ಅಬುಧಾಬಿ: ಬಕ್ರೀದ್ ಹಬ್ಬದ ನಿಮಿತ್ತ ಯುಎಇಯ ವಿವಿಧ ಜೈಲುಗಳಲ್ಲಿರುವ ಸಾವಿರಾರು ಕೈದಿಗಳನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಯುಎಇ ಅಧ್ಯಕ್ಷರು ಮತ್ತು ವಿವಿಧ ಎಮಿರೇಟ್ಗಳ ಆಡಳಿತಗಾರರು ಆದೇಶಿಸಿದ್ದಾರೆ. ಕಾರುಣ್ಯ ಮತ್ತು ಸಾಮಾಜಿಕ ಐಕ್ಯತೆಯನ್ನು ಬೆಳೆಸುವ ಹಾಗೂ ಕೈದಿಗಳಿಗೆ ಜೀವನದಲ್ಲಿ ಎರಡನೇ ಅವಕಾಶ ನೀಡುವ ಭಾಗವಾಗಿ ಈ ಮಹತ್ತರ ಮಾನವೀಯ ಕ್ರಮ ಕೈಗೊಳ್ಳಲಾಗಿದೆ.
ಯುಎಇ ಅಧ್ಯಕ್ಷರಾದ ಶೈಖ್ ಮುಹಮ್ಮದ್ ಬಿನ್ ಝಾಯೆದ್ ಆಲ್ ನಹ್ಯಾನ್ ಅವರು ದೇಶದ ವಿವಿಧ ಸುಧಾರಣಾ ಮತ್ತು ಶಿಕ್ಷಾ ಕೇಂದ್ರಗಳಿಂದ 956 ಕೈದಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ಇವರು ವಿವಿಧ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವವರಾಗಿದ್ದಾರೆ. ಕೈದಿಗಳ ಬಿಡುಗಡೆಯ ಜೊತೆಗೆ, ಅವರ ಶಿಕ್ಷೆಯ ಅವಧಿಯಲ್ಲಿನ ಎಲ್ಲಾ ಆರ್ಥಿಕ ಹೊಣೆಗಾರಿಕೆಗಳು ಮತ್ತು ದಂಡಗಳನ್ನು ಸಹ ಪಾವತಿಸುವುದಾಗಿ ಯುಎಇ ಅಧ್ಯಕ್ಷರು ಘೋಷಿಸಿದ್ದಾರೆ. ಈ ಕ್ರಮವು ಕೌಟುಂಬಿಕ ಸಂಬಂಧಗಳನ್ನು ಗಟ್ಟಿಗೊಳಿಸಲು ಮತ್ತು ಸಮಾಜದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಕ್ರೀದ್ ಹಬ್ಬದ ಅಂಗವಾಗಿ ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಮ್ ಅವರು ವಿವಿಧ ದೇಶಗಳ 836 ಕೈದಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ರಾಸ್ ಅಲ್ ಖೈಮಾ ಆಡಳಿತಗಾರ ಶೈಖ್ ಸೌದ್ ಬಿನ್ ಸಕರ್ ಆಲ್ ಖಾಸಿಮಿ ಅವರು ಜೈಲಿನಲ್ಲಿ ಉತ್ತಮ ನಡವಳಿಕೆ ತೋರಿದ 443 ಕೈದಿಗಳಿಗೆ ಕ್ಷಮಾದಾನ ಘೋಷಿಸಿದ್ದಾರೆ. ಅಜ್ಮಾನ್ ಆಡಳಿತಗಾರ ಶೈಖ್ ಹುಮೈದ್ ಬಿನ್ ರಾಶಿದ್ ಆಲ್ ನುಐಮಿ 230 ಕೈದಿಗಳನ್ನು ಬಿಡುಗಡೆ ಮಾಡಲು ಸೂಚನೆ ನೀಡಿದ್ದಾರೆ.
ಶಾರ್ಜಾ ಆಡಳಿತಗಾರ ಶೈಖ್ ಡಾ. ಸುಲ್ತಾನ್ ಬಿನ್ ಮುಹಮ್ಮದ್ ಆಲ್ ಖಾಸಿಮಿ ಅವರು ಹಬ್ಬದ ನಿಮಿತ್ತ 227 ಕೈದಿಗಳಿಗೆ ಬಿಡುಗಡೆ ಭಾಗ್ಯ ಕಲ್ಪಿಸಿದ್ದಾರೆ. ಉಮ್ ಅಲ್ ಕುವೈನ್ ಆಡಳಿತಗಾರ ಶೈಖ್ ಸೌದ್ ಬಿನ್ ರಶೀದ್ ಅಲ್ ಮುಅಲ್ಲಾ ಕೂಡ ಜೈಲಿನಿಂದ ಹಲವು ಕೈದಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಬಕ್ರೀದ್ ‘ಈದ್ ಅಲ್-ಅದ್ಹಾ’ ; 382 ಕೈದಿಗಳ ಬಿಡುಗಡೆ- ಒಮಾನ್ ದೊರೆ ಆದೇಶ
‘ಲಬ್ಬೈಕ್ ಅಲ್ಲಾಹುಮ್ಮ ಲಬ್ಬೈಕ್’ ಪುಣ್ಯ ಭೂಮಿಯಲ್ಲಿ 20 ಲಕ್ಷಕ್ಕೂ ಹೆಚ್ಚು ಯಾತ್ರಿಕರ ಸಮಾಗಮ- ಇಂದು ‘ಅರಫಾತ್ ಸಂಗಮ’
ಲಬ್ಬೈಕ್ ಮಂತ್ರ ಘೋಷಗಳಲ್ಲಿ ಲೀನವಾದ ಮಿನಾ ಕಣಿವೆ; ನಾಳೆ ಅರಫಾ ದಿನ
139 ವರ್ಷಗಳ ಬಳಿಕ ಇದೇ ಮೊದಲು; ಬಕ್ರೀದ್ ದಿನದಂದು ಅಪರೂಪದ ಖಗೋಳ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ ಮಕ್ಕಾ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವೈದ್ಯಕೀಯ ಕ್ಷೇತ್ರಕ್ಕೆ ಗಂಭೀರ ಸವಾಲು : ಎಸ್ಸೆಸ್ಸೆಫ್ ಬೆಂಗಳೂರು
ಹಜ್ ವಂಚನೆ: ಭಾರತೀಯರು ಸೇರಿದಂತೆ ನಾಲ್ವರ ಬಂಧನ
ಅಲ್ಲಾಹನ ಅತಿಥಿಗಳ ಹರಿವು… ಹಜ್ಗೆ ಇನ್ನು ಕೇವಲ 2 ದಿನಗಳು ಬಾಕಿ
‘ನೋ ಕ್ಯಾಶ್’ ; ಜೂನ್ ಒಂದರಿಂದ ದುಬೈನಲ್ಲಿ ಪಾರ್ಕಿಂಗ್ ಮೀಟರ್ಗಳಲ್ಲಿ ನಗದು ವ್ಯವಹಾರ ರದ್ದು
ಕಾನೂನುಬದ್ಧ ಬಲಿದಾನಕ್ಕೆ ಪೊಲೀಸ್ ಸಂರಕ್ಷಣೆ ನೀಡಿ- ಗೃಹ ಸಚಿವರಿಗೆ ಮೌಲಾನಾ ಶಾಫಿ ಸಅದಿ ಮನವಿ
‘ನನ್ನನ್ನು ತಿಹಾರ್ ಜೈಲಿಗೆ ಹಾಕಬಹುದು’; ಆತಂಕ ಹಂಚಿಕೊಂಡ ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ