ನವದೆಹಲಿ, ಜು.22: ಮುಸ್ಲಿಮ್ ಸಮುದಾಯದಲ್ಲಿ ಚಾಲ್ತಿಯಲ್ಲಿದ್ದ ತ್ರಿವಳಿ ತಲಾಖ್ ಸಂಪ್ರದಾಯವನ್ನು ಕೆಲವು ಅಲ್ಪಜ್ಞಾನಿಗಳು ದುರುಪಯೋಗ ಪಡಿಸಿರುವುದನ್ನು ಮುಂದಿಟ್ಟು ಆ ಸಂಪ್ರದಾಯವನ್ನು ನಿಷೇಧಿಸಲು ಮುಂದಾಗಿದ್ದ ಕೇಂದ್ರ ಎನ್ಡಿಎ ಸರಕಾರದ ತ್ರಿವಳಿ ತಲಾಕ್ ಮಸೂದೆಗೆ ಬಿಜೆಪಿಯ ಮಿತ್ರ ಪಕ್ಷ ಜೆಡಿಯು ತನ್ನ ವಿರೋಧವನ್ನು ಈಗಾಗಲೇ ಸ್ಪಷ್ಟ ಪಡಿಸಿರುವುದರಿಂದ ಹಾಗೂ ಹಲವು ಇತರ ಮಿತ್ರ ಪಕ್ಷಗಳೂ ಸಂಪೂರ್ಣ ಸಹಮತ ಹೊಂದಿರದೇ ಇರುವುದರಿಂದ ಈ ಮಸೂದೆ ಜಾರಿಯನ್ನು ತನ್ನ ಆದ್ಯತಾ ಪಟ್ಟಿಯಿಂದ ಕೈಬಿಟ್ಟಿರುವ ಸುಳಿವು ದೊರಕಿದೆ.
ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಜೂರುಗೊಳಿಸಲು ಅಗತ್ಯ ಬೆಂಬಲ ಸರಕಾರಕ್ಕೆ ಅಗತ್ಯವಿರುವುದರಿಂದ ಅದು ಸದ್ಯ ಪ್ರಮುಖ ಆದ್ಯತಾ ಪಟ್ಟಿಯಲ್ಲಿಲ್ಲವೆಂದು ಸರಕಾರಿ ಮೂಲಗಳು ತಿಳಿಸಿವೆ.
ಈಗಿನ ಸಂಸತ್ ಅಧಿವೇಶನ ಜುಲೈ 26ರಂದು ಅಂತ್ಯಗೊಳ್ಳಲಿದೆ. ಕಳೆದ ತಿಂಗಳು ವಿಪಕ್ಷಗಳ ವಿರೋಧದ ನಡುವೆ ಮಂಡನೆಯಾದ ಮಸೂದೆಯ ಮೇಲಿನ ಚರ್ಚೆಯನ್ನು ಇನ್ನೂ ಕೈಗೆತ್ತಿಕೊಳ್ಳಲಾಗಿಲ್ಲ. ಸರಕಾರಕ್ಕೆ ಲೋಕಸಭೆಯಲ್ಲಿ ಸಮಸ್ಯೆಯಿಲ್ಲದೇ ಇದ್ದರೂ ರಾಜ್ಯಸಭೆಯಲ್ಲಿ ಬೆಂಬಲದ ಕೊರತೆಯಿದೆ. ಈ ಅಧಿವೇಶನದೊಳಗೆ ಮಸೂದೆ ಎರಡೂ ಸದನಗಳಿಂದ ಅಂಗೀಕಾರಗೊಂಡು ರಾಷ್ಟ್ರಪತಿಗಳ ಅಂಕಿತ ಪಡೆಯದೇ ಇದ್ದಲ್ಲಿ ಈಗ ಜಾರಿಯಲ್ಲಿರುವ ಸುಗ್ರೀವಾಜ್ಞೆಯ ಅವಧಿ ಕೂಡ ಅಷ್ಟರೊಳಗೆ ಅಂತ್ಯವಾಗಲಿದೆ. ಮೇಲ್ಮನೆಯಲ್ಲಿ ಅಂಗೀಕಾರ ಪಡೆಯುವ ಕುರಿತಾದ ಅನಿಶ್ಚಿತತೆ ಮುಂದುವರಿದರೆ ಸುಗ್ರೀವಾಜ್ಞೆಯನ್ನು ಮರು ಹೊರಡಿಸುವ ಸಾಧ್ಯತೆಯಿದೆಯೆನ್ನಲಾಗಿದೆ.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ