ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ದಮ್ಮಾಂ ವಲಯ ಅಧೀನದ ಅಲ್ ಖೋಬರ್ ಘಟಕದ ವತಿಯಿಂದ ರಮಳಾನ್ ಮೀಟ್ ದಿನಾಂಕ 28, ಫೆಬ್ರವರಿ 2026 ಶನಿವಾರ ಮುಸ್ಸಂಜೆ ಅಲ್ ಖೋಬರ್ ಗಲ್ಫ್ ದರ್ಬಾರ್ ರೆಸ್ಟೋರೆಂಟ್ ನಲ್ಲಿ ನಡೆಯಿತು.
ಉಸ್ತಾದ್ ಉಸ್ಮಾನ್ ಸಅದಿ ನೆಲ್ಯಾಡಿ ಪ್ರಾರ್ಥನೆ ಗೈದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಿಕೆಯಸ್ಸಿ ಅಲ್ ಖೋಬರ್ ಘಟಕದ ಅಧ್ಯಕ್ಷ ಉಸ್ಮಾನ್ ಹೊಸಂಗಡಿ ಮಾತನಾಡುತ್ತಾ ಡಿಕೆಯಸ್ಸಿಯ ಅಭಿವೃಧ್ಧಿ ಕಾರ್ಯಗಳಲ್ಲಿ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಿಕೆಯಸ್ಸಿ ಕೇಂದ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಮೂಳೂರು ರವರು ಪ್ರಸಕ್ತ ನಮ್ಮ ಮುಂದಿರುವ ಡಿಕೆಯಸ್ಸಿ ಯೋಜನೆಗಳ ಬಗ್ಗೆ ವಿವರಿಸಿದರು.


ರಮಳಾನ್ ನಲ್ಲಿ ಡಿಕೆಯಸ್ಸಿಗಾಗಿ ಪ್ರವರ್ತನೆ, ಮುಡಿಪು ಪ್ರದೇಶದಲ್ಲಿ ಡಿಕೆಯಸ್ಸಿಯ ಮುಂದಿನ ಯೋಜನೆಗಾಗಿ ಸ್ಥಳ ಖರೀದಿ ಬಗ್ಗೆ ಹಾಗೂ ಊರಿನಲ್ಲಿ ಮರ್ಕಝ್ ನ
ಖರ್ಚು ವೆಚ್ಚಕ್ಕಾಗಿ ಮಾಸಿಕ ವಾಗಿ ನೀಡುವ ಉಸ್ರತುಲ್ ಇಹ್ಸಾನ್ ಪದ್ದತಿ ಬಗ್ಗೆ ವಿವರಣೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಿಕೆಯಸ್ಸಿ ಕೇಂದ್ರ ಸಮಿತಿ ಹಣಕಾಸು ಕಾರ್ಯದರ್ಶಿ ದಾವೂದ್ ಕಜಮಾರ್ ರವರು ವಿಶೇಷವಾಗಿ ಯುವ ಸದಸ್ಯರು ಡಿಕೆಯಸ್ಸಿಯೊಂದಿಗೆ ಕೈ ಜೋಡಿಸುವ ಮೂಲಕ ಅದರ ಅಭಿವೃಧ್ಧಿಗೆ ದುಡಿದು ಬಲಪಡಿಸಬೇಕೆಂದು ವಿನಂತಿಸಿದರು.


ಕಾರ್ಯಕ್ರಮದ ಪ್ರಾರಂಭದಲ್ಲಿ ಮಾಷ್ಟರ್ ಮುಹಮ್ಮದ್ ಶಹೀಂ ಇಬ್ನ್ ಅಬ್ದುರ್ರಶೀದ್ ಬೆಳ್ಳಾರೆ ಸೂರ: ಫಾತಿಹ ಪಠಿಸಿದರು.
ಡಿಕೆಯಸ್ಸಿ ಕೇಂದ್ರ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಸನ್ ಮೂಡುತೋಟ, ಡಿಕೆಯಸ್ಸಿ ಹಿತೈಷಿ ಅನ್ವರ್ ಸಾದಾತ್, ಉಸ್ತಾದ್ ಮೂಸಾ ಝುಹ್ರಿ, ಡಿಕೆಯಸ್ಸಿ ದಮ್ಮಾಂ ಘಟಕದ ಅಧ್ಯಕ್ಷ ಜಮಾಲ್ ಸ್ವಾಲಿಹ್ ಕಣ್ಣಂಗಾರ್, ತುಖ್ಬ ಘಟಕದ ಅಧ್ಯಕ್ಷ ಮುಹಮ್ಮದ್ ಹನೀಫ್ ಜೆಪ್ಪು, ದಮ್ಮಾಂ ವಲಯ ಮಾಜಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ ಸಭೆಯಲ್ಲಿ ಉಪಸ್ಥಿತರಿದ್ದರು.
ಡಿಕೆಯಸ್ಸಿ ದಮ್ಮಾಂ ಅಧೀನ ಕ್ಕೊಳಪಟ್ಟ ಅಲ್ ಖೋಬರ್, ದಮ್ಮಾಂ, ಹಾಗೂ ತುಖ್ಬ ಘಟಕದ ಸದಸ್ಯರು ಹಾಜರಿದ್ದರು.
ಪ್ರಾರಂಭದಲ್ಲಿ ಘಟಕದ ಹಣಕಾಸು ಕಾರ್ಯದರ್ಶಿ ಅಶ್ರಫ್ ಚಿಕ್ಕ ಮಗಳೂರು ಸ್ವಾಗತಿಸಿ,
ಕೊನೆಯಲ್ಲಿ ಡಿಕೆಯಸ್ಸಿ ಅಲ್ ಖೋಬರ್ ಘಟಕದ ಉಪಾಧ್ಯಕ್ಷ ಮುಹಮ್ಮದ್ ಮಲೆಬೆಟ್ಟು ಧನ್ಯವಾದ ಅರ್ಪಿಸಿದರು. ಡಿಕೆಯಸ್ಸಿ ಮೀಡಿಯಾ ವಿಂಗ್ ಮುಖ್ಯಸ್ಥ ಇಸ್ಮಾಯೀಲ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
















ಇನ್ನಷ್ಟು ಸುದ್ದಿಗಳು
ಮೋದಿ ಸರ್ಕಾರಕ್ಕೆ ಕಳೆದ 12 ವರ್ಷಗಳಲ್ಲಿ ಎದುರಾದ ಮೊದಲ ಹಿನ್ನಡೆ- ಸಂವಿಧಾನ ತಿದ್ದುಪಡಿ ಮಸೂದೆಗೆ ಸೋಲು
ಬೈತಡ್ಕ ಉರೂಸ್: ಸಾವಿರ ಕೆಜಿ ಸಕ್ಕರೆ ಸಂಗ್ರಹಿಸಿ ಗಮನ ಸೆಳೆದ ‘ಮಾಲೆಂಗ್ರಿ ಫ್ರೆಂಡ್ಸ್’ ವಾಟ್ಸಾಪ್ ತಂಡ
ಡಿಕೆಯಸ್ಸಿ ತಬೂಕ್ ಘಟಕದ ವಾರ್ಷಿಕ ಮಹಾಸಭೆ
ಪಶ್ಚಿಮ ಏಷ್ಯಾ ಬಿಕ್ಕಟ್ಟು: ಗಲ್ಫ್ ರಾಷ್ಟ್ರಗಳಿಂದ 8.43 ಲಕ್ಷ ಭಾರತೀಯರು ವಾಪಸ್
ಶಾಫಿ ಸಅದಿ ವಿರುದ್ಧ ಸುಳ್ಳು ಸುದ್ದಿ ಪ್ರಕಟ: ‘ಮಿನಾರಂ’ ಡಿಜಿಟಲ್ ಪತ್ರಿಕೆಯ ವಿರುದ್ಧ ಮಾನನಷ್ಟ ಮೊಕದ್ದಮೆ
ಎಪ್ರಿಲ್ 12: ಮಾದರಿ ಮದುವೆ ಅಭಿಯಾನ ಸಮಾರೋಪದ ಪ್ರಚಾರಾರ್ಥ ಸಾಂಘಿಕ ನಾಯಕರ ಸಭೆ
ಕಾಟಿಪಳ್ಳ: ನೂತನ ಮದ್ರಸ ಕಟ್ಟಡ ಉದ್ಘಾಟನಾ ಸಮಾರಂಭ- ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮ
ಶರಫುಲ್ ಉಲಮಾ 7ನೇ ವಾರ್ಷಿಕ ಅನುಸ್ಮರಣೆ- ಮೇ 13, 14 ರಂದು ವಿವಿಧ ಕಾರ್ಯಕ್ರಮ
ಬಶೀರ್ ಕಿನ್ಯ ಅವರಿಗೆ ಸಮ್ಮೇಳನಾಧ್ಯಕ್ಷತೆಯ ಗೌರವ: ಸಾಹಿತ್ಯ ಲೋಕದ ಬಹುಭಾಷಾ ಪಂಡಿತನಿಗೆ ಒಲಿದ ಮನ್ನಣೆ
ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ಉಚಿತ ಪ್ರಯಾಣ- ಐತಿಹಾಸಿಕ ‘ಮಕ್ಕಳ ಸ್ನೇಹಿ ಸಾರಿಗೆ’ ಯೋಜನೆ ಸಿದ್ಧ