ದುಬೈ: ದುಬೈಯಲ್ಲಿರುವ ಕಟ್ಟಡ ಮಾಲೀಕರು ತಮ್ಮ ಕಟ್ಟಡಗಳಲ್ಲಿನ ಬಾಡಿಗೆದಾರರಿಗೆ ಭದ್ರತಾ ಠೇವಣೆಗಳನ್ನು ಹಿಂದಿರುಗಿಸದ ಪ್ರಸಂಗಗಳು ಹೆಚ್ಚಾಗುತ್ತಿರುವುದಾಗಿ ವರದಿಯಾಗಿದೆ. ಇಲ್ಲ ಸಲ್ಲದ ನ್ಯಾಯಗಳ ನೆಪದಲ್ಲಿ ಮುಂಗಡ ಪಾವತಿಸಿದ ಮೊತ್ತವನ್ನು ನಿರಾಕರಿಸಲಾಗುತ್ತಿದೆ.
ಬಾಡಿಗೆ ಮಾಲೀಕರ ವಾರ್ಷಿಕ ಬಾಡಿಗೆಯ ಶೇಕಡಾ 5ರಷ್ಟು ಸೆಕ್ಯೂರಿಟಿ ಬಾಬ್ತಾಗಿ ಬಾಡಿಗೆದಾರರು ಮುಂಗಡವಾಗಿ ಪಾವತಿಸಬೇಕು. ಒಪ್ಪಂದ ಕೊನೆಗೊಳ್ಳುವಾಗ ಈ ಮೊತ್ತವನ್ನು ಹಿಂತಿರುಗಬೇಕೆಂದು ಕಾನೂನಿನಲ್ಲಿ ಉಲ್ಲೇಖವಿದೆ.
ಆದರೆ ಈ ಮೊತ್ತವು ಹಲವರಿಗೆ ಲಭಿಸುತ್ತಿಲ್ಲ. ಮುನ್ನೆಚ್ಚರಿಕೆಯಿಲ್ಲದೆ ಕಟ್ಟಡವನ್ನು ತೊರೆಯುವುದು ಮತ್ತು ಕಟ್ಟಡಕ್ಕೆ ಹಾನಿ ಉಂಟುಮಾಡಿರುವುದಾಗಿ ಕಾರಣಗಳನ್ನು ನೀಡಿ ಠೇವಣಿ ನಿರಾಕರಿಸಲಾಗುತ್ತದೆ. ರಿಯಲ್ ಎಸ್ಟೇಟ್ ಕಂಪನಿಗಳೊಂದಿಗೆ ತರ್ಕ ಉಂಟಾದರೂ, ಅನೇಕರು ಅಧಿಕಾರಿಗಳಿಗೆ ದೂರು ನೀಡುವುದಿಲ್ಲ ಎನ್ನಲಾಗಿದೆ.
ನಿವಾಸಕ್ಕೆ ಹಾನಿಯುಂಟಾದರೆ ದೊಡ್ಡ ಮಟ್ಟದ ಮೊತ್ತವನ್ನು ವಿಧಿಸಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಪರಿಹಾರವನ್ನು ನಿರ್ಧರಿಸಲು ಯಾವುದೇ ನಿರ್ದಿಷ್ಟ ಮಾನದಂಡಗಳಿಲ್ಲ. ನಿವಾಸ ಒಪ್ಪಂದ ಮಾಡುವಾಗ ಸರಿಯಾಗಿ ಓದಿದ ಬಳಿಕವೇ ಸಹಿ ಹಾಕುವಂತೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಭದ್ರತಾ ಠೇವಣೆಗಳನ್ನು ಅನಗತ್ಯವಾಗಿ ತಡೆಯದಂತೆ ಕಟ್ಟಡ ಮಾಲೀಕರನ್ನು ಮುನ್ಸಿಪಲ್ ಅಧಿಕಾರಿಗಳು ಎಚ್ಚರಿಸಿದ್ದಾರೆ. ಅನಗತ್ಯವಾಗಿ ಭದ್ರತಾ ಠೇವಣಿ ತಡೆಗಟ್ಟಿದರೆ ಆ ಬಗ್ಗೆ ದೂರನ್ನು ಸಲ್ಲಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ