ಕುವೈತ್ ಸಿಟಿ: ಕುವೈತ್ ನಲ್ಲಿ ಮತ್ತೊಮ್ಮೆ ಸಾರ್ವಜನಿಕ ಕ್ಷಮಾಪಣೆಯನ್ನು ಜಾರಿಗೆ ತರಲಾಗಿದ್ದು, ಅನಧಿಕೃತವಾಗಿ ವಾಸವಿರುವವರು ಇದರ ಪ್ರಯೊಜನವನ್ನು ಪಡೆದು ಊರಿಗೆ ಮರಳಬಹುದು ಎನ್ನುವ ರೀತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ವಾಟ್ಸ್ ಆ್ಯಪ್ ಮತ್ತು ಫೇಸ್ ಬುಕ್ ನಲ್ಲಿ ತಪ್ಪು ಮಾಹಿತಿಯನ್ನು ರವಾನಿಸಲಾಗುತ್ತಿದ್ದು, ಈ ಪ್ರಚಾರದ ವಿರುದ್ದ ಕುವೈತ್ನ ಗೃಹ ಖಾತೆಯು ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ವಾಸದ ಪರವಾನಗಿ ಇಲ್ಲದೆ ದೇಶದಲ್ಲಿ ಉಳಿದುಕೊಂಡಿರುವ ವಿದೇಶಿಗಳು ಜ.29ರಿಂದ ಫೆ.24ರ ವರೆಗೆ ದಂಡ ಪಾವತಿಸಿ, ಇಖಾಮಾ ಕಾನೂನುಬದ್ಧಗೊಳಿಸಬಹುದು ಅಥವಾ ದಂಡ ಪಾವತಿಸದೆ ದೇಶವನ್ನು ತೊರೆಯ ಬಹುದು ಎಂದು ಪ್ರಚಾರ ಪಡಿಸಲಾಗಿತ್ತು.ಇದು 2018ರ ಜ. 29 ರಿಂದ ಕುವೈತ್ ಸರ್ಕಾರವು ಸಾರ್ವಜನಿಕ ಕ್ಷಮಾಪಣೆಯನ್ನು ಪ್ರಕಟಿಸಿದ ಸಂದರ್ಭದಲ್ಲಿ ಹರಿದಾಡಿದ ವಾರ್ತೆಯಾಗಿದೆ.
ಮೊದಲ ಹಂತದಲ್ಲಿ ರಿಯಾಯಿತಿಯನ್ನು ಫೆಬ್ರವರಿ 22 ರವರೆಗೆ ಜಾರಿಗೆ ತರಲಾಗಿದ್ದು, ನಂತರ ಏಪ್ರಿಲ್ 22 ರವರೆಗೆ ವಿಸ್ತರಿಸಲಾಗಿದ್ದವು. ಕಳೆದ ವರ್ಷದ ವಾರ್ತೆಯ ಲಿಂಕ್ ಕಂಡು ತಪ್ಪು ಗ್ರಹಿಸಿದ ಯಾರೋ ಕಳುಹಿಸಿದ ಧ್ವನಿ ಸಂದೇಶವು ಈ ವಾರ್ತೆಗೆ ಆಧಾರವಾಗಿರಬಹುದು ಎಂದು ಅರ್ಥೈಸಲಾಗಿದೆ. ಕೇರಳೀಯರು ಒಳಗೊಂಡಂತೆ ಅನಿವಾಸಿಗಳ ವಾಟ್ಸ್ ಆ್ಯಪ್ ಗ್ರೂಪುಗಳಲ್ಲಿ ಸುದ್ದಿ ಹರಡಿದ ನಂತರ ಸಾಮಾಜಿಕ ಕಾರ್ಯಕರ್ತರು ಸುದ್ದಿಯನ್ನು ಸರಿಪಡಿಸಿದ್ದಾರೆ. ಸಾರ್ವಜನಿಕರಿಗೆ ತಪ್ಪು ಮಾಹಿತಿ ರವಾನಿಸುವ ಇಂತಹ ಮೋಸದ ವರದಿಗಳು ವೈರಲ್ ಆದ ಕಾರಣ ಗೃಹ ಸಚಿವಾಲಯ ಈ ಬಗ್ಗೆ ಅಲ್ಲಗೆಳೆದು ಪತ್ರಿಕಾ ಪ್ರಕಟನೆ ಹೊರಡಿಸಿದೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ