janadhvani

Kannada Online News Paper

ದಾರುಲ್ ಹುದಾದಲ್ಲಿ ಕಿರು ಚಲನಚಿತ್ರ ಸ್ಪರ್ಧೆ-ವಿಷಾದ ವ್ಯಕ್ತಪಡಿಸಿದ ಜಿಫ್ರಿ ತಂಙಳ್

ಮಲಪ್ಪುರಂ: ಚೆಮ್ಮಾಡ್ ದಾರುಲ್ ಹುದಾ ಇಸ್ಲಾಮಿಕ್ ಅಕಾಡಮಿಯಲ್ಲಿ ನಡೆದ ‘ಸಿಬಾಖ’ ಪ್ರತಿಭೋತ್ಸವದಲ್ಲಿ ನಾಟಕ ಮತ್ತು ಕಿರು ಚಲನಚಿತ್ರ (ಶಾರ್ಟ್ ಫಿಲ್ಮ್ ) ರಚನೆ ಸ್ಪರ್ಧೆಗಳು ನಡೆಸಿದ ಬಗ್ಗೆ ಸಮಸ್ತ ಇಕೆ ವಿಭಾಗದ ಅಧ್ಯಕ್ಷರಾದ ಬಹು: ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ವಿಷಾದ ವ್ಯಕ್ತ ಪಡಿಸಿದ್ದು, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದ್ದಾರೆ.

ಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ನಡೆದ ಈ ಘಟನೆಯು ಸಂಸ್ಥೆಗೆ ಕಲಂಕ ತರುವ ಶ್ರಮವಾಗಿದೆ. ಸ್ಫರ್ಧೆಗೆ ನಿಗದಿತ ವಿಷಯವನ್ನು ನೀಡಲಾಗಿತ್ತಾದರೂ ನಿಯಮಗಳನ್ನು ಪಾಲಿಸದೆ ಈ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದಾರೆ. ಇತರ ಕ್ಯಾಂಪಸ್ ನ ವಿದ್ಯಾರ್ಥಿಗಳಾಗಿದ್ದಾರೆ ಇಸ್ಲಾಮಿಗೆ ವಿರುದ್ಧವಾದ ಸ್ಪರ್ಧೆಯನ್ನು ನಡೆಸಿದ್ದು, ಸಮಸ್ತದ ಆಶಯಕ್ಕೆ ನಿಲುಕದ ಕಾರ್ಯವಾಗಿದೆ ಇದು. ವಿದ್ಯಾರ್ಥಿಗಳ ಪ್ರಾಯವಾಗಿದೆ ಸಮಸ್ಯೆ, ಅವರಿಗೆ ಆವೇಶ ಉಂಟಾಗುವ ರೀತಿಯಲ್ಲಿ ಕಾರ್ಯಕ್ರಮವನ್ನು ನಡೆಸಿದ್ದಾರೆ ಎಂದು ಹೇಳಿದ ತಂಙಳ್ , ಇನ್ನು ಅಂತ್ಯದಿನದ ವರೆಗೆ ಈ ಸಂಸ್ಥೆಯಲ್ಲಿ ಇಂತಹ ಘಟನೆ ಸಂಭವಿಸದು ಎಂದು ಖಚಿತಪಡಿಸಿದ್ದಾರೆ.ತೀರ್ಪುಗಾರರಾಗಿ ಆಗಮಿಸಿದ ನೂತನವಾದಿಗಳು ಈ ಘಟನೆಯನ್ನು ಪ್ರಚಾರಪಡಿಸಿದ್ದಾರೆ ಎಂದ ತಂಙಳ್, ನೂತನವಾದಿಗಳಿಗೆ ಕಡಿವಾಣ ಹಾಕಬೇಕು, ನಿಯಂತ್ರಣ ರೇಖೆಯನ್ನು ದಾಟಲು ನೂತನವಾದಿಗಳಿಗೆ ಅವಕಾಶ ನೀಡಬಾರದೆಂದೂ ಒತ್ತಿ ಹೇಳಿದರು.

error: Content is protected !! Not allowed copy content from janadhvani.com