ದುಬೈ: ದುಬೈ ವಿಮಾನ ನಿಲ್ದಾಣ ರಸ್ತೆ ಸಮಾನಾಂತರವಾದ ಟ್ರೊಪೋಳಿ ಸ್ಟ್ರೀಟ್ ಅಭಿವೃದ್ಧಿ ಯೋಜನೆಯು ಶೇ 90 ರಷ್ಟು ಪೂರ್ಣಗೊಂಡಿರುವುದಾಗಿ ದುಬೈ ರಸ್ತೆ ಮತ್ತು ಸಾರಿಗೆ ಪ್ರಾಧಿಕಾರವು ತಿಳಿಸಿದೆ.
ಎರಡು ಪ್ರಮುಖ ಹೈವೇಗಳನ್ನು ಬಂಧಿಸುವ ರಸ್ತೆಯಾಗಿದೆ ಇದು. ಶೈಖ್ ಮುಹಮ್ಮದ್ ಬಿನ್ ಝಾಯಿದ್ ರಸ್ತೆ ಮತ್ತು ಎಮಿರೇಟ್ಸ್ ರಸ್ತೆಯನ್ನು ಬಂಧಿಸುವ 12 ಕಿ.ಮೀ. ದೈರ್ಘ್ಯವಿರುವ ಈ ಯೋಜನೆಯು ಜೂನ್ ಕೊನೆಯಲ್ಲಿ ಉದ್ಘಾಟನೆ ಗೊಳ್ಳಲಿದೆ. ಈ ಮೂಲಕ ದುಬೈ – ಶಾರ್ಜಾ ರಹದಾರಿಯ ಓಡಾಟ ಸುಗಮವಾಗಲಿದೆ. ಅದೇ ರೀತಿ ವರ್ಖ, ಮಿರ್ದಿಫ್ ಕಡೆಗೂ ಪ್ರವೇಶ ಸುಲಭವಾಗಲಿದೆ.
ಯೋಜನೆ ಪೂರ್ಣಗೊಂಡರೆ ಘಂಟೆಗೆ 12,000 ವಾಹನಗಳಿಗೆ ಹಾದು ಹೋಗಲು ಸಾಧ್ಯವಾಗಲಿದೆ ಎಂದು ಆರ್ಟಿಎ ಚೇರ್ಮನ್ ಮಾತರ್ ಅಲ್ ತಾಯರ್ ತಿಳಿಸಿದ್ದಾರೆ.
ಅಲ್ ಅಮರ್ದಿ- ಅಲ್ ಖವನೀಜ್ ಅಲ್ ಅವೀರ್- ರಅಸ್ ಅಲ್ ಖೋರ್ ರಸ್ತೆ ಗಳಿಗೂ ಸಮಾಂತರ ವಾಗಿರುವ ಕಾರಣ ಪ್ರದೇಶದ ಎಲ್ಲಾ ರಸ್ತೆಗಳ ಸಾಂದ್ರತೆಯನ್ನು ಈ ಯೋಜನೆಯು ಶೇ. ಮೂವತ್ತರಷ್ಟು ಕಡಿಮೆಗೊಳಿಸಲಿದೆ.
ಮಿರ್ದಿಫ್ ಸಿಟಿ ಸೆಂಟರ್ ನಿಂದ ಶೈಖ್ ಝಾಯಿದ್ ಬಿನ್ ಹಂದಾನ್ ಅಲ್ ನಹ್ಯಾನ್ ಸ್ಟ್ರೀಟ್ ವರೆಗಿನ ಆರುವರೆ ಕಿ.ಮೀ. ರಸ್ತೆಯ ಅಗಲೀಕರಣ ಮಾಡಲಾಗುವುದು. ಇಲ್ಲಿಂದ ಎಮಿರೇಟ್ಸ್ ರಸ್ತೆವರೆಗೆ ಎರಡೂ ಬದಿಗಳಲ್ಲಿ ಮೂರು ಪಥಗಳ ಹೊಸ ರಸ್ತೆ ನಿರ್ಮಾಣವಾಗಲಿದೆ.
ಟ್ರಿಪೊಳಿ- ಅಲ್ಜೀರಿಯಾ ಸ್ಟ್ರೀಟ್ನ ಇಂಟರ್ಚೇಂಜನ್ನೂ ನವೀಕರಿಸಲಾಗುವುದು. ಮೂರು ಪಥಗಳ ಸುರಂಗ ಇಲ್ಲಿ ನಿರ್ಮಾಣ ವಾಗುವುದರೊಂದಿಗೆ ಇಂಟರ್ಸೆಕ್ಷನಿನ ಕಾಯ್ದಿರಿಸುವಿಕೆಯು ಒಂದು ನಿಮಿಷವಾಗಿ ಕಡಿಮೆಯಾಗಲಿದೆ.
ಯೋಜನೆಯ ಭಾಗವಾಗಿ ಎಮಿರೇಟ್ಸ್ ರಸ್ತೆಯಲ್ಲಿ ಒಂಟೆಗಳಿಗೆ ರಸ್ತೆ ದಾಟುವುದಕ್ಕಾಗಿ ಎರಡು ಸುರಂಗ ಹಾದಿಯನ್ನು ನಿರ್ಮಿಸಲಾಗುವುದು. ಎಮಿರೇಟ್ಸ್ ರಸ್ತೆಗೆ ಶಾರ್ಜಾ ಕಡೆಯಿಂದ ಮೂರು ಪಥಗಳ ಸಂಕವು ನಿರಮಾಣಗೊಳ್ಳಲಿದ್ದು, ಈ ಮೂಲಕ ಶಾರ್ಜಾ ಕಡೆಗೆ ಯಾತ್ರೆಹೊರಡುವ ಯಾತ್ರಿಕರಿಗೆ ಸುಗಮವಾಗಲಿದೆ.















ಇನ್ನಷ್ಟು ಸುದ್ದಿಗಳು
‘ಸಮಸ್ತ’: ಇತಿಹಾಸ ಮತ್ತು ವರ್ತಮಾನದ ನೆನಪುಗಳನ್ನು ಮೆಲುಕು ಹಾಕಿದ ನಾಯಕರು
ಅನಿವಾಸಿಗಳಿಗೆ ಭಾರಿ ಹೊಡೆತ; ಪಾಸ್ಪೋರ್ಟ್ ದರಗಳಲ್ಲಿ ಗಣನೀಯ ಹೆಚ್ಚಳ- ಪರಿಷ್ಕೃತ ಶುಲ್ಕ ಜುಲೈ 1 ರಿಂದ ಜಾರಿ
ಗಲ್ಫ್ ಸೇರಿದಂತೆ ವಿದೇಶದಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ‘ಏರ್ ಸುವಿಧಾ’ ಡಿಕ್ಲರೇಷನ್ ಕಡ್ಡಾಯ
ಪಾಸ್ಪೋರ್ಟ್ ಮತ್ತು ಪೌರತ್ವದ ವಿರೋಧಾಭಾಸ – ಜಗತ್ತಿಗೆ ಭಾರತೀಯ, ಸ್ವದೇಶದಲ್ಲೇ ಪ್ರಶ್ನಾರ್ಹ?
ಆಧಾರ್ ಮತ್ತು ಪಾಸ್ಪೋರ್ಟ್ ಪೌರತ್ವ ದಾಖಲೆಯಲ್ಲ: ಹಾಗಾದ್ರೆ ನಿಜವಾದ ದಾಖಲೆ ಯಾವುದು?
ಹಿರಿಯ ಧಾರ್ಮಿಕ ವಿದ್ವಾಂಸರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ವಫಾತ್
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ