ಬೆಳ್ಳಾರೆ : ದಾರುಲ್ ಹಿಕ್ಮ ಎಜುಕೇಷನ್ ಸೆಂಟರ್ ಬೆಳ್ಳಾರೆ ಇದರ ಪ್ರಧಾನ ಕಾರ್ಯದರ್ಶಿ ದಾವೂದ್ ಸಹದಿ ಬೆಳ್ಳಾರೆ ಅವರ ತಾಯಿಯ 40 ನೇ ದುಃವಾ ಮಜ್ಲಿಸ್ ಹಾಗೂ ದಾರುಲ್ ಹಿಕ್ಮ ಹಿತೈಷಿಗಳ ಕುಟುಂಬದಿಂದ ಮರಣ ಹೊಂದಿದವರ ಹೆಸರಿನಲ್ಲಿ
ಸಂಸ್ಥೆಯ ಅಧ್ಯಕ್ಷರಾದ ಸಯ್ಯದ್ ಕಾಜೂರ್ ತಂಗಳ್ ಅವರ ನೇತೃತ್ವದಲ್ಲಿ ದಿನಾಂಕ 17-08-2025 ನೇ ಆದಿತ್ಯವಾರ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಗೆ ದಾನಿಗಳ ಸಹಾಯದಿಂದ ಸುಮಾರು 50,000 ರೂಪಾಯಿ ವೆಚ್ಚದಲ್ಲಿ ಹೊಸ ಸೌಂಡ್ ಸಿಸ್ಟಮ್ ಖರೀದಿಗೆ ಸಹಕರಿಸಿದ ದಾನಿಗಳಿಗೆ ವಿಶೇಷ ದುಃವಾ ಮಾಡಲಾಯಿತು.


ಕಾರ್ಯಕ್ರಮದಲ್ಲಿ ಸಂಸ್ಥೆಯ ಮುದರ್ರಿಸ್ ಹಾಫಿಲ್ ಉಸ್ತಾದ್,ಸದರ್ ಉಸ್ತಾದ್, ಮುಅಲ್ಲಿಮ್ ಉಸ್ತಾದ್ ,ಸಂಸ್ಥೆಯ ಉಪಾಧ್ಯಕ್ಷ ಮಹಮೂದ್ ಹಾಜಿ,ಪ್ರಧಾನ ಕಾರ್ಯದರ್ಶಿ ದಾವೂದ್ ಸಅದಿ, ಹಮೀದ್ ಅಲ್ಫಾ,ಹನೀಫ್ ಸಖಾಫಿ, ಸತ್ತಾರ್ ಸಖಾಫಿ,ಸುಲೈಮಾನ್ ಹಾಜಿ, ಹಸನ್ ಹಾಜಿ,ಮುಸ್ತಫ, ಅಝೀಝ್ ಉಮಿಕ್ಕಲ,ಸಂಶುದ್ಧೀನ್ ಝಂಝಂ,ಹನೀಫ್ ಹಾಜಿ ಇಂದ್ರಾಜೆ ಸಹಿತ ಕೇಂದ್ರ ಸಮಿತಿ ಸದಸ್ಯರು, ಬಶೀರ್ ಕೆ.ಎ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್,SჄS,SSF ನಾಯಕರಾದ ಮಹಮ್ಮದ್ ಹಾಜಿ ಕರಾವಳಿ,ಹಸನ್ ಕುರಿಯಾಜೆ, ಶಾಕಿರ್ ಬೆಳ್ಳಾರೆ, ಅನೀಸ್ ಬೆಳ್ಳಾರೆ ಸಹಿತ ಹಲವಾರು ನಾಯಕರು ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸದ ದಾರುಲ್ ಹಿಕ್ಮ ಸಂಸ್ಥೆಯ ಇಬ್ಬರು ಸಹಾಯಿಗಳಿಗೆ ಮೆಮೆಂಟೊ ನೀಡಿ ಗೌರವಿಸಲಾಯಿತು ಕೊನೆಯಲ್ಲಿ ಸೀರಣಿ ವಿತರಿಸಿ ಮೂರು ಸ್ವಲಾತ್ ನೊಂದಿಗೆ ಕಾರ್ಯಕ್ರಮ ಕೊನೆಗೊಳಿಸಲಾಯಿತು.
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ