ಮಂಗಳೂರು: ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಬಿಜೆಪಿ ಪಕ್ಷದ ನಾರಿ ಶಕ್ತಿ ಸಮಾವೇಶದಲ್ಲಿ ಮಾಳವಿಕಾ ಅವಿನಾಶ್ ರವರು ದ.ಕ.ಜಿಲ್ಲೆಯ ಜನರ ರಕ್ತ ಕೇಸರಿ ಎಂದು ಹೇಳಿದ್ದಾರೆ.
ಮಾಳವಿಕಾರವರು ಅರಿತಿಲ್ಲ ದ.ಕ.ಜಿಲ್ಲೆಯ ಜನರನ್ನು ಮತೀಯ ಸಂಕೇತ,ಚಿಹ್ನೆ, ಪದಬಳಕೆಗಳನ್ನು ಹರಿಬಿಟ್ಟು ಇಲ್ಲಿನ ಜನತೆಯನ್ನು ಆ ಕಾರಣಕ್ಕಾಗಿ ವಿಭಜಿಸಿ ಘರ್ಷಣೆಗೆ ಎಳೆದು ಹಾಕಿ, ಫಸಲು ಕೊಯ್ಯುವ ಕಾರ್ಯ ಎಂದು. ಮಾಳವಿಕಾ ಅವರು ತಿಳಿಯಲಿ, ದ.ಕ.ಜಿಲ್ಲೆಯ ಜನರ ರಕ್ತ ಕೇಸರಿ ಅಲ್ಲ,ಅದು ಕೆಂಪು ಆಗಿಯೇ ಉಳಿದಿದೆ . ಆದರೆ ಜಿಲ್ಲೆಯ ಅಸ್ಮಿತೆಯ ಬಗ್ಗೆ ಲವ ಲೇಶವೂ ತಿಳಿಯದ ಮಾಳವಿಕಾ ರವರ ಕಣ್ಣು ಹಳದಿ ಆಗಿದೆ, ಆದುದರಿಂದಲೇ ಮಾಳವಿಕಾ ರವರು ಕೇಸರಿ ಅಲ್ಲದ ತನ್ನ ರಕ್ತ ಕೆಂಪು ಎಂದು ಗೊತ್ತಿದ್ದರೂ ದ.ಕ.ಜಿಲ್ಲೆಯ ಜನರ ರಕ್ತದ ಬಣ್ಣವನ್ನು ಬದಲಿಸಲು ಹೊರಟಿದ್ದಾರೆ ಎಂದು ಕೆ.ಅಶ್ರಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಳವಿಕಾ ರಂತಹ ಹಳದಿ ಕಣ್ಣಿನ ನಾರಿಗಳು ಭಾರತದಲ್ಲಿರುವುದರಿಂದಲೇ ದ.ಕ.ಜಿಲ್ಲೆಯ ಜನರ ರಕ್ತವನ್ನು ಕಪ್ಪು ಬಣ್ಣಕ್ಕೆ ಹೆಪ್ಪು ಗಟ್ಟಿಸುವ ಈ ಹಿಂದಿನ ಹಲವು ಪ್ರಯತ್ನಗಳಿಂದಲೇ ಅಮಾಯಕ ಮುಗ್ಧ ಜನರು ಜಾತಿ ಧರ್ಮದ ಹೆಸರಲ್ಲಿ ಪ್ರಾಣ ಹಾನಿ ಗೊಳಗಾಗಲು ಕಾರಣ. ಮಾಳವಿಕಾ ಇನ್ನಾದರೂ ತನ್ನ ಹಳದಿ ಕಣ್ಣಿನಿಂದ ದ.ಕ.ಜಿಲ್ಲೆ ಮಾತ್ರವಲ್ಲ ಇಡೀ ದೇಶದ ಜನರ ರಕ್ತ ಕೆಂಪು ಎಂದು ಅರಿತು ಅದನ್ನು ಹೆಪ್ಪುಗಟ್ಟುವ ಕಪ್ಪು ಬಣ್ಣಕ್ಕೆ ತಿರುಗಿಸದಿರುವ ಕಾರ್ಯಕ್ಕೆ ಮುಂದಾಗಲಿ ಎಂದು ಕೆ.ಅಶ್ರಫ್( ಮಾಜಿ ಮೇಯರ್) ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.
















ಇನ್ನಷ್ಟು ಸುದ್ದಿಗಳು
ಹಜ್ ಯಾತ್ರಿಕರಿಗೆ ಡಿಜಿಟಲ್ ದಾಖಲೆಗಳ ಸೌಲಭ್ಯ- ಪಾಸ್ಪೋರ್ಟ್ಗಳ ಅಗತ್ಯವಿಲ್ಲ
ವೈದ್ಯಕೀಯ-ಇಂಜಿನಿಯರಿಂಗ್ ಕನಸುಗಳಾಚೆಗೆ ನಾಗರಿಕ ಸೇವೆಗಳತ್ತ ಯುವಶಕ್ತಿ ಮುಖ ಮಾಡಲಿ: ಇಕ್ಬಾಲ್ ಬಾಳಿಲ ಕರೆ
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ