ಸುಲ್ತಾನಪುರ (ಯುಪಿ): ‘ಮುಸ್ಲಿಮರು ನನಗೇ ಮತ ಹಾಕಬೇಕು. ಏಕೆಂದರೆ ನೀವು ನಾಳೆ ಯಾವುದಾದರೂ ಕೆಲಸಕ್ಕೆಂದು ನನ್ನ ಬಳಿ ಬರಬೇಕಾಗುತ್ತದೆ’ ಎಂದು ಸುಲ್ತಾನಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೇನಕಾ ಗಾಂಧಿ ಹೇಳಿದ್ದಾರೆ.
ಮುಸ್ಲಿಮರ ಪ್ರಾಬಲ್ಯವಿರುವ ತೂರಬ್ಖನಿ ಪ್ರದೇಶದಲ್ಲಿ ಶುಕ್ರವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಈ ಮಾತು ಹೇಳಿದ್ದಾರೆ.
‘ನೋಡಿ, ಈ ಕ್ಷೇತ್ರದ ಫಲಿತಾಂಶ ಈಗಾಗಲೇ ನಿರ್ಧಾರವಾಗಿ ಹೋಗಿದೆ. ಇಲ್ಲಿ ಗೆಲ್ಲುವುದು ನಾನೇ ಎಂಬುದು ನಿಶ್ಚಿತ. ಜನರ ಪ್ರೀತಿ ಮತ್ತು ನೆರವಿನಿಂದ ನಾನು ಗೆಲ್ಲುತ್ತಿದ್ದೇನೆ. ಆದರೆ ನನಗೆ ಮುಸ್ಲಿಮರು ಮತ ಹಾಕಲಿಲ್ಲ ಅಂದರೆ ಅದು ಚೆನ್ನಾಗಿರುವುದಿಲ್ಲ. ಅದರಿಂದ ನನಗೆ ಇರುಸುಮುರುಸಾಗುತ್ತದೆ’ ಎಂದು ಅವರು ಹೇಳಿದ್ದಾರೆ.
‘ನೀವೆಲ್ಲಾ ಫಿಲಿಬಿಟ್ಗೆ ಹೋಗಿ ವಿಚಾರಿಸಿ. ಅಲ್ಲಿ ನಾನು ತಪ್ಪು ಮಾಡಿದ್ದೇನೆ, ಕೆಲಸ ಮಾಡಿಲ್ಲ ಎಂದು ಯಾರೊಬ್ಬರು ಹೇಳಿದರೂ ನೀವು ನನಗೆ ಮತ ನೀಡಬೇಡಿ. ಆದರೆ ಪರಿಸ್ಥಿತಿ ಹಾಗಾಗುವುದಿಲ್ಲ. ನಾನು ಇಲ್ಲಿಗೆ ಮುಕ್ತ ಮನಸ್ಸಿನಿಂದ ಬಂದಿದ್ದೇನೆ. ಹೀಗಾಗಿ ನೀವೆಲ್ಲಾ (ಮುಸ್ಲಿಮರು) ನನಗೆ ಮತ ನೀಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
‘ಇಲ್ಲಿ ಗೆಲ್ಲುವುದು ನಾನೇ. ಹೀಗಾಗಿ ನಾಳೆ ಯಾವುದಾದರೂ ಕೆಲಸ ಹಿಡಿದುಕೊಂಡು ನೀವು (ಮುಸ್ಲಿಮರು) ನನ್ನ ಬಳಿ ಬಂದೇ ಬರುತ್ತೀರಿ. ಆಗ ನಾನು ಕೆಲಸ ಮಾಡಿಕೊಡಬೇಕೇ ಬೇಡವೇ ಎಂದು ಯೋಚಿಸುವಂತೆ ಆಗಬಾರದು. ಇದು ನಾನು ನಿಮಗೆ ನೀಡುತ್ತಿರುವ ಸಂದೇಶ. ಈ ಸಂದೇಶವನ್ನು ಉಳಿದ ಎಲ್ಲರಿಗೂ ತಲುಪಿಸಿ’ ಎಂದು ಅವರು ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ