಜಯಕ್ಕಾಗಿ ಪ್ರವಾದಿ(ಸ.ಅ)ರವರ ಚರ್ಯೆಯನ್ನು ಜೀವನದಲ್ಲಿ ಅಳವಡಿಸಿಕೊಂಡು, ಪೂರ್ವಿಕ ಮಹಾತ್ಮರುಗಳ ಹಾದಿಯಲ್ಲಿ ಮುನ್ನಡೆದು ಪವಿತ್ರವಾದ ಇಸ್ಲಾಮಿನ ಸುಂದರ ತತ್ವಾದರ್ಶಗಳನ್ನು ಪಾಲಿಸಿ ಇತರರಿಗೆ ಮಾದರಿಯಾಗಿ ಜೀವಿಸಬೇಕೆಂದು , ಮುಖ್ಯ ಪ್ರಭಾಷಣಕಾರರಾಗಿ ಆಗಮಿಸಿದ ಕೆ.ಸಿ.ಎಫ್ ಸೌದಿ ರಾಷ್ಟ್ರಿಯ ಸಮಿತಿಯಿ ಶಿಕ್ಷಣ ಇಲಾಖೆ ಅಧ್ಯಕ್ಷರಾದ ಸಿದ್ದೀಕ್ ಸಖಾಫಿ ಪೆರುವಾಯಿ ಉಸ್ತಾದ್ ಕರೆ ನೀಡಿದರು.ವಿಶ್ವ ಪ್ರವಾದಿ(ಸ.ಅ)ರವರ ಸುನ್ನತ್ತನ್ನು ಜೀವನದಲ್ಲಿ ಅಳವಡಿಸಿಕೊಂಡು ಸ್ವಶರೀರಕ್ಕಿಂತಲೂ ಹೆಚ್ಚಾಗಿ ಅವರನ್ನು ಪ್ರೀತಿಸಿ ಹಬೀಬ್(ಸ.ಅ) ನಮ್ಮ ಜತೆಗಿರಲಿ ಎಂಬ ವಾಕ್ಯವನ್ನು ಅಥ೯ ಪೂಣ೯ಗೊಳಿಸೋಣವೆಂದು ಕಿವಿ ಮಾತು ಹೇಳಿದರು.ಕೆ.ಸಿ.ಫ್ ಅಲ್ ಕಸೀಮ್ ಝೋನ್ ನ ಪ್ರಮುಖ ನೇತಾರರುಗಳು ಭಾಗವಹಿಸಿದರು.ICF, RSC, KiSWA ಮುಂತಾದ ಸಂಘಟನೆಗಳ ನೇತಾರರು ಭಾಗವಹಿಸಿ ಕಾರ್ಯ ಕ್ರಮಕ್ಕೆ ಇನ್ನಷ್ಟು ಮೆರಗು ನೀಡಿದರು.ಹಸನ್ ಮದನಿ ಸ್ವಾಗತಿಸಿ ಇಸಾಕ್ ಬಾ ಹಸನಿ ವಂದಿಸಿದರು.ವರದಿ :- ಬಶೀರ್ ಕನ್ಯಾನಬುರೈದ ಸೆಕ್ಟರ್















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ